ಕೆಸರು ಗದ್ದೆಗಳಾದ ಪಟ್ಟಣದ ಪ್ರಮುಖ ರಸ್ತೆಗಳು
– ಬಹುತೇಕ ಕಡೆ ಸಂಚಾರ ಸ್ಥಗಿತ
– ಜಿಟಿ ಜಿಟಿ ಮಳೆ ಎಫೆಕ್ಟ್
– ಸಾರ್ವಜನಿಕರ ಸಂಚಾರ ಅಸ್ಥವ್ಯೆಸ್ಥ
ಸಿಂದಗಿ : ಜಿಲ್ಲೆಯಲ್ಲಿ ಮುಂಗಾರು ಮಳೆ ಕೈ ಕೊಟ್ಟ ಹಿನ್ನಲೆ ಎಲ್ಲಡೆ ದೇವರ ಮೊರೆ ಹೋಗುವುದು ಕಪ್ಪೆಗೆ ಮದುವೆ ಮಾಡಿಸುವುದು ಸಾಮಾನ್ಯವಾಗಿದೆ. ಆದರೆ ಸಿಂದಗಿ ಪಟ್ಟಣದ ಸ್ಥಳೀಯ ನಿವಾಸಿಗಳಿಗೆ ಮಳೆಯೇ ಕಂಟಕವಾಗಿ ನಿಂತಿದೆ. ಸತತ 4 ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಬಹುತೇಕ ಪ್ರಮುಖ ರಸ್ತೆಗಳು ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ.
ಗ್ರಾಮೀಣ ಭಾಗದ ರೈತರಿಗೆ ಈ ಮಳೆ ವರವಾಗಿ ಪರಿಣಮಿಸಿದರೆ ಪಟ್ಟಣದ ಜನತೆಗೆ ಶಾಪವಾಗಿದೆ. ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಎಲ್ಲೆಂದರಲ್ಲಿ ರಸ್ತೆಯನ್ನು ಅಗೆದು ಹಾಕಲಾಗಿದೆ ಈ ಹಿನ್ನಲೆ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿ ನಿಂತಿದ್ದು ಸಾರ್ವಜನಿಕರ ಸಂಚಾರಕ್ಕೆ ಅಸ್ಥವ್ಯಸ್ಥವಾಗಿದೆ. ಇನ್ನೂ ಬಹುತೇಕ ಕಡೆ ಸಂಚಾರವೇ ಸ್ಥಗಿತವಾಗಿದೆ.
ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತ ರಸ್ತೆ, ಮಾರುಕಟ್ಟೆ ರಸ್ತೆ, ಆನಂದ ಚಿತ್ರ ಮಂದಿರಕ್ಕೆ ಹೋಗುವ ರಸ್ತೆ ವಿವೇಕಾನಂದ ವೃತ್ತ ರಸ್ತೆ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಕೆಸರು ತುಂಬಿಕೊAಡಿದೆ. ಬಂದಾಳ ರಸ್ತೆಯಲ್ಲಿ ಚರಂಡಿ ಬ್ಲಾಕ್ ಆದ ಹಿನ್ನಲೆ ಕೊಚ್ಚೆ ನೀರು ರಸ್ತೆಗೆ ಬಂದು ನಿಂತಿದೆ. ವಿದ್ಯಾರ್ಥಿಗಳು ಶಾಲೆಗೆ ಹೋಗಲು ಈ ಕೆಸರಿನಲ್ಲಿ ಹಾದು ಹೋಗಬೇಕಿದೆ. ದ್ವಿಚಕ್ರ ವಾಹನಗಳು ಅಲ್ಲಲ್ಲಿ ಸಿಕ್ಕಿ ಬಿದ್ದಿವೆ. ಹಲವರು ಬಿದ್ದು ಕೈ, ಕಾಲು ಪೆಟ್ಟು ಮಾಡಿಕೊಂಡಿದ್ದಾರೆ ಕಾರಣ ದ್ವಿ ಚಕ್ರ ವಾಹನ ಹಾಗೂ ಸೈಕಲ್ ಸವಾರರು ಆತಂಕದಿAದ ತಿರುಗುವ ಪರಸ್ಥಿತಿ ಎದುರಾಗಿದೆ. ಪುರಸಭೆಯು ಮಳೆಗಾಲದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಹಿನ್ನಲೆ ಈ ಅವಾಂತರ ನಡೆದಿದೆ. ಪಟ್ಟಣಕ್ಕೆ ಮಳೆಯೇ ಬರುವುದು ಬೇಡ ಎನ್ನಿಸುತ್ತಿದೆ ಎಂಬುದು ಸಾರ್ವಜನಿಕೆ ಆರೋಪವಾಗಿದೆ. ಕೆಲವು ಬಡಾವಣೆಗಳಲ್ಲಿ ಮಳೆ ನೀರು ನಿಂತ ಹಿನ್ನಲೆ ಸಾಂಕ್ರಾಮಿಕ ರೋಗ ಹರಡುವು ಬೀತಿ ಎದುರಾಗಿದೆ.
ವ್ಯಾಪಾರ ವಹಿವಾಟು ಮಂದ:
ಜಿಟಿ ಜಿಟಿ ಮಳೆ ಹಿನ್ನಲೆ ಮಾರುಕಟ್ಟೆ ರಸ್ತೆ ಕೆಸರಿನಿಂದ ತುಂಬಿದ ಕಾರಣ ಗ್ರಾಹಕರು ಮಾರುಕಟ್ಟೆಯತ್ತ ಮುಖ ಮಾಡುತ್ತಿಲ್ಲ ನಮ್ಮ ಮಳಿಗೆಯ ಮುಂದೆಯೇ ಕೆಸರು ಗದ್ದೆ ನಿರ್ಮಾಣವಾಗಿದೆ. ಪುರಸಭೆ ಆಡಳಿತ ವೈಫಲ್ಯದಿಂದ ವ್ಯಾಪಾರಸ್ಥರಿಗೂ ತೊಂದರೆಯಾಗಿದೆ ಎಂಬುದು ಮಳಿಗೆ ವ್ಯಾಪಾರಿಗಳ ಆರೋಪ
ಕೋಟ್1
ಒಳ ಚರಂಡಿ ಕಾಮಗಾರಿ ಶುರುವಾಗಿ 4 ವರ್ಷ ಕಳೆದಿದೆ ಆದರೂ ಇನ್ನೂ ಶೇ 50ರಷ್ಟು ಕೆಲಸ ಮುಗಿದಿಲ್ಲ ಗುತ್ತಿಗೆದಾರ ಯಾರು ಎಂಬುದೇ ಗೊತ್ತಿಲ್ಲ ಚರಂಡಿ ಸ್ವಚ್ಚ ಮಾಡದ ಹಿನ್ನಲೆ ನೀರು ರಸ್ತೆ ಮೇಲೆ ಬರುತ್ತಿದೆ. ಪುರಸಭೆ ವತಿಯಿಂದ ಯಾವುದೇ ಮುನ್ನಚ್ಚರಿಕೆ ಕ್ರಮ ಕೈಗೊಳ್ಳದ ಕಾರಣ ಈ ಆವಾಂತರ ನಡೆದಿದೆ. ರಾಜಕೀಯ ಮಾಡಲು ಅಷ್ಟೇ ಪುರಸಭೆ ವೇದಿಕೆ ಆಗಿದೆ.
ಪ್ರಶಾಂತ ಕದ್ದರಕಿ ಕ.ನ.ಸೇ ತಾಲೂಕು ಅಧ್ಯಕ್ಷ
ಕೋಟ್2
ಅಲ್ಪ ಸ್ವಲ್ಪ ಮಳೆಯಾದರೆ ಈ ಸಂಕಷ್ಟ ಎದುರಾಗುತ್ತಿದೆ. ಹಳೇ ಎಸ್.ಬಿ.ಐ ರಸ್ತೆ ಬಹುತೇಕ ರಾಡಿಯಿಂದ ತುಂಬಿ ಹೋಗಿದೆ. ಮಳೆ ನೀರು ಹರಿದು ಹೋಗುವಂತೆ ಸ್ವಚ್ಚ ಮಾಡಬೇಕಿದೆ. ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಪದ್ಮಯ್ಯ ಮಠಪತಿ ಸ್ಥಳೀಯ ನಿವಾಸಿ
ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
HOW TO APPLY : NEET-UG COUNSELLING 2023