ಶಾರ್ಟ್ ಫಿಲಂ ಅಭಿನಯ: ಹೊಸದುರ್ಗ ವಿದ್ಯಾರ್ಥಿಗಳು ಪ್ರಥಮ!
– ಸಂಸದ ಗೋವಿಂದ ಕಾರಜೋಳ ರವರು ಬಹುಮಾನ ಹಾಗೂ ಪ್ರಮಾಣಪತ್ರ
-ಸ್ವರ್ಣಗೌರಿ, ಶೋಭ ಎಂ.ಆರ್ ತಂಡಕ್ಕೆ ಪ್ರಥಮ ಸ್ಥಾನ, ರೀಲ್ಸ್ ವಿಭಾಗದಲ್ಲಿ ದ್ವಿತೀಯ ಪಿ.ಯು.ಸಿ ನಾಗರತ್ನ ಅವರಿಗೆ ದ್ವಿತೀಯ
NAMMUR EXPRESS NEWS
ಚಿತ್ರದುರ್ಗ: ವಿಶ್ವ ಜನಸಂಖ್ಯಾ ದಿನಾಚರಣೆಯ ನಿಮಿತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ –ಚಿತ್ರದುರ್ಗ ವತಿಯಿಂದ ಆಯೋಜಿಸಿದ್ದ “ಅಭಿವೃದ್ದಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಿಕೆ ಪ್ರತಿ ದಂಪತಿಗಳ ಆಯ್ಕೆ”-ಎಂಬ ವಿಷಯದ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದರು .ಈ ಸ್ಪರ್ಧೆಗಳಲ್ಲಿ ಹೊಸದುರ್ಗ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ ಶಾರ್ಟ್ಸ್ ಫಿಲಿಮ್ಸ್ ಅಭಿನಯ ವಿಭಾಗದಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರಾದ ಸ್ವರ್ಣಗೌರಿ ಹಾಗೂ ಶೋಭ ಎಂ.ಆರ್ ತಂಡಕ್ಕೆ ಪ್ರಥಮ ಸ್ಥಾನ ಬಂದಿದ್ದು ಮತ್ತು ರೀಲ್ಸ್ ಅಭಿನಯ ವಿಭಾಗದಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯಾದ ನಾಗರತ್ನ ಅವರಿಗೆ ದ್ವಿತೀಯ ಸ್ಥಾನ ಬಂದಿದೆ.
ಚಿತ್ರದುರ್ಗದ ತ.ರಾ.ಸು ರಂಗಮಂದಿರದಲ್ಲಿ ನೆಡೆದ 2024-25 ನೇ ಸಾಲಿನ “ವಿಶ್ವ ಜನಸಂಖ್ಯಾ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ ರವರು ಬಹುಮಾನ ಹಾಗೂ ಪ್ರಮಾಣಪತ್ರ ನೀಡಿದರು.
ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ದಿ ಸಮಿತಿ ,ಪ್ರಾಂಶುಪಾಲರಾದ ವಿಶ್ವನಾಥ್ ಎಂ.ಜಿ ಹಾಗೂ ಉಪನ್ಯಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.