ವಿದ್ಯಾರ್ಥಿಗಳೇ..ಮಾದಕ ವ್ಯಸನ ಎಚ್ಚರ..!
– ವಿದ್ಯಾರ್ಥಿಗಳೇ ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದು ದುರಂತ
– ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಣ್ಣ ಅಸಮಾಧಾನ
– ಮಾದಕ ವ್ಯಸನ ಒಂದು ದೊಡ್ಡ ಪಿಡುಗು: ಸದ್ಗುರು ಪ್ರದೀಪ್
NAMMUR EXPRESS NEWS
ಹೊಸದುರ್ಗ: ವಿದ್ಯಾರ್ಥಿಗಳು ತನ್ನ ಜೀವನದ ಅಮೂಲ್ಯ ಸಮಯದಲ್ಲಿ ತನ್ನ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವುದರ ಬದಲು ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದು ದುರಂತವಾಗಿದೆ. ಮಾದಕ ವ್ಯಸನ ಮಾಡುವುದರಿಂದ ಕುಟುಂಬದ ನೆಮ್ಮದಿ ಹಾಳಾಗುತ್ತಿದೆ. ಸಮಾಜಘಾತಕ ಕೆಲಸದಲ್ಲಿ ವಿದ್ಯಾವಂತ ಯುವಕರು ಕೊಡಗುತ್ತಿರುವುದು ದುರಂತ ಎಂದು ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ಎನ್ ತಿಮ್ಮಣ್ಣ ಕಳವಳ ವ್ಯಕ್ತಪಡಿಸಿದರು.
ಹೊಸದುರ್ಗ ನಗರದ ದುರ್ಗಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಚಿತ್ರದುರ್ಗ ಹಾಗೂ ಹೊಸದುರ್ಗ ಪೊಲೀಸ್ ಇಲಾಖೆ ವತಿಯಿಂದ ನಡೆದ ಮಾದಕ ವಸ್ತು ನಿರ್ಮೂಲನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಮಾದಕ ವಸ್ತು ಬಳಕೆ ಮಾಡಿದವನಲ್ಲಿ ನಿರಂತರ ಒಂಟಿತನ ಕಾಡುತ್ತದೆ. ಮಾದಕ ವಸ್ತು ಸೇವನೆಯಿಂದ ಅನೈತಿಕ ಚಟುವಟಿಕೆ ಮಾಡುವಂತೆ ಪ್ರೇರೇಪಿಸುತ್ತದೆ. ಒಮ್ಮೆ ಮಾದಕದಷ್ಟು ಸೇವನೆ ಮಾಡಿದವರು ಅದರಿಂದ ಹೊರಬರಲು ಸಾಧ್ಯವಿಲ್ಲ.
ಕಾನೂನು ಉಲ್ಲಂಘನೆಗೆ ಏನೇನು ಶಿಕ್ಷೆ..?
ಗಾಂಜಾ ಅಫೀಮು ಸೇವಿಸಿದ ವ್ಯಕ್ತಿಗಳು ತನ್ನ ಮನಸ್ಸಿನ ನಿಯಂತ್ರಣವನ್ನು ಕಳೆದುಕೊಂಡು ಕಳ್ಳತನ ,ದರೋಡೆಯಂತಹ ಹೀನ ಕೃತ್ಯದಲ್ಲಿ ಭಾಗಿಯಾಗುತ್ತಾನೆ. ಮನೆಯಲ್ಲಿರುವ ಹಣ ಬಂಗಾರವನ್ನು ಕದಿಯುವ ಕೆಲಸಕ್ಕೆ ಮುಂದಾಗುತ್ತಾನೆ. ಮಾದಕ ವಸ್ತುಗಳನ್ನು ಬೆಳೆಸುವುದು ,ಸಾಗಾಣಿಕೆ ಮಾಡುವುದು ಮತ್ತು ಸೇವಿಸುವುದು ಅಕ್ಷಮ್ಯ ಅಪರಾಧವಾಗಿದ್ದು ಮಾದಕ ವ್ಯಸನ ಮಾಡಿ ಪೊಲೀಸ್ರಿಗೆ ಸಿಕ್ಕಿಬಿದ್ದರೆ 20 ವರ್ಷ ಜೈಲು ಮತ್ತು ಎರಡು ಲಕ್ಷ ಜುಲ್ಮಾನೆ ವಿದಿಸಲಾಗುವುದು.
ಅಪ್ರಾಪ್ತ ವಯಸ್ಕರೊಂದಿಗೆ ವಿವಾಹ ಅಕ್ಷ್ಯಮ್ಯ ಅಪರಾಧವಾಗಿದ್ದು ಪೋಕ್ಸೋ ಮೊಕದ್ದಮೆ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಲಾಗುವುದು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಒಮ್ಮೆ ಅಪಘಾತವಾದಾಗ ತಲೆಗೆ ಹೆಚ್ಚಿನ ಪೆಟ್ಟು ಬಿದ್ದು ಜೀವ ಹಾನಿಯಾಗುವ ಸಂಭವವಿರುತ್ತದೆ. ಹೆಸರನ್ನು ಮುಕ್ತ ಬದುಕು ಸುಖೀ ಕುಟುಂಬ ನೆಮ್ಮದಿ ಸಮಾಜಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಡಿ ಎಸ್ ಪ್ರದೀಪ್, ದುರ್ಗಾ ಐಟಿಐ ಪ್ರಾಚಾರ್ಯ ಪುನೀತ್, ಕಚೇರಿ ಅಧೀಕ್ಷಕ ಎಲ್ ಕೆ ಮನೋಹರ್, ಉಪನ್ಯಾಸಕ ಡಿ ಎಂ ಕುಮಾರ್, ರಾಜು, ಧನಂಜಯ ನಟರಾಜ್, ವೈ ಕುಮಾರ್, ರಮೇಶ್, ಹರೀಶ್ ,ಮಹೇಶ್, ಪದ್ಮಾವತಿ ,ಬಸವರಾಜ್, ಮುನಿಸ್ವಾಮಿ, ಗಿರಿಶ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಾದಕ ವ್ಯಸನ ಒಂದು ದೊಡ್ಡ ಪಿಡುಗು: ಸದ್ಗುರು ಪ್ರದೀಪ್
ಮಾದಕ ವ್ಯಸನ ಎಂಬುದು ಯುವಕರಿಗೆ ಒಂದು ದೊಡ್ಡ ಪಿಡುಗಾಗಿದೆ. ಸಂವಿಧಾನದಲ್ಲಿ ಕಠಿಣ ಶಿಕ್ಷೆ ಇದ್ದರೂ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು ಅದು ಕಾಲೇಜು ಹಂತದ ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತಿರುವುದು ದುರಂತ. ಮಾದಕ ವ್ಯಸನ ಮಾಡುವವರು ಮತ್ತು ಸೇವಿಸುವವರು ತಮ್ಮ ಗಮನಕ್ಕೆ ಬಂದರೆ ತಕ್ಷಣ ಹೊಸದುರ್ಗ ಪೊಲೀಸ್ ಠಾಣೆಯ ಅಧಿಕಾರಿಗಳ ಗಮನಕ್ಕೆ ತರುವುದು ಒಳಿತು. ಒಂದು ಕುಟುಂಬದಲ್ಲಿ ಒಬ್ಬ ವ್ಯಸನಿ ಇದ್ದರೆ ಅವನ ಕುಟುಂಬ ಸರ್ವನಾಶವಾಗುವವರೆಗೆ ಆ ವ್ಯಸನಬೆಂಬುದು ಅವನನ್ನ ಬಿಡುವುದಿಲ್ಲ. ವಿದ್ಯಾರ್ಥಿಗಳು ತಂದೆ ತಾಯಿಯಂದಿರ ಹೆಸರು ಉಳಿಸಬೇಕೆಂದರೆ ಮಾದಕ ವ್ಯಸನ ಮುಕ್ತ ಬದುಕು ನಡೆಸಬೇಕು.
ಸದ್ಗುರು ಪ್ರದೀಪ್ ,ಯುವ ಉದ್ಯಮಿ