ನಗರಸಭೆ ಸದಸ್ಯತ್ವಕ್ಕೆ ಕೆ.ಸಿ.ಎನ್.ರಾಜು ರಾಜಿನಾಮೆ!
– ಚಳ್ಳಕೆರೆ ನಗರ ಸಭೆಯಲ್ಲಿ ಸಕ್ರಿಯರಾಗಿದ್ದ ಸದಸ್ಯ
– ವಯುಕ್ತಿಕ ಕಾರಣ ನೀಡಿ ರಾಜೀನಾಮೆ
NAMMUR EXPRESS NEWS
ಚಳ್ಳಕೆರೆ: ನಗರಸಭೆ ಸದಸ್ಯತ್ವ ಸ್ಥಾನಕ್ಕೆ ಸದಸ್ಯರೊಬ್ಬರು ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ನಿಡಿದ್ದಾರೆ.
ಹೌದು ಇದು ಚಳ್ಳಕೆರೆ ನಗರದ ನಾಲ್ಕನೇ ವಾರ್ಡ್ ಸದಸ್ಯ ಕೆ.ಸಿ.ನಾಗರಾಜ್ ನಗರಸಭೆ ಸದಸ್ಯತ್ವಕ್ಕೆ ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಮನವಿಯಲ್ಲಿ ನಾನು ನನ್ನ ವೈಯಕ್ತಿಕ ಕಾರಣದಿಂದ ನನ್ನ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೇಯನ್ನು ನೀಡುತ್ತಿದ್ದೇನೆ, ನನ್ನ ರಾಜೀನಾಮೇಯನ್ನು ಅಂಗೀಕರಿಸಿ ಸದಸ್ಯ ಸ್ಥಾನದಿಂದ ಬಿಡುಗಡೆಗೊಳಿಸಲು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೀದ್ದೇನೆ, ನಾನು ನನ್ನ ಸ್ವ-ಇಚ್ಚೆಯಿಂದ ಯಾವುದೇ ಒತ್ತಡ ಇಲ್ಲದೆ ರಾಜೀನಾಮೇಯನ್ನು ನೀಡುತ್ತಿದ್ದೇನೆ ಈವರೆಗೂ ನಗರಸಭೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೂ ನನ್ನ ನಮಸ್ಕಾರಗಳು ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.