ಮಾನವೀಯತೆ ಇನ್ನು ಉಳಿದಿದೆ..!
– ಕೊಪ್ಪದಲ್ಲಿ 10 ಲಕ್ಷ ಮೌಲ್ಯದ ಚಿನ್ನದ ಬ್ರೇಸ್ ಲೈಟ್ ಸಿಕ್ಕವರು ವಾಪಾಸ್ ಕೊಟ್ಟರು
– ಶೃಂಗೇರಿ: ಕಳೆದು ಹೋದ ಮೊಬೈಲನ್ನು ವಾಪಾಸು ಕೊಟ್ಟ ಬಸ್ ಸಿಬ್ಬಂದಿ
NAMMUR EXPRESS NEWS
ಶೃಂಗೇರಿ: ಖಾಸಗಿ ಬಸ್ಸೊಂದರಲ್ಲಿ ಕಳೆದು ಹೋದ ಮೊಬೈಲನ್ನು ಬಸ್ ಸಿಬ್ಬಂದಿ ವಾಪಾಸು ಕೊಟ್ಟಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ.
ವಾರಸುದಾರರಿಗೆ ಹಿಂತಿರುಗಿಸಿದ ಬಸ್ನ ಚಾಲಕರಾದ ರಿಝ್ವಾನ್, ಮತ್ತು ನಿರ್ವಾಹಕ ರಾಜೇಶ್. ಇವರ ಕಾರ್ಯಕ್ಕೆ ಮೆಚ್ಚುಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊಪ್ಪದಲ್ಲಿ 10 ಲಕ್ಷ ಮೌಲ್ಯದ ಚಿನ್ನದ ಬ್ರೇಸ್ ಲೈಟ್ ಸಿಕ್ತು
ಕೊಪ್ಪ: ಕೊಪ್ಪ ಪೊಲೀಸ್ ಠಾಣೆಯಲ್ಲಿ ಕೊಪ್ಪ ಪಟ್ಟಣ ವಾಸಿಯಾದ ಪತ್ರಕರ್ತ ಪ್ರಕಾಶ್ 10 ಲಕ್ಷ ಮೌಲ್ಯದ ಚಿನ್ನದ ಬ್ರೇಸ್ ಲೈಟ್ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಯಿತು.ಈ ಸಂದರ್ಭದಲ್ಲಿ ಸದರಿ ಚಿನ್ನದ ಬ್ರೇಸ್ ಲೈಟ್ ಅನ್ನು ಪ್ರಾಮಾಣಿಕವಾಗಿ ಠಾಣೆಗೆ ಹಿಂದಿರುಗಿಸಿದಂತಹ ರೂಪೇಶ್ ಮೇಲಿನಪೇಟೆ ಕೊಪ್ಪ ಹಾಗೂ ಪಟ್ಟಣ ಪಂಚಾಯಿತಿಯ ಇಂಜಿನಿಯರ್ ರಾಜೇಶ್ ಎನ್ ಇವರನ್ನು ಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಅವರು ಸನ್ಮಾನಿಸಿ ಇಂತಹ ಒಳ್ಳೆಯ ಕೆಲಸಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.