ಸಾಣೇಹಳ್ಳಿ ವಚನ ಕಮ್ಮಟದಲ್ಲಿ ಸ್ವಾಮೀಜಿಗಳ ಸಮಾಗಮ!
– ವಚನ ಸಾಹಿತ್ಯ ಸಂತ ಫ.ಗು. ಹಳಕಟ್ಟಿ ಸ್ಮರಣೆ: ನುಡಿ ನಮನ
– ಶಿವಾಚಾರ್ಯ ಶ್ರೀಗಳ “ಅರಿವಿನ ಪರಿಧಿ’ ಕೃತಿ ಲೋಕಾರ್ಪಣೆ
NAMMUR EXPRESS NEWS
ಹೊಸದುರ್ಗ : ವಚನ ಕಮ್ಮಟದ ಅಂಗವಾಗಿ ಸಾಣೇಹಳ್ಳಿ ಶ್ರೀಮಠದ ಆವರಣದಲ್ಲಿ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಬೆಳಗ್ಗೆ 8 ಗಂಟೆಗೆ ಶಿವಧ್ವಜಾರೋಹಣ ಹಾಗೂ ಶಿವಮಂತ್ರ ಲೇಖನ ಕಾರ್ಯಕ್ರಮ ಜರುಗಿತು. ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀ ಗುರುಬಸವ ಮಹಾಸ್ವಾಮಿಗಳು ಶಿವಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ದಯಪಾಲಿಸದರು. ಶಿವಮೊಗ್ಗದ ಡಾ. ಬಸವ ಮರುಳಸಿದ್ಧ ಸ್ವಾಮಿಗಳು ಕಾರ್ಯಕ್ರಮ ಕುರಿತು ಆಶಿರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗದ ಯುವ ಮಠಾಧೀಶರು, ಬಸವಾಸಕ್ತರು ಭಾಗವಹಿಸಿದ್ದರು.
ಅನೇಕ ಜನ ಹೊನ್ನು, ಹೆಣ್ಣು, ಮಣ್ಣು ಎಂದು ಭಾವಿಸಿಕೊಂಡಿರುತ್ತಾರೆ. ಆದರೆ ವಚನ ಸಾಹಿತ್ಯವೇ ಸಂಪತ್ತೆಂದು ಬದುಕಿದವರು ಫ ಗು ಹಳಕಟ್ಟಿಯವರು. ಅಧಿಕಾರಕ್ಕಾಗಿ ಎಂದೂ ಆಸೆಪಟ್ಟವರಲ್ಲ. ವಚನ ಸಾಹಿತ್ಯವನ್ನು ಉಳಿಸಬೇಕೆಂದು ಕನಸು ಕಂಡು ಅದನ್ನು ನನಸು ಮಾಡಿದವರು ಫ ಗು ಹಳಕಟ್ಟಿಯವರು. ಹಳಕಟ್ಟಿಯವರನ್ನು ಯಾರೂ ಮರೆಯಲಿಕ್ಕೆ ಸಾಧ್ಯವಿಲ್ಲ ಎಂದು ಸಾಣೆಹಳ್ಳಿಯ ರಂಗ ಜಂಗಮ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು
ತಾಲೂಕಿನ ಸಾಣೆಹಳ್ಳಿ ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ನಡೆದ ವಚನ ತಕಮ್ಮಟ ಎರಡನೆಯ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಫ ಗು ಕಟ್ಟಿಯವರನ್ನು ತುಂಬಾ ಸ್ಮರಿಸಿಕೊಳ್ಳುತ್ತಿದ್ದರು. ಫ ಗು ಹಳಕಟ್ಟಿಯವರು ಪರಮಪುರುಷರು. ಕನ್ನಡ ನಾಡಿಗೆ ಸುಪರಿಚಿತರು. ಫ ಗು ಹಳಕಟ್ಟಿಯವರು ಇಲ್ಲದೇ ಇದ್ದರೆ ವಿಶ್ವಸಾಹಿತ್ಯದ ವಚನ ಜ್ಯೋತಿಯನ್ನು ಎಲ್ಲ ಕಡೆ ಬೆಳಗಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು.
ಪಂಚಾಚಾರಗಳ’ ಕುರಿತಂತೆ ಚಿಂತಕ ವೀರಣ್ಣ ರಾಜೂರು ಮಾತನಾಡಿ ಈ ವಚನ ಕಮ್ಮಟ ವಿನೂತನ ಕಾರ್ಯಕ್ರಮ. ವ್ಯವಸ್ಥಿತವಾಗಿ ಹೇಗೆ ಗುರಿಯನ್ನು ಮುಟ್ಟಬೇಕು ಎನ್ನುವ ಆಲೋಚನೆಯನ್ನಿಟ್ಟುಕೊಂಡು ಈ ಕಮ್ಮಟವನ್ನು ಆಯೋಜನೆ ಮಾಡಿದ್ದಾರೆ. ಇದಕ್ಕೆ ಪ್ರೇರಣೆ ಹಾಗೂ ಕಾರಣ ಪಂಡಿತಾರಾಧ್ಯ ಶ್ರೀಗಳು. ತುಂಬಾ ಪವಿತ್ರ ದಿನ. ಇವತ್ತು ಫ ಗು ಹಳಕಟ್ಟಿಯವರ ಜನ್ಮ ದಿನ. ನಮ್ಮೆಲ್ಲರ ಭಾಗ್ಯ ಹಳಕಟ್ಟಿಯವರು ಮಾಡಿದ ಕೆಲಸವನ್ನು ಸೇವಾ ಭಾವನೆಯನ್ನು ಮುಂದುವರಿಸುತ್ತಿರುವುದು ಎಂದರು.
ಕರ್ಮ ಸಿದ್ಧಾಂತ ಕುರಿತು ಬಸವ ಮರುಳಸಿದ್ಧ ಸ್ವಾಮೀಜಿಯವರು ಮಾತನಾಡಿ ಕರ್ಮಸಿದ್ಧಾಂತ ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಕರ್ಮ ಸಿದ್ಧಾಂತ ಒಂದೊಂದು ಧರ್ಮ ದೃಷ್ಟಿಯಲ್ಲಿ ಬೇರೆ ಬೇರೆ ವ್ಯಾಖ್ಯಾನ ಪಡೆದುಕೊಳ್ಳುತ್ತವೆ ಎಂದರು.ಈ ಸಂದರ್ಭದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ‘ಅರಿವಿನ ಪರಿಧಿ’ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಬಸವರಾಜ ಸಾದರ ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ಶಿಬಿರದ ಸಂಚಾಲಕ ಮೋಟಗಿ ಮಠದ ಚೆನ್ನಬಸವ ಸ್ವಾಮೀಜಿ ಹಾಗೂ ೭೦ ಜನ ಯುವಮಠಾಧೀಶರು ಹಾಗೂ ಮರಿದೇವರುಗಳು ಉಪಸ್ಥಿತರಿದ್ದರು.
ಬೆಳಗ್ಗೆ ಶಿಬಿರಾರ್ಥಿಗಳಿಗೆ ಜಡೆ ಸಂಸ್ಥಾನ ಮಠದ ಜಡೆ ಸ್ವಾಮೀಜಿಯವರು ಯೋಗಾಸನ ನಡೆಸಿಕೊಟ್ಟರು. ಶಿವಮೊಗ್ಗದ ಬಸವಕೇಂದ್ರ ಮರುಳಸಿದ್ಧ ಸ್ವಾಮೀಜಿಯವರು ಇಷ್ಟಲಿಂಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟು, ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು.