ಆರೋಗ್ಯವೇ ಭಾಗ್ಯ.. ಟೆನ್ಶನ್ ಬಿಡಿ.. ಅರೋಗ್ಯ ಕಾಪಾಡಿ!
– ಹೊಸದುರ್ಗ ಅರೋಗ್ಯ ತಪಾಸಣಾ ಶಿಬಿರದಲ್ಲಿ ಯುವ ಉದ್ಯಮಿ ಸದ್ಗುರು ಪ್ರದೀಪ್ ಕರೆ
– ವಿಶ್ವ ಹಿಂದೂ ಪರಿಷತ್ – ಬಜರಂಗದಳ ಹೊಸದುರ್ಗ ಪ್ರಖಂಡ ಆಯೋಜನೆ.
NAMMUR EXPRESS NEWS
ಹೊಸದುರ್ಗ : ನಾವುಗಳು ಒತ್ತಡದ ಬದುಕಿನಿಂದ ದೂರ ಬಂದು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವನ್ನ ಸದೃಢಗೊಳಿಸಿದಾಗ ಮಾತ್ರ ಸಮಾಜದಲ್ಲಿ ಸಾಧನೆ ಮಾಡಬಹುದು ಒತ್ತಡ ಮತ್ತು ಜಂಜಾಟದಿಂದ ದೂರವಾದಾಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ, ಎಂದು ಸದ್ಗುರು ಆಯುರ್ವೇದ ಮಾಲೀಕ ಉದ್ಯಮಿ ಡಿ ಎಸ್ ಪ್ರದೀಪ್ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ – ಬಜರಂಗದಳ.ಹೊಸದುರ್ಗ ಪ್ರಖಂಡ ವತಿಯಿಂದ ನಡೆದ ಸೇವಾ ಸಪ್ತಾಹ ನಿಮಿತ್ತ ನಗರದ ಕೆನರಾ ಬ್ಯಾಂಕ್ ವೃತ್ತದಲ್ಲಿ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ನಮ್ಮ ಪೂರ್ವಜರು ಪ್ರತಿನಿತ್ಯ ಸೇವಿಸುತ್ತಿದ್ದ ಆಹಾರ ಪದಾರ್ಥಗಳನ್ನು ಯುವ ಪೀಳಿಗೆ ದೂರ ಮಾಡಿ ಪಿಜ್ಜಾ ಬರ್ಗರ್ ಬೇಕರಿ ತಿನಿಸು ಈ ಆಹಾರ ವಸ್ತುಗಳಿಗೆ ಮಾರು ಹೋಗಿದ್ದಾರೆ. ಇದರಿಂದ ನಮ್ಮ ಆರೋಗ್ಯದಲ್ಲಿ ಗಣನೀಯವಾಗಿ ವ್ಯತ್ಯಾಸವಾಗಿ ದೈಹಿಕವಾಗಿ ಯುವ ಪೀಳಿಗೆಯ ಆರೋಗ್ಯ ಕುಂದುತ್ತಿರುವುದು ವಿಷಾದನೀಯ ಎಂದರು.
ನಾವು ಸೇವಿಸುತ್ತಿರುವ ಸಾವಯವ ಉತ್ತೇಜಿತ ರಾಗಿ ಜೋಳ ನವಣೆ ಸಜ್ಜೆಯಂತಹ ಆಹಾರಗಳು ನಮ್ಮ ಸದೃಢ ಆರೋಗ್ಯಕ್ಕೆ ಸಹಕಾರಿಯಾಗುತ್ತವೆ. ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ರಕ್ತ ಪರೀಕ್ಷೆ ಮಾಡಿಸಿ ಮಧುಮೇಹ ರಕ್ತದೊತ್ತಡ ದಂತಹ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಪ್ರತಿನಿತ್ಯ ಬೆಳಿಗ್ಗೆ ವಾಯು ವಿಹಾರ ಹೋಗುವುದರಿಂದ ಪರಿಶುದ್ಧವಾದ ಆಮ್ಲಜನಕ ನಮ್ಮ ದೇಹಸೇರಿ ಶ್ವಾಸಕೋಶವನ್ನು ಶುದ್ಧೀಕರಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಮಾಜಸೇವಕರಾದ ತುಂಬಿನಕೆರೆ ಬಸವರಾಜ್ ತಾಲ್ಲೂಕ ಭಾಜಪ ಪ್ರಧಾನ ಕಾರ್ಯದರ್ಶಿ ಜಗದೀಶ್ ರಾಮಯ್ಯ, ಬಜರಂಗದಳ ಸಂಚಾಲಕ ಸಿದ್ದೇಶ್, ಬಿ ಎಚ್ ಪಿ ಕಾರ್ಯದರ್ಶಿ ಕುಮಾರ್, ರವಿಕಿರಣ್ ಪಾಟೀಲ್ ಪಂಪ, ಚೇತನ್ ಪೀಲಾಪುರ ರವಿ.ಕಣ್ವ ಮನು, ಹೊನ್ನೇನಹಳ್ಳಿ ಶ್ರೀನಿವಾಸ್,ವಿದ್ಯಾರ್ಥಿ ಪ್ರಮುಖ್ ಗಜೇಂದ್ರ ಉಷಾ,ರಾಧ, ಹೆಚ್.ಒ. ಉಪಸ್ಥಿತರಿದ್ದರು.
ಹಿಂದೂ ಪರಿಷತ್, ಬಜರಂಗದಳ ರಾಷ್ಟ್ರ ಭಕ್ತರ ಸಂಘಟನೆ
ಉಚಿತ ಅರೋಗ್ಯ ಶಿಬಿರ ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಮಾತನಾಡಿ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಘಟನೆ ಇದೊಂದು ರಾಷ್ಟ್ರಭಕ್ತ ಕರುಣರ ಸಂಘಟನೆ. ಈ ಸಮಾಜಕ್ಕೆ ಪ್ರಾಕೃತಿಕ ವಿಕೋಪಗಳಂತಹ ಸಮಸ್ಯೆ ಬಂದಾಗ ನಮ್ಮ ಕಾರ್ಯಕರ್ತರು ಇಡೀ ದೇಶದಾದ್ಯಂತ ಕೊರೋನಾ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರಜೆಗಳ ರಕ್ಷಣೆಗೆ ಹೋರಾಡುತ್ತಾರೆ , ಮಾದಕ ವ್ಯಸನಿಗಳಿಂದ ದೂರವಾಗಿ ಶುದ್ಧವಾದ ಆಹಾರ ಸೇವನೆ ಮಾಡಿ ಸದೃಢ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಈ ದೇಶ ಸದೃಢ ದೇಶ ಎಂದು ಹೇಳಲು ಸಾಧ್ಯ ಎಂದರು.
70ಕ್ಕೂ ಹೆಚ್ಚು ಮಂದಿಗೆ ಉಚಿತ ತಪಾಸಣೆ
ಹೊಸದುರ್ಗದ ಹೆಸರಾಂತ ವೈದ್ಯ ಡಾ.ಬ್ರಹ್ಮರಾಜ್ ಮತ್ತು ತಂಡದಿಂದ ಸುಮಾರು 70 ಕ್ಕೂ ಹೆಚ್ಚು ರೋಗಿಗಳಿಗೆ ಮಧುಮೇಹ ಚರ್ಮರೋಗಕ್ಕೆ ಸಂಬಂಧಿಸಿದಂತೆ ರಕ್ತದೊತ್ತಡ ತಪಾಸಣೆ ಮಾಡಲಾಯಿತು.ಈ ಆರೋಗ್ಯ ತಪಾಸಣೆಯಲ್ಲಿ ಸಾಮಾನ್ಯ ಚಿಕಿತ್ಸೆ,ಹೃದಯ ಸಂಬಂಧಿತ ಚಿಕಿತ್ಸೆಗೆ ಚಿಕಿತ್ಸೆ ನೀಡಲಾಯಿತು.