ಒಡಿಶಾದಿಂದ ಬೆಂಗಳೂರಿಗೆ ರೈಲಿನಲ್ಲಿ ಗಾಂಜಾ!
– ರೈಲಿನಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ಸಾಗಾಟ: ವಶ
– ಚಿತ್ರದುರ್ಗ ಬಳಿ ಜಪ್ತಿ ಮಾಡಿದ ಪೊಲೀಸರು
– ದಾವಣಗೆರೆ ಪೊಲೀಸರ ತನಿಖೆ: ಬೃಹತ್ ಜಾಲ ಪತ್ತೆ!?
NAMMUR EXPRESS NEWS
ಚಿತ್ರದುರ್ಗ: ಒಡಿಶಾದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲಿನಲ್ಲಿ ಬರೋಬ್ಬರಿ 34 ಲಕ್ಷ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದೆ. ಟಾಟಾ ನಗರ’ ರೈಲಿನಲ್ಲಿ ದಾವಣಗೆರೆ ರೈಲ್ವೇ ಪೊಲೀಸರು ದಾಳಿ ನಡೆಸಿ, ಚಿತ್ರದುರ್ಗ ಬಳಿ ರೈಲಿನ ಬೋಗಿಯಲ್ಲಿ ಎರಡು ಬ್ಯಾಗುಗಳಲ್ಲಿದ್ದ 34 ಕೆ.ಜಿ.ಗಾಂಜಾ ಪತ್ತೆ ಮಾಡಿದ್ದಾರೆ.
ಒಂದು ಬೋಗಿಯಲ್ಲಿ ಗಾಂಜಾ ಇದ್ದ ಬ್ಯಾಗುಗಳನ್ನು ಇಟ್ಟು, ಮತ್ತೊಂದು ಬೋಗಿಯಲ್ಲಿ ಆರೋಪಿಗಳು ಪ್ರಯಾಣಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಗಾಂಜಾ ಬ್ಯಾಗುಗಳನ್ನು ವಶಕ್ಕೆ ಪಡೆದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಪರಾರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ದಾವಣಗೆರೆ ರೈಲ್ವೇ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ಇತ್ತೀಚಿಗೆ ರಾಜ್ಯದಲ್ಲಿ ಗಾಂಜಾ ಸೇವನೆ ಹೆಚ್ಚುತ್ತಿದ್ದೂ ಯುವ ಸಮುದಾಯದ ಬದುಕು ಬಲಿಯಾಗುತ್ತಿದೆ. ಬೆಂಗಳೂರು, ಮಂಗಳೂರು ಈ ಗಾಂಜಾ ಸೆಂಟರ್ ಆಗುತ್ತಿವೆ. ಅಪರಾಧ ಹೆಚ್ಚುತ್ತಿದೆ. ಈ ನಡುವೆ ಈ ದಾಳಿ ಮಹತ್ವ ಪಡೆದಿದ್ದು, ಉತ್ತರ ಭಾರತದ ಕಡೆಯಿಂದ ಗಾಂಜಾ ಪೂರೈಕೆ ಬಯಲಾಗಿದೆ. ಸರ್ಕಾರ ಈ ದಂಧೆ ಕಡಿವಾಣ ಹಾಕದಿದ್ದಲ್ಲಿ ಭವಿಷ್ಯ ಕತ್ತಲಾಗಲಿದೆ.