ಸಂದೀಪನಿ ಶಾಲೆ ಮಕ್ಕಳಿಗೆ ವೈದ್ಯಕೀಯ ಪಾಠ..!
– ಹಿರಿಯ ಆರೋಗ್ಯ ವೈದ್ಯಾಧಿಕಾರಿ ಡಾಕ್ಟರ್ ಸಂಜಯ್ ಪಾಠ
– ಹೊಸದುರ್ಗ ನಗರದ ಸಂಜಯ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯಕೀಯ ಅರಿವು ತರಬೇತಿ
NAMMUR EXPRESS NEWS
ಹೊಸದುರ್ಗ: ಶಿಕ್ಷಕರು ಮಕ್ಕಳಿಗೆ ವಿದ್ಯಾರ್ಥಿ ಜೀವನದಲ್ಲಿ ಗುಣಾತ್ಮಕ ಶಿಕ್ಷಣ ಪಡೆಯುವುದರೊಂದಿಗೆ ಮೌಲ್ಯಯುತ ಶಿಕ್ಷಣ ನೀಡಿದಾಗ ಎಂತಹ ಸವಾಲನ್ನಾದರೂ ಎದುರಿಸಬಲ್ಲರು, ಒಬ್ಬ ವೈದ್ಯ ಪ್ರತಿ ಕ್ಷಣದಲ್ಲಿಯೂ ವೈದ್ಯಕೀಯ ಕ್ಷೇತ್ರದಲ್ಲಿ ಸವಾಲನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ. ವೈದ್ಯರು ಅತ್ಯಂತ ಹೆಚ್ಚು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಹಿರಿಯ ಆರೋಗ್ಯ ವೈದ್ಯಾಧಿಕಾರಿ ಡಾ. ಯು.ಎಸ್.ಸಂಜಯ್ ತಿಳಿಸಿದ್ದಾರೆ. ಹೊಸದುರ್ಗ ನಗರದ ಸಂಜಯ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಸಂದೀಪನಿ ಇಂಡಿಯನ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಶಾಲಾ ಮಕ್ಕಳಿಗೆ ವೈದ್ಯಕೀಯ ಅರಿವು ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು ವೈದ್ಯಕೀಯ ಕ್ಷೇತ್ರವೆಂಬುದು ಪ್ರತಿನಿತ್ಯ ಕಲಿಯಬೇಕಾದ ಒಂದು ಅಮೂಲ್ಯ ಸಾಧನ, ಇಲ್ಲಿ ನಾವು ವೈದ್ಯರಾದರೂ ವಿದ್ಯಾರ್ಥಿಯಾಗಿ ಪ್ರತಿದಿನವೂ ಕಲಿಯಬೇಕಾದದ್ದು ಬಹಳಷ್ಟು ಇದೆ ಎಂದರು. ಇದೇ ಸಂದರ್ಭದಲ್ಲಿ ವೈದ್ಯರಾದ ಡಾ ನಿಸರ್ಗ ಡಾ,ಬಹುಬಲಿ, ಡಾ,ಭೂಮಿಕಾ ಡಾ,ಹರ್ಷಿತ್ ,ವಿದ್ಯಾರ್ಥಿಗಳಿಗೆ ಎಕ್ಸರೇ, ಪ್ರಯೋಗಾಲಯ, ಕೀಲು ಮೂಳೆ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ಪ್ರಕೃತಿ ಚಿಕಿತ್ಸೆ, ಯೋಗ ಚಿಕಿತ್ಸೆ, ಬಗ್ಗೆ ಮಾಹಿತಿ ನೀಡಲಾಯಿತು. ಶಿಕ್ಷಕರಾದ ನಾಗರಾಜ್ ರಮೇಶ್, ಅರುಣ್ ಕುಮಾರ್ ಹಾಜರಿದ್ದರು.