ನಾಲ್ಕನೇ ಕರ್ನಾಟಕ ಚಲನಚಿತ್ರೋತ್ಸವ ಧಾರವಾಡ
– ಜೂನ್ 29 ಮತ್ತು 30 ರಂದು ಸುವರ್ಣ ಸಮುಚ್ಛಯ ಭವನದಲ್ಲಿ ಈ ಕಾರ್ಯಕ್ರಮ
– ಕಡಲ ಪಕ್ಕಿಲು”ಆಲ್ಬಮ್ ಸಾಂಗ್ ಗೆ ಡಾ .ರಾಜ್ ಕುಮಾರ್ ಪ್ರಶಸ್ತಿ 2024ಕ್ಕೆ ಆಯ್ಕೆ
NAMMUR EXPRESS NEWS
ನಾಲ್ಕನೇ ಕರ್ನಾಟಕ ಚಲನಚಿತ್ರೋತ್ಸವ ಧಾರವಾಡ, ದಿನಾಂಕ: 29 ಮತ್ತು 30 ಜೂನ್ 2024 ಶನಿವಾರ ಮತ್ತು ರವಿವಾರದಂದು ಬೆಳಿಗ್ಗೆ: 09:00 ಗಂಟೆಗೆ ಆರಂಭ ಸ್ಥಳ: ಸುವರ್ಣ ಸಮುಚ್ಛಯ ಭವನ, ರಂಗಾಯಣ ಧಾರವಾಡ ಚಿತ್ರ ಹಾಗೂ ಕಿರುಚಿತ್ರಗಳ ಪ್ರದರ್ಶನ, ಹೊಸ ಚಿತ್ರ ಹಾಗೂ ಕಿರುಚಿತ್ರಗಳಿಗೆ ಕಲಾವಿದರ ನೇರ ಸಂದರ್ಶನ ಕನ್ನಡ ಚಿತ್ರಗೀತೆಗಳ ಮಧುರ ಸಮ್ಮಿಲನ, ಕಥೆ, ಚಿತ್ರಕತೆ, ಸಂಭಾಷಣೆ, ಗೀತರಚನೆ ಕುರಿತಂತೆ ಚರ್ಚೆ-ಸಂವಾದ ಆಯ್ಕೆಯಾದ ಚಿತ್ರ-ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ, ಚಿತ್ರ-ಕಿರುಚಿತ್ರಗಳ ತಂಡದಿಂದ ಮಾತು-ಕತೆ ನಡೆಯುತ್ತದೆ. ಇದರಲ್ಲಿ ಕಡಲ ಪಕ್ಕಿಲು ತುಳು ಆಲ್ಬಮ್ ಹಾಡು KEEM star JK ಖ್ಯಾತಿಯ ಜಯಶೀಲ ಕಲ್ಯಾಣಪುರ ನಿರ್ದೇಶನದ ಮತ್ತು ಉಡುಪಿ ಫ್ರೆಂಡ್ಸ್ circle ನಿರ್ಮಾಣದ “ಕಡಲ ಪಕ್ಕಿಲು”album song ಗೆ ನಾಲ್ಕನೇ ಕರ್ನಾಟಕ ಚಲನಚಿತ್ರೋತ್ಸವ ಧಾರವಾಡ ಇದರ Dr.Raaj kumar ಪ್ರಶಸ್ತಿ 2024ಕ್ಕೆ ಆಯ್ಕೆಯಾಗಿರುತ್ತದೆ. ಜೂನ್ 29 ಮತ್ತು 30 ರಂದು ಧಾರವಾಡಡಲ್ಲಿ ನಡೆಯಲಿರುವ ಕರ್ನಾಟಕ ಚಲನಚಿತ್ರೋತ್ಸವದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಈಗಾಗಲೆ “ಮುದ್ದು ಅಪ್ಪ”album song ಮತ್ತು “ನೀ ಕೊಟ್ಟ ತುತ್ತು”ಕಿರು ಚಿತ್ರಕ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಲಭಿಸಿದ್ದು,ಇದು ಹ್ಯಾಟ್ರಿಕ್ ಸಾಧನೆಯಾಗಿದ್ದು. ಜಯಶೀಲ್ ಹಾಗೂ ತಂಡ ಭಾರಿ ಸಂತಸ ವ್ಯಕ್ತಪಡಿಸಿದಲ್ಲದೆ ಚಲನಚಿತ್ರ ಮಂಡಳಿ ಮತ್ತು ಕೀಮ್ಸ್ಟರ್ ತಂಡದ ಸದಸ್ಯರಿಗೆ ಜಯಶೀಲ ಕಲ್ಯಾಣಪುರ ಅಭಿನಂದನೆ ಸಲ್ಲಿಸಿದರು.