ಸರ್ಕಾರಿ ಶಾಲೆ ದತ್ತು ಪಡೆದ ಸದ್ಗುರು ಸಂಸ್ಥೆ!
– ಹೊಸದುರ್ಗ ತಾಲೂಕಿನ ಜೋಡಿ ಶ್ರೀರಂಗಪುರ ಗೊಲ್ಲರಹಟ್ಟಿ ಸರ್ಕಾರಿ ಶಾಲೆಗೆ ಅಗತ್ಯ ಸಲಕರಣೆ ವಿತರಣೆ
– ಸದ್ಗುರು ಪ್ರದೀಪ್ ಸೇವೆಗೆ ಎಲ್ಲೆಡೆ ಮೆಚ್ಚುಗೆ
NAMMUR EXPRESS NEWS
ಹೊಸದುರ್ಗ: ಹೊಸದುರ್ಗ ತಾಲೂಕಿನ ಜೋಡಿ ಶ್ರೀರಂಗಪುರ ಗೊಲ್ಲರಹಟ್ಟಿ ಸರ್ಕಾರಿ ಶಾಲೆಯನ್ನು ಸದ್ಗುರು ಸಂಸ್ಥೆ ದತ್ತು ಸ್ವೀಕಾರ ಮಾಡಿಕೊಂಡು ಅಗತ್ಯ ಇರುವ ಪೀಠೋಪಕರಣಗಳನ್ನು ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಶಾಲಾ ಶಿಕ್ಷಕರು ಮತ್ತು ಊರಿನ ಯುವಕರ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು. ಈ ವೇಳೆ ಸದ್ಗುರು ಸಂಸ್ಥೆಯ ಮುಖ್ಯಸ್ಥರಾದ ಸದ್ಗುರು ಪ್ರದೀಪ್ ಸೇರಿದಂತೆ ಗ್ರಾಮಸ್ತರು, ಎಸ್.ಡಿ ಎಂಸಿ ಪ್ರಮುಖರು ಹಾಜರಿದ್ದರು. ಈಗಾಗಲೇ ಶಿಕ್ಷಣ, ಸಮಾಜ ಸೇವೆ ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ಸದ್ಗುರು ಪ್ರದೀಪ್ ಸೇವೆ ಸಲ್ಲಿಸುತ್ತಿದ್ದಾರೆ.