ಜಗದ್ಗುರು ರೇವಣಸಿದ್ದೇಶ್ವರ ಸಂಸ್ಥಾನ ಗುರುಪೀಠದ
– ನೂತನ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಸಜ್ಜು
– ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ ಅನುದಾನ: ಶಾಸಕ ಗೋವಿಂದಪ್ಪ
NAMMUR EXPRESS NEWS
ಹೊಸದುರ್ಗ: ಹೊಸದುರ್ಗ ತಾಲ್ಲೂಕಿನ ಬಾಗೂರು ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ ಗುರುಪೀಠದ ನೂತನ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ ಅನುದಾನ ನೀಡಲಾಗಿದೆ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಆಡಳಿತಾಧಿಕಾರಿಗಳು, ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದ್ದಾರೆ.
ಬಾಗೂರಿನ ಓರಗಲ್ಲಮ್ಮ ಸಮುದಾಯ ಭವನದಲ್ಲಿ ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಂಸ್ಥಾನ ಗುರುಪೀಠದ
ನೂತನ ದೇವಸ್ಥಾನದ ಕಟ್ಟಡ ನಿರ್ಮಾಣದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಂಸ್ಥಾನದ 20ಕ್ಕು ಅಧಿಕ ಹಳ್ಳಿಯ ಭಕ್ತಾದಿಗಳು ಸೇರಿದ ಒಕ್ಕಲುಗಳು ಸಂಬಂಧಿಸಿದ ದೇಗುಲ ನಿರ್ಮಾಣಕ್ಕೆ ಎಲ್ಲರು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.ತಾಲ್ಲೂಕಿನ ಎಲ್ಲ ಸಮುದಾಯಗಳಿಗೆ ಅನುದಾನ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಸಾನ್ನಿಧ್ಯ ಕಾಗಿನೆಲೆ ಮಹಾಸಂಸ್ಥಾನ ಕೆಲ್ಲೋಡಿನ ಶ್ರೀ ಕನಕ ಗುರುಪೀಠ ಕನಕ ಧಾಮ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ
ಮಾತನಾಡಿ ಹಾಲುಮತದ ಸಂಪ್ರದಾಯ ಸಂಸ್ಕಾರದಂತೆ ಐತಿಹಾಸಿಕ ಗುರುಪೀಠಗಳ ನಿರ್ಮಾಣ ಮಾಡುವ ಮೂಲಕ ಸಮಾಜ ಮುಖಿಯಾದ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಂಸ್ಥಾನ ಗುರುಪೀಠದ ಮಂಜಯ್ಯ ಒಡೆಯರ್ ಸಾನಿಧ್ಯ ವಹಿಸಿದ್ದರು. ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ ಸಂಬಂಧಿಸಿದ ಗುಡಿಕಟ್ಟಿನ ಎಲ್ಲ ವ್ಯಾಪ್ತಿಯ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಗೋರ್ ಮಾಟಿ ತಿಂಗಳ ನಾಟಕ ಪ್ರದರ್ಶನ
ಹೊಸದುರ್ಗ: ಹೊಸದುರ್ಗ ತಾಲೂಕಿನ ರಂಗಕಾತಿ ಸರಣಿಹಳ್ಳಿಯ ಎಸ್ ಎಸ್ ರಂಗಮಂದಿರಲ್ಲಿ ನಡೆದ ಮೈಸೂರಿನ ರಂಗಾಯಣ ರೆಪರ್ಟರಿಯವರು ಅಭಿನಯಿಸಿದ ಸಿ ಬಸವಲಿಂಗಯ್ಯನವರು ನಿರ್ದೇಶಿಸಿದ ಗೋರ್ ಮಾಟಿ ತಿಂಗಳ ನಾಟಕ ಪ್ರದರ್ಶನಗೊಂಡಿತು. ಈ ಸಂದರ್ಭದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ದಿವ್ಯ ಸಾನ್ನಿಧ್ಯ ವಹಿಸಿದರು. ಕಲಾಸಂಘದ ಕಾರ್ಯದರ್ಶಿ ಎಸ್ ಕೆ ಪರಮೇಶ್ವರಯ್ಯ, ಎ ಸಿ ಚಂದ್ರಪ್ಪ, ಹೆಚ್ ಸಿ ಮಲ್ಲಿಕಾರ್ಜುನ, ಹೊಸದುರ್ಗದ ಹೆಚ್ ಎಸ್ ನವೀನ್ ಕುಮಾರ್, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಊರಿನ ಗ್ರಾಮಸ್ಥರು ನಾಟಕ ವೀಕ್ಷಿಸಿದರು.