ಮನೆ ಕಳೆದುಕೊಂಡ ಕುಟುಂಬಕ್ಕೆ ಕೈನಡು ಗ್ರಾಪಂ ಆಸರೆ!
– ಸಿಲಿಂಡರ್ ಸ್ಪೋಟದಿಂದ ಆಕಸ್ಮಿಕ ಬೆಂಕಿಗೆ ಸುಟ್ಟು ಹೋದ ಮನೆ
– ನೆರವಿಗೆ ಬಂದ ಕೈನಡು ಗ್ರಾಪಂ ಅಧ್ಯಕ್ಷ ಪ್ರಸನ್ನ ಕುಮಾರ್”
NAMMUR EXPRESS NEWS
ಹೊಸದುರ್ಗ: ಹೊಸದುರ್ಗ ತಾಲೂಕಿನ ಕೈನಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೆಂಗಸಂದ್ರ ಗ್ರಾಮದ ವಾಸಿ ರಮೇಶಣ್ಣ(ಕರೀಜೋಗಿ)ರವರ ಮನೆಯು ಆಕಸ್ಮಿಕ ಸಿಲಿಂಡರ್ ಸ್ಫೋಟದಿಂದ ಕಳೆದ ಜೂ.16ರಂದು ಮನೆ ಸಂಪೂರ್ಣ ಸುಟ್ಟುಹೋಗಿದ್ದರ ಪರಿಣಾಮವಾಗಿ ಕೈನಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನಕುಮಾರ್ ಆರ್ಥಿಕ ನೆರವು ನೀಡುವುದರ ಮುಖಾಂತರ ಮಾನವೀಯತೆ ಮೆರೆದಿದ್ದಾರೆ.
ಕೂಲಿ ನಾಲಿ ಮಾಡಿ ಚಿಕ್ಕದಾದ ಮನೆಯೆಂದನ್ನು ಕಟ್ಟಿಕೊಂಡು ತನ್ನ ಕುಟುಂಬದೊಂದಿಗೆ ಸುಖೇ ಜೀವನ ನಡೆಸುತ್ತಿದ್ದ ಖರೀಜೋಗಿ ರಮೇಶಣ್ಣ ನವರ ಮನೆ ಆಕಸ್ಮಿಕ ಸಿಲಿಂಡರ್ ಸ್ಫೋಟದಿಂದ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ರಮೇಶಣ್ಣ ಕುಟುಂಬ ಜೀವನ ನಡೆಸಲು ತಮ್ಮ ಬಳಿ ರಾಗಿ ಜೋಳ ಹಾಗೂ ಪಾತ್ರೆ ಇನ್ನಿತರ ಪರಿಕರಗಳು ಬೆಂಕಿಗೆ ಯಾವುದೇ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದವು.
ಕೈನಡು ಗ್ರಾಪಂ ನಿಂದ ನೆರವು!
ತಕ್ಷಣವೇ ಕೈನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರುಗಳಾದ ಶೈಲಜ ಬಸವರಾಜ್, ಸಾಕಿಬಾಯಿ, ಚಿದಾನಂದ, ಪಂ ಅ ಅಧಿಕಾರಿಗಳಾದ ಶ್ರೀಮತಿ ಶ್ರೀನಿಧಿ ಜಿ ಆರ್,ಕಾರ್ಯದರ್ಶಿಗಳಾದ ಶ್ರೀ ಹೆಚ್ ಮಂಜಣ್ಣ, ಹಾಗೂ ತಂಡದವರು ಈ ಕುಟುಂಬಕ್ಕೆ ಬೇಕಾದ ಪಾತ್ರೆ ದವಸ ಧಾನ್ಯ ಕೊಡುವುದರ ಮೂಲಕ ಗ್ರಾಮ ಪಂಚಾಯಿತಿಯ ಜವಾಬ್ದಾರಿಯನ್ನ ಮತ್ತಷ್ಟು ಹೆಚ್ಚಿಸಿದ್ದಾರೆ.
ನಿರಾಶ್ರಿತರಿಗೆ ಧನಸಹಾಯ, ನಿತ್ಯಬಳಕೆಯ ದಿನಸಿ ಸಾಮಗ್ರಿಗಳು, ಅಡುಗೆ ಮಾಡಲು ಪಾತ್ರೆ ಉಪಕರಣಗಳು, ಹಾಗೂ ಕುಟುಂಬದ ಎಲ್ಲಾ ಸದಸ್ಯರುಗಳಿಗೆ ವಸ್ತ್ರ(ಬಟ್ಟೆ)ಗಳನ್ನು ನೀಡಿ ವಸತಿ ಯೋಜನೆಯಡಿಯಲ್ಲಿ ಮನೆ ಕೊಡುವುದಾಗಿ ಭರವಸೆ ನೀಡಿ ಸಾಂತ್ವನ ಹೇಳಲಾಯಿತು, ಹಾಗೂ ನಿರಾಶ್ರಿತಕುಟುಂಬಕ್ಕೆ ಸಹಾಯಮಾಡಿದ ಗ್ರಾಮಸ್ಥರೆಲ್ಲರಿಗೂ ಗ್ರಾಮ ಪಂಚಾಯಿತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.