ಸರ್ಕಾರಿ ಶಾಲೆಯಲ್ಲಿ ರಜಾ ಮಜಾ ಬೇಸಿಗೆ ಶಿಬಿರ!
– 1500ಕ್ಕೂ ಹೆಚ್ಚು ಮಕ್ಕಳು ಭಾಗಿ: ಎಲ್ಲರ ಮೆಚ್ಚುಗೆ
– ತನ್ಮ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಹೊನ್ನೇತಾಳು ಸರ್ಕಾರಿ ಶಾಲೆ ಎಲ್ಲರಿಗೂ ಮಾದರಿ
NAMMUR EXPRESS NEWS
ತೀರ್ಥಹಳ್ಳಿ: ಹೊನ್ನೇತಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಾಳಿಂಗ ಫೌಂಡೇಶನ್ ಗುಡ್ಡೇಕೇರಿ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಯಶಸ್ವಿಯಾಗಿ ನಡೆಯಿತು. ಖಾಸಗಿ ಶಾಲೆ, ಸಂಘ ಸಂಸ್ಥೆಗಳು ಶಿಬಿರ ಮಾಡೋದು ಮಾಮೂಲಿ. ಆದರೆ ಇಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ವಿಕಸನಕ್ಕೆ ಶಿಬಿರ ಮಾಡಿದ್ದು ಮಾದರಿ ಕಾರ್ಯಕ್ರಮವಾಯಿತು. ವಿವಿಧ ಸಂಘ ಸಂಸ್ಥೆ ಗಳ ಸಹಕಾರದೊಂದಿಗೆ ಆಯೋಜಿಸಿರುವ ರಜಾ ಮಜಾ ಬೇಸಿಗೆ ಶಿಬಿರ ಕ್ಕೆ ಸಹಕಾರವನ್ನು ಮೇಧಾ ಚಾರಿಟೇಬಲ್ ಟ್ರಸ್ಟ್, ಕ್ವೆಸ್ ಫೌಂಡೇಶನ್ ಬೆಂಗಳೂರು ಮತ್ತು ಕಾಳಿಂಗ ಫೌಂಡೇಶನ್ ಗುಡ್ಡೇಕೇರಿ ನೀಡಿದ್ದರು.
ದಿನಾಂಕ 1-04-24 ರಿಂದ 11-04-24ರವರೆಗೆ ಬೇಸಿಗೆ ಶಿಬಿರ ಕಾರ್ಯಕ್ರಮವು ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗಿದೆ. ಪ್ರತಿ ಬೇಸಿಗೆಯಲ್ಲೂ ಮಕ್ಕಳು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಜೇವನಾನುಭವ ಹೆಚ್ಚಿಸಿಕೊಳ್ಳುತ್ತಾರೆ. ಮಕ್ಕಳನ್ನು ಇಂತಹ ಶಿಬಿರ ಗಳಿಗೆ ಕಳುಹಿಸುವುದರಿಂದ ಅನುಕೂಲಗಳು ಬಹಳಷ್ಟು. ಹೊಸ ಸಂಗತಿಗಳ ಅಧ್ಯಯನ, ಹೊಸ ಸ್ನೇಹಿತರು, ಹೊಸ ವಿಚಾರಗಳು. ಹೀಗೆ ಮಗುವೊಂದರ ವಿಕಸನಕ್ಕೆ ಸುಂದರವಾದ ವೇದಿಕೆಯಾಗಿತ್ತು.
ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿ ಗಳಿಂದ ಸರಳ ಗಣಿತ, ಜ್ಞಾಪಕ ಶಕ್ತಿ ವೃದ್ಧಿ, ಮಕ್ಕಳ ಮನೋಆರೋಗ್ಯ ವಿಚಾರಗಳ ಬಗ್ಗೆ ವಿಶೇಷ ತರಬೇತಿಯನ್ನು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ನೀಡಲಾಯಿತು. ಒಟ್ಟು 10 ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಂದ ಮಕ್ಕಳು ಆಗಮಿಸಿದ್ದರು. ಹಾಗೂ ಈ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಪತ್ರಕರ್ತ ಶಿವಾನಂದ್ ಕರ್ಕಿ ಮತ್ತು ಡಾ. ರವಿಶಂಕರ್ ಉಡುಪ ಮತ್ತು ಡಾ.ನಮಿತಾ ಉಡುಪ ಇವರು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಹಾಗೂ 25 ಜನ ಸಂಪನ್ಮೂಲ ವ್ಯಕ್ತಿ ಗಳು ಮಕ್ಕಳಿಗೆ ಜ್ಞಾನ ವಿಕಾಸದ ಬಗ್ಗೆ ಮಾಹಿತಿಯನ್ನು ನೀಡಿದರುವುದು ಈ ಶಿಬಿರದ ವಿಶೇಷವಾಗಿತ್ತು.
1500 ಮಕ್ಕಳು ಶಿಬಿರದಲ್ಲಿ ಭಾಗಿ!
ಒಂದುವರೆ ಸಾವಿರದಷ್ಟು ಮಕ್ಕಳು ಪೋಷಕರು ಸಂಪನ್ಮೂಲ ವ್ಯಕ್ತಿಗಳು ಹತ್ತು ದಿನದಲ್ಲಿ ಅನ್ನ ದಾಸೋಹದಲ್ಲಿ ಭಾಗವಹಿಸಿದ್ದಾರೆ. ಒಟ್ಟು 40 ಜನ ಸ್ವಯಂಸೇವಕರು 10 ದಿನ ಅಡಿಗೆಯನ್ನು ಮಾಡಿರುತ್ತಾರೆ ಮತ್ತು ಬಿಸಿ ಊಟದ ವ್ಯವಸ್ಥೆಗೆ ತುಂಬಾ ಜನ ತರಕಾರಿ ಮತ್ತು ದಿನಸಿ ಸಾಮಗ್ರಿಗಳನ್ನು ನೀಡಿ ಸಹಕಾರವನ್ನು ನೀಡಿದ್ದಾರೆ.
ಸರ್ಕಾರಿ ಶಾಲೆ ಮಕ್ಕಳಿಗೆ ಇಂಗ್ಲಿಷ್ ಸ್ಪೋಕನ್ ಕ್ಲಾಸ್
ಕಾಳಿಂಗ ಫೌಂಡೇಶನ್ ಇವರು ನಿರಂತರವಾಗಿ ಕಳೆದ ಮೂರು ವರ್ಷಗಳಿಂದ ಹಳ್ಳಿ ಗಾಡಿನ ಸರ್ಕಾರಿ ಶಾಲಾ ಮಕ್ಕಳಿಗೆ ನಿರಂತರವಾಗಿ ಸ್ಪೋಕನ್ ಇಂಗ್ಲಿಷ್ ತರಗತಿಯನ್ನು ನೀಡುತ್ತಾ ಬಂದಿರುತ್ತಾರೆ. ಇವರಿಂದ ಈ ಎಲ್ಲಾ ಶಾಲೆಗಳಿಗೂ ಸಹಕಾರಿಯಾಗಿದೆ.