ವಚನ ಕಮ್ಮಟ ಕಾರ್ಯಕ್ರಮ ಸಂಭ್ರಮ!
– ಸಾಣೆಹಳ್ಳಿಯ ಶಾಮನೂರು ಶಿವಶಂಕರಪ್ಪ ರಂಗಮದಿರದಲ್ಲಿ ಕಾರ್ಯಕ್ರಮ
– ದೊಡ್ಡ ಮಠಗಳು ಸಣ್ಣ ಮಠಗಳನ್ನ ನಿರ್ಲಕ್ಷಿಸಬಾರದು: ಅಗ್ರಹ
NAMMUR EXPRESS NEWS
ಹೊಸದುರ್ಗ: ಇಂದಿನ ಯುಗದಲ್ಲಿ ನಾವು ವಚನ ಸಾಹಿತ್ಯದಿಂದ ದೂರ ಸರಿದಿದ್ದೇವೆ. ಅದನ್ನು ಸರಿ ಮಾಡಿಕೊಳ್ಳಬೇಕೆಂದರೆ ಮತ್ತೆ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಇಂತಹ ಕಮ್ಮಟಗಳ ಮೂಲಕ ನಾವೆಲ್ಲರೂ ಜಾಗೃತರಾಗಬೇಕು ಎಂದು ಬಾಲ್ಕಿಯ ಹಿರೇಮಠದ ನಾಡೋಜ ಬಸವಲಿಂಗಪಟ್ಟದೇವರು ಮಾತನಾಡಿದರು. ಹೊಸದುರ್ಗ ತಾಲೂಕಿನ ಸಾಣೆಹಳ್ಳಿಯ ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮದಿರದಲ್ಲಿ ನಡೆದ ವಚನ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ೧೨ನೆಯ ಶತಮಾನದ ಶರಣರು ಸ್ಪಷ್ಟವಾದ ಮಾರ್ಗ, ಸಿದ್ಧಾಂತ, ಆಚರಣೆ ಕೊಟ್ಟಿದ್ದಾರೆ. ಕಾಲಾನಂತರದಲ್ಲಿ ಅದರ ಕನೆಕ್ಷನ್ ತಪ್ಪಿಸಿಕೊಂಡು ದಿಕ್ಕುತಪ್ಪಿದ್ದೇವೆ. ಆದ್ದರಿಂದ ದಿಕ್ಕುತಪ್ಪದೇ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಬಸವಣ್ಣನವರಿಗೆ ಪ್ರಧಾನಸ್ಥಾನ ಕೊಡುವುದಿಲ್ಲವೋ ಅಲ್ಲಿಯವರೆಗೂ ವಚನ ಸಾಹಿತ್ಯ ಪ್ರಚಾರ ಅಸಾಧ್ಯ. ಬಸವಣ್ಣನವರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕು. ಬಸವನ ಮಾರ್ಗದಲ್ಲಿ ಹೋದಾಗ ಜನಸಾಮಾನ್ಯರಿಗೆ ಬಸವ ತತ್ವವನ್ನು ಮುಟ್ಟಿಸಲಿಕ್ಕೆ ಸಾಧ್ಯ ಎಂದರು.
ಆಧುನಿಕ ತಂತ್ರಜ್ಞಾನಗಳ ಮೂಲಕ ಶರಣರ ವಿಚಾರಗಳನ್ನು ಪ್ರಚಾರ ಮಾಡಿದಾಗ ಮಾತ್ರ ಶರಣರ ತತ್ವಗಳು ಹೆಚ್ಚು ಹೆಚ್ಚು ಪ್ರಚಾರ ಮಾಡಲು ಸಾಧ್ಯ. ನಮ್ಮ ನಿರೀಕ್ಷೆಯಂತೆ ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರಕಾರದಿಂದ ಘೋಷಣೆ ಮಾಡಿರುವುದು ತುಂಬಾ ಸಂತೋಷ ಎಂದರು. ಬಸವರಾಜ ಸಾದರ ಮಾತನಾಡಿ ಇದು ನಿಜವಾದ ಅನುಭವ ಮಂಟಪದ ರೀತಿಯಲ್ಲಿ ಈ ವಚನ ಕಮ್ಮಟ ನಡೆಯುತ್ತದೆ. ಕರ್ನಾಟಕದ ದೊಡ್ಡ ದೊಡ್ಡ ಮಠಾಧಿಪತಿಗಳಿಗೆ ಬಸವತತ್ವದ ಅವಶ್ಯಕತೆ ಇಲ್ಲದೇ ಇರುವುದು ನೋವಿನ ಸಂಗತಿ ಎಂದರು.
“ಕರ್ನಾಟಕದ ಮಠಾಧಿಪತಿಗಳು ಬಸವ ತತ್ವ ಅರಿತು ಕೆಲಸ ಮಾಡಬೇಕಿದೆ”
ಲಿಂಗ ಎನ್ನುವುದು ಅರಿವಿನ ಅತ್ಯಂತ ಎತ್ತರದ ಸಂಕೇತ. ವೈಜ್ಞಾನಿಕ ಶಕ್ತಿಗಳನ್ನೆಲ್ಲಾ ಇಟ್ಟುಕೊಂಡು ಪೂಜಿಸುತ್ತೇವೆ. ಈ ವಚನ ಕಮ್ಮಟದ ಉದ್ದೇಶ ಅರಿವಿನ ಎತ್ತರಕ್ಕೇರುವುದು. ಅರ್ಹತೆಯನ್ನು ಆಧರಿಸಿ ಉದ್ಯೋಗಕ್ಕೆ ಆಯ್ಕೆಯಾದವರಿಗೆ ಮುಂದೆ ಹೇಗೆ ನಡೆಯಬೇಕು ಅನ್ನೋದು ಸರಕಾರದ ಇಲಾಖೆಯಲ್ಲಿ ಅನೇಕ ತರಬೇತಿಗಳು ನಡೆಯುತ್ತವೆ. ಹಾಗೇಯೇ ಕರ್ನಾಟಕದ ಮಠಾಧಿಪತಿಗಳು ಬಸವತತ್ವಗಳು ಎಷ್ಟರಮಟ್ಟಿಗೆ ಅರಿತುಕೊಂಡು ಸಮಾಜ ತಿದ್ದುವ ಕೆಲಸ ಮಾಡಬೇಕೆಂಬುದೇ ಈ ಕಮ್ಮಟದ ಉದ್ದೇಶ. ಇದರ ಮೂಲಕ ಆತ್ಮನಿರೀಕ್ಷಣೆ, ಆತ್ಮಪರೀಕ್ಷಣೆ, ಆತ್ಮಪರಿಷ್ಕರಣೆ ಆಗಬೇಕು ಎಂದರು.
“ಸಾಣೆಹಳ್ಳಿಯ ವಚನ ಕಮ್ಮಟ ತರಬೇತಿ ಶಾಲೆ ಇದ್ದಂತೆ.”
ಸತ್ಯವಂತರಾಗಿ ನೀತಿವಂತರಾಗಿ, ಧರ್ಮವಂತರಾಗಿ ಮಾಡುವುದೇ ಮಠಗಳ ಕೆಲಸ. ಸಮಾಜದಲ್ಲಿ ಐಕ್ಯತೆ ಮತ್ತು ಸಮಾನತೆ ಭಾವನೆಯನ್ನು ಬೆಳಿಸುವುದು. ಸಮಾಜ ಎನ್ನುವುದು ಜಾತಿಯಿಂದ, ಧರ್ಮದಿಂದ ಅಲ್ಲ. ಮನುಷ್ಯರಿಂದ. ಜಾತಿಗೊಂದು ಮಠ ಆಗಿರುವುದರಿಂದ ಛಿದ್ರಿಕರಣಗೊಳ್ಳುತ್ತದೆ. ಎಷ್ಟೋ ಸ್ವಾಮಿಗಳು ಜೈಲಿಗೆ ಹೋಗಿ ಬಂದ ರಾಜಕಾರಣಿಗಳ ಮನೆಗೆ ನೂರಾರು ಸ್ವಾಮಿಗಳು ಹೋಗಿ ಸಾಂತ್ವಾನ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಂಘರ್ಷದಲ್ಲಿ ಧನಾತ್ಮಕ ವಿಷಯವನ್ನು ಬೆಂಬಲಿಸಿ ಋಣಾತ್ಮಕ ವಿಷಯವನ್ನು ದೂರಮಾಡಬೇಕು ಎಂದರು.
“ದೊಡ್ಡ ಮಠಗಳು ಸಣ್ಣ ಮಠಗಳನ್ನ ನಿರ್ಲಕ್ಷಿಸಬಾರದು”
ಬಸವಣ್ಣನವರು ಪ್ರಶ್ನಿಸಿ, ಪ್ರತಿಭಟಿಸಿ, ನಿರಾಕರಿಸಿ, ಹೊಸ ಸಮಾಜವನ್ನು ಕಟ್ಟಿದರು. ಇದು ಬಸವಣ್ಣನವರ ಕ್ರಾಂತಿಕಾರಕ ಹೆಜ್ಜೆಗಳು. ಬಸವಣ್ಣನವರ ಪರಂಪರೆಯ ಮಠಾಧೀಶಕರಿಗೆ ಖರ್ಚಿಯ ಹುಚ್ಚು, ವ್ಯಾಮೋಹ ಹೆಚ್ಚಿದೆ. ಆದ್ದರಿಂದ ಇಲ್ಲಿನ ಮಠಾಧೀಶರು ಕುರ್ಚಿಯ ವ್ಯಾಮೋಹ ಇಟ್ಟುಕೊಳ್ಳಬೇಡಿ. ದೊಡ್ಡ ದೊಡ್ಡ ಮಠಗಳು ಸಣ್ಣಮಠಗಳನ್ನು ನಿರ್ಲಿಕ್ಷಿಸಬಾರದು. ಬಹಳಷ್ಟು ಮಠಾಧಿಪತಿಗಳು ಎಡಬಿಡಂಗಿತನ ಬಿಡಬೇಕು ಎಂದರು. ಶಿವಮೊಗ್ಗದ ಬಸವಕೇಂದ್ರ ಮರುಳಸಿದ್ಧ ಸ್ವಾಮಿಗಳು ಸ್ವಾಮಿಗಳು ಸ್ವಾಗತಿಸಿದರೆ ಮೋಟಗಿಮಠ ಚೆನ್ನಬಸವ ಸ್ವಾಮಿಗಳು ಕಾರ್ಯಕ್ರಮ ನಡೆಸಿಕೊಟ್ಟರು. ಕುಮಾರಿ ಅದಿತಿ ವಚನ ನೃತ್ಯರೂಪಕ ನಡೆಸಿಕೊಟ್ಟರು. ವೇದಿಕೆಯ ಮೇಲೆ ಪಾಂಡೋಮಟ್ಟಿಯ ಗುರುಬಸವ ಸ್ವಾಮಿಗಳು, ನಾಗನೂರು ಮಠದ ಸ್ವಾಮಿಗಳು ಉಪಸ್ಥಿತರಿದ್ದರು.