ಕರಾವಳಿ ಟಾಪ್ ನ್ಯೂಸ್ – ಧರ್ಮಸ್ಥಳ: ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಯುವಕ ಸಾವು; ಪೋಷಕರ ಆಕ್ರಂದನ – ಮಂಗಳೂರು: ಹೆಚ್ಚಾದ ಸೈಬರ್ ವಂಚನೆ : ಇಬ್ಬರು ಅರೆಸ್ಟ್ – ಉಪ್ಪಿನಂಗಡಿ: ರಿಕ್ಷಾದಲ್ಲಿ ಗಾಂಜಾ ಸಾಗಾಟ : ಆರೋಪಿಯ ಬಂಧನ. – ಕುಂದಾಪುರ: ಜಮೀನು ನೋಂದಣಿಗೆ ಹೋದ ಮಹಿಳೆ ಹೊಳೆಗೆ ಹಾರಿ ಆತ್ಮಹತ್ಯೆ NAMMUR EXPRESS NEWS ಧರ್ಮಸ್ಥಳ: ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಸಾವಿಗೀಡಾಗಿರುವ ಘಟನೆಯೊಂದು ಧರ್ಮಸ್ಥಳ ಗ್ರಾಮದ ಮುಂಡ್ರುಪಾಡಿಯಲ್ಲಿ ಜ.16ರಂದು ನಿವಾಸಿ ಮಿಥುನ್ ಕರ್ಕೇರ (25) ಎಂಬುವವರು ಸಾವಿಗೀಡಾಗಿದ್ದಾರೆ. ಯಾವುದೋ ಸಮಾರಂಭಕ್ಕೆಂದು ಮಂಗಳೂರಿನಿಂದ ಬಂದ ಯುವಕ ಕಲ್ಮಂಜ ನಿಡಿಗಲ್ ಸಮೀಪ ಬೈಕ್ ಸ್ಕಿಡ್ ರಸ್ತೆಗೆ ಬಿದ್ದು ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಗೆ ಯುವಕನಾಗಿದ್ದಾನೆ. ಮೃತರು ಖಾಸಗಿ ಬಸ್ ಮತ್ತು ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಗಲಿಕೆಯಿಂದ ಕಡ್ಡಾಯವಾಗಿ ಇವರೊಳಗಾಗಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.…
Author: Nammur Express Admin
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಶನಿ ದೇವನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಬಹಳ ಶುಭ ದಿನವಾಗಲಿದೆ. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ, ಆದರೆ ನೀವು ಕುಟುಂಬ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಓದು ಮತ್ತು ಬರವಣಿಗೆಯಲ್ಲಿ ಸಮಯ ಕಳೆಯಿರಿ. ಆರೋಗ್ಯವು ಉತ್ತಮವಾಗಿರುತ್ತದೆ. ** ವೃಷಭ ರಾಶಿ : ಇಂದು ಅಧಿಕ ಖರ್ಚುಗಳಿಂದ ಮನಸ್ಸು ಚಿಂತೆಗೀಡಾಗುತ್ತದೆ. ಪರಿಸ್ಥಿತಿಗಳು ಪ್ರತಿಕೂಲವಾಗಿವೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ನಿಮಗೆ ಬೆಂಬಲ ಸಿಗುತ್ತದೆ. ನಿಮ್ಮ ಪ್ರೀತಿಪಾತ್ರರ ಬೆಂಬಲದೊಂದಿಗೆ, ನೀವು ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಆದಾಯ ಮತ್ತು ಖರ್ಚಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು. ನಿಮ್ಮ…
ಟಾಪ್ 3 ನ್ಯೂಸ್ ಬೆಳ್ಳಂ ಬೆಳಗ್ಗೆ ರಾಜ್ಯದ ಹಲವು ಕಡೆ ಲೋಕಾಯುಕ್ತ ದಾಳಿ – ಬೆಂಗಳೂರು : ಬಿಎಂಟಿಸಿ ಬಸ್ ಚಾಲಕನ ಸಡನ್ ಬ್ರೇಕ್ಗೆ ಬಿದ್ದ ಮಹಿಳಾ ಕಂಡಕ್ಟರ್ – ಮಂಡ್ಯ : ರೈಲಿಗೆ ಸಿಲುಕಿ 17ಕ್ಕೂ ಹೆಚ್ಚು ಕುರಿಗಳು ಸಾವು NAMMUR EXPRESS NEWS ಬೆಳ್ಳಂ ಬೆಳಗ್ಗೆ ರಾಜ್ಯದ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ, ಬೆಳಗಾವಿ, ರಾಯಚೂರು ಸೇರಿ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಪಿಡಿಒ ಎಸ್.ಪಿ. ಹಿರೇಮಠ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಹೊಲಗೇರಿ ಗ್ರಾಮ ಪಂಚಾಯಿತಿ ಪಿಡಿಒ ಹಿರೇಮಠ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಐಷಾರಾಮಿ ಮನೆ, ಅಪಾರ ಪ್ರಮಾಣದ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಹಿರೇಮಠ ನಿವಾಸದ ಮೇಲೆ ದಾಳಿ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಲಕ್ಷ್ಮಿ ಕೃಪಕಟಾಕ್ಷದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಮೇಷ ರಾಶಿಯವರಿಗೆ ಅದೃಷ್ಟ ಕೈಕೊಡಲಿದೆ. ಅತಿಯಾದ ಖರ್ಚು ಮನಸ್ಸನ್ನು ಸ್ವಲ್ಪ ತೊಂದರೆಗೊಳಿಸುತ್ತದೆ. ನೀವು ಕೆಲಸದ ಸ್ಥಳದಲ್ಲಿ ಹೆಚ್ಚು ಶ್ರಮಿಸಬೇಕಾಗಬಹುದು. ಉದ್ಯೋಗ ಸಂದರ್ಶನದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ನಿಮಗೆ ಸರ್ಕಾರದಿಂದ ಬೆಂಬಲ ಸಿಗುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ನಿಮಗೆ ಬೆಂಬಲ ಸಿಗುತ್ತದೆ. ಅವಮಾನವಾಗುವ ಭಯವಿರುತ್ತದೆ. ** ವೃಷಭ ರಾಶಿ : ವೃಷಭ ರಾಶಿಯವರಿಗೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಬಹುದು. ಆದರೆ, ಆತ್ಮವಿಶ್ವಾಸದ ಕೊರತೆ ಇರುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಂದರೆಗಳು ಉಂಟಾಗಬಹುದು. ಕೆಲವು ಕುಟುಂಬ ಕೆಲಸಗಳು ಮತ್ತೆ ಪ್ರಾರಂಭವಾಗಬಹುದು. ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಪ್ರಯಾಣದಲ್ಲಿ ಲಾಭ…
ಮಂಗಳೂರು: ನಾಳೆ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ಕರಾವಳಿಯಾದ್ಯಂತ ತೆರೆಗೆ – ಕರಾವಳಿಯಾದ್ಯಂತ ಏಕಕಾಲದಲ್ಲಿ ತೆರೆ ಕಾಣಲಿರುವ ತುಳು ಚಿತ್ರ – ತುಳು ಸಿನೆಮಾ ಪ್ರೋತ್ಸಾಹಿಸುವ ದೃಷ್ಟಿಯಿಂದ ವಿಶೇಷ ಆಫರ್ ಲಭ್ಯ NAMMUR EXPRESS NEWS ಮಂಗಳೂರು: ಕೋಸ್ಟಲ್ವುಡ್ನಲ್ಲಿ ಯಶಸ್ವಿ ಪ್ರದರ್ಶನ ಕಂಡಿರುವ “ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ಸಿನಿಮಾ ತಂಡದ ಬಹುನಿರೀಕ್ಷಿತ ಎರಡನೇ ಸಿನೆಮಾ “ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಜ.31ರಿಂದ ಕರಾವಳಿಯಾದ್ಯಂತ ಏಕಕಾಲದಲ್ಲಿ ತೆರೆ ಕಾಣಲಿದೆ. ಚಿತ್ರದ ನಿರ್ದೇಶಕ ರಾಹುಲ್ ಅಮೀನ್ ಅವರು ಮಂಗಳೂರು ಮತ್ತು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೋಹನ್ ಕಾರ್ಪೊ ರೇಶನ್ ಅರ್ಪಿಸುವ, ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್, ಎಚ್.ಪಿ.ಆರ್. ಫಿಲ್ಮ್ಸ್ ಹರಿಪ್ರಸಾದ್ ರೈ ಸಹಯೋಗದಲ್ಲಿ ಹಾಗೂ ಆನಂದ್ ಎನ್. ಕುಂಪಲ ನಿರ್ಮಾಣದಲ್ಲಿ ಸಿನೆಮಾ ತಯಾರಾಗಿದೆ ಎಂದು ತಿಳಿಸಿದ್ದಾರೆ. ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಮಾಲ್ನ ಬಿಗ್ ಸಿನೆಮಾಸ್, ಪಿವಿಆರ್, ಸಿನೆಪೊಲಿಸ್, ಭಾರತ್ ಸಿನೆಮಾಸ್ ದೇರಳಕಟ್ಟೆ, ಪುತ್ತೂರು, ಪಡುಬಿದ್ರಿ, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನೆಮಾಸ್, ಮಣಿಪಾಲದಲ್ಲಿ…
ಬೆಳುವಾಯಿಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ – ಜ.31ರಂದು ಪೌರಾಣಿಕ ಯಕ್ಷಗಾನ ಬಯಲಾಟ – ಮೀನಾ ಸುಬ್ಬಣ್ಣ ಕನ್ನಡ ಮತ್ತು ಕುಟುಂಬಸ್ಥರ ಸ್ವಾಗತ NAMMUR EXPRESS NEWS ಕಾರ್ಕಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಮೇಳದವರಿಂದ ಕುಕ್ಕುಡೇಲು ಅಯ್ಯಪ್ಪ ಮಂದಿರ ಬಳಿ ಕಾಂತಾವರ ಕ್ರಾಸ್ ಬೆಳುವಾಯಿಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಎಂಬ ಪುಣ್ಯ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. ಜ.31ರಂದು ಶುಕ್ರವಾರ ರಾತ್ರಿ 7.00 ರಿಂದ ಕುಕ್ಕುಡೇಲು ಅಯ್ಯಪ್ಪ ಮಂದಿರ ಬಳಿ ಕಾಂತಾವರ ಕ್ರಾಸ್ ಬೆಳುವಾಯಿ ಸಹೃದಯಿ ಕಲಾಭಿಮಾನಿ, ಹಿತೈಷಿ ಬಂಧುಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಮೀನಾ ಸುಬ್ಬಣ್ಣ ಕನ್ನಡ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರ ಶ್ರೀ ಚಾಮುಂಡೇಶ್ವರಿ ಕೃಪಾ ಕಾಂತಾವರ ಕ್ರಾಸ್ ಬೆಳುವಾಯಿ ಇವರು ಅಪೇಕ್ಷಿಸಿದ್ದಾರೆ.
100 ಬೆಡ್ ಆಸ್ಪತ್ರೆಯಂತೂ ಆಗಿಲ್ಲ ಆಸ್ಪತ್ರೆಗೆ ವೈದ್ಯರನ್ನಾದರೂ ಕೊಡಿ..!!? – ತಕ್ಷಣ ಇನ್ನಿಬ್ಬರು ವೈದ್ಯರನ್ನು ನೀಡಿ ಎಂದು ಡಿ.ಹೆಚ್.ಓ ಗೆ ಮನವಿ ಸಲ್ಲಿಸಿಕೆ – ವೈದ್ಯರನ್ನು ನೇಮಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ.. NAMMUR EXPRESS NEWS ಶೃಂಗೇರಿ: ಇಲ್ಲಿನ ತಾಲೂಕು ಆಸ್ಪತ್ರೆಗೆ ಅಗತ್ಯವಿರುವ ಇಬ್ಬರು ವೈದ್ಯರನ್ನು ಕೂಡಲೇ ನೇಮಿಸಿ ಸಾರ್ವಜನಿಕರಿಗೆ ನೆರವಾಗುವಂತೆ ತಾಲೂಕಿನ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್ ಕಿಗ್ಗಾ, ರಾಜೇಶ್ ದ್ಯಾವಂಟು, ಗಿರೀಶ್ ಹುಕ್ಳಿ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸುನಿಲ್ ಸಂಪೆಕೊಳಲು, ಸಚಿನ್, ರೈತ ಮೋರ್ಚಾ ಅಧ್ಯಕ್ಷ ರಾಜೇಶ್ ಮೇಗಳಬೈಲ್ ಹಾಗೂ ಇತರರು ಡಿ.ಹೆಚ್.ಓ ಗೆ ಮನವಿ ಸಲ್ಲಿಸಿದ್ದಾರೆ. ತಾಲೂಕಿಗೆ 100 ಬೆಡ್ ಆಸ್ಪತ್ರೆ ಮಂಜೂರಾಗಿ ವರ್ಷಗಳೇ ಕಳೆದರೂ ಆಸ್ಪತ್ರೆಯಂತೂ ಆಗಲಿಲ್ಲ ಸದ್ಯಕ್ಕೆ ಆಗತ್ಯವಿರುವ ವೈದ್ಯರನ್ನಾದರೂ ನೀಡಿ ಎಂದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಮೂವರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದು ಅಗತ್ಯ ವೈದ್ಯರಿಲ್ಲದೇ ಸಾರ್ವಜನಿಕರಿಗೂ ತೀವ್ರ ತೊಂದರೆಯಾಗಿದೆ. ಕೂಡಲೇ ಆಸ್ಪತ್ರೆಗೆ ಅಗತ್ಯವಿರುವ ಇಬ್ಬರು ವೈದ್ಯರನ್ನಾದರೂ ನೇಮಿಸಿ ಸಾರ್ವಜನಿಕರಿಗಾಗುತ್ತಿರುವ ತೊಂದರೆ ತಪ್ಪಿಸುವಂತೆ…
ತೀರ್ಥಹಳ್ಳಿಯಲ್ಲಿ ಗ್ರಾಮ ಪರಿವಾರ ದೇವರುಗಳ ಜೀರ್ಣೋದ್ಧಾರ ಕಾರ್ಯ! – ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಗ್ರಾಮಸ್ಥರೆಲ್ಲರ ಒಟ್ಟುಗೂಡಿ ವಿಮರ್ಶೆ! – ಮುಂದಿನ ದೇವಸ್ಥಾನದ ಕಾರ್ಯಕ್ಕೆ ಸಹಕಾರ ನೀಡಬೇಕಾಗಿ ಈ ಮೂಲಕ ವಿನಂತಿ NAMMUR EXPRESS NEWS ತೀರ್ಥಹಳ್ಳಿ: ಚೌಡೇಶ್ವರಿ, ಶ್ರೀ ನಾಗಬ್ರಹ್ಮ ದೇವಸ್ಥಾನ ಜೀರ್ಣೋದ್ದಾರ ಸಮಿತಿ, ಯಡೇಹಳ್ಳಿಕೆರೆ-ಇಂದಿರಾನಗರ-ಗಾಂಧಿನಗರ-ಸಿದ್ದೇಶ್ವರ ಬಡಾವಣೆ, ತೀರ್ಥಹಳ್ಳಿಯಲ್ಲಿ ಗ್ರಾಮ ದೇವರುಗಳಾದ ಶ್ರೀ ಚೌಡೇಶ್ವರಿ ಶ್ರೀ ನಾಗಬ್ರಹ್ಮ ಪರಿವಾರ ದೇವರುಗಳ ಅನುಗ್ರಹದಿಂದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಜ. 29 ರಂದು ಬುಧವಾರ ಅಪಮೃತ್ಯು ಪರಿಹಾರ, ಆರೋಗ್ಯ ಪ್ರಾಪ್ತಿ, ದೀರ್ಘಾಯುಷ್ಯ ಪ್ರಾಪ್ತಿಯ ಸಂಕಲ್ಪದಿಂದ “ಸಪ್ತ ದ್ರವ್ಯ ಮೃತ್ಯುಂಜಯ ಹೋಮ ಹಾಗೂ ಸಾಮೂಹಿಕ ಕುಂಕುಮಾರ್ಚನೆ” ಲೋಕಕಲ್ಯಾಣಾರ್ಥವಾಗಿ ನೆರವೇರಿತು. ಪ್ರಭಾವಶಾಲಿಯಾಗಿರುವ ಈ ದೇವಸ್ಥಾನದ ಗುಡ್ಡದ ತಪ್ಪಲಿನಲ್ಲಿ 200, 300 ವರ್ಷಗಳಿಂದ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾ ಬಂದಿದ್ದು, ಇದೀಗ ತಪ್ಪಲ್ಲಿನಲ್ಲೇ ಗ್ರಾಮಸ್ಥರು ಮೂರು ನಾಲ್ಕು ವರ್ಷಗಳ ಕೆಳಗೆ ಅತಿದೃಷ್ಟಿಯಿಂದ ಮೇಲ್ಭಾಗದ ಗುಡ್ಡ ಜರಿದು ದೇವಸ್ಥಾನ ಸಂಪೂರ್ಣ ಹಾನಿಯಾಗಿತ್ತು. ಆದ್ದರಿಂದ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ದೇವಸ್ಥಾನದ ವಿಮರ್ಶೆಯನ್ನು ದೇವಸ್ಥಾನದ…
ಚಿಕ್ಕಮಗಳೂರು ಟಾಪ್ 4 ನ್ಯೂಸ್..!! – ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ – ಆರೋಗ್ಯ ಪೂರ್ಣ ಸಮಾಜದ ಗುರಿ ಹೊಂದಿದ್ದ ಬಿಜಿಎಸ್ – ಶ್ರೀ ಗುಣನಾಥ ಸ್ವಾಮೀಜಿ – ರೈಲು ಹಳಿಗೆ ಸಿಲುಕಿ ಯುವಕ ಸಾವು – ಚಿರತೆ ದಾಳಿಗೆ ದನದ ಕರು ಬಲಿ NAMMUR EXPRESS NEWS ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ..! ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಿಕ್ಕಮಗಳೂರು ಜಿಲ್ಲಾ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರ ಆಯ್ಕೆ ಮತ್ತು ಜಿಲ್ಲಾ ಮಾಸಿಕ ಸಭೆ ನಡೆಯಿತು. ಈ ಬಾರಿಯ ಜಿಲ್ಲಾ ಸಾಹಿತ್ಯ ಸಮ್ಮೇಳನವು ಮಾರ್ಚ್ 07 ಮತ್ತು 8 ರಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್ ತಿಳಿಸಿದರು. ಜಿಲ್ಲಾ ಸಮ್ಮೆಳನಕ್ಕೆ ಆಗಮಿಸುವುದರೊಂದಿಗೆ ತನು-ಮನ-ಧನ ಸಹಾಯ ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ. ಎಲ್ಲಾ ತಾಲೂಕುಗಳಿಂದ ಸಮ್ಮೇಳನದ ಅಧ್ಯಕ್ಷರ ಆಯ್ಕೆಗಾಗಿ ಹೆಸರುಗಳು ಬಂದಿದ್ದವು, ಕೊನೆಯದಾಗಿ ತರೀಕೆರೆ ತಾಲೂಕಿನ ರಂಗೇನಹಳ್ಳಿಯ ಡಾ…
ಟಾಪ್ 6 ನ್ಯೂಸ್ ಕರ್ನಾಟಕ – ಅಂಕೋಲಾ : ಬ್ಯಾಂಕ್ ನ ಹ್ಯಾಕ್ ಮಾಡಿ 33 ಲಕ್ಷ ದೋಚಿದ ಸೈಬರ್ ಕಳ್ಳರು ! – ರಾಯಚೂರು : ಕಾಲೇಜು ವಿದ್ಯಾರ್ಥಿನಿಯ ಕತ್ತು ಕೊಯ್ದು ಬರ್ಬರ ಹತ್ಯೆ..! – ಹಾಸನ : ಎಟಿಎಂ ಅನ್ನೇ ಕಳ್ಳತನ ಮಾಡಿದ ದುಷ್ಕರ್ಮಿಗಳು..! – ಮೈಸೂರು: ದೇವರಿಗೆ ಬಿಟ್ಟಿದ್ದ ಗೂಳಿ ಮೇಲೆ ಮಚ್ಚಿನಿಂದ ಹಲ್ಲೆ..! – ವಿಜಯಪುರ : ಮದ್ಯಪಾನದಲ್ಲಿ ಆ್ಯಸಿಡ್ ಬೆರೆಸಿ ಕುಡಿದ ವ್ಯಕ್ತಿ ಸಾವು – ಹಾಸನ : ಖಾಸಗಿ ಬಸ್ ಅಡ್ಡಗಟ್ಟಿ ಲಾಂಗ್ ಬೀಸಿದ ಹಾಸನದ ಪುಡಿ ರೌಡಿ NAMMUR EXPRESS NEWS ಅಂಕೋಲಾ : ಆರ್ಟಿಜಿಎಸ್ ಮೂಲಕ ಬೇರೆ ಖಾತೆದಾರರಿಗೆ ಹೋಗಬೇಕಿದ್ದ ಹಣವನ್ನು ಸೈಬರ್ ಕಳ್ಳರು ಹ್ಯಾಕ್ಸ್ ಮಾಡಿ 33,42,845 ಲಕ್ಷವನ್ನು ದೋಚಿರುವ ಘಟನೆ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನ ಕೇಂದ್ರ ಕಚೇರಿಯಲ್ಲಿ ನಡೆದಿದೆ. ಜ.24, 27ರಂದು ನಡೆದಿದೆ ಎಂದು ಅಂದಾಜಿಸಲಾಗಿದೆ. ಕಾರವಾರದಲ್ಲಿ ಸೈಬರ್ ಕ್ರೈಂ ವಿಭಾಗದ ಠಾಣೆಯಲ್ಲಿ ದೂರು…