ತೀರ್ಥಹಳ್ಳಿಯಲ್ಲಿ ಕುಡಿದು ಲಾಂಗ್ ಬೀಸಿದರು!
– ಕುಡುಕರ ಗಲಾಟೆಗಿಲ್ಲ ಬ್ರೇಕ್: ಏನಿದು ಗಲಾಟೆ?
– ಶಿವಮೊಗ್ಗದಲ್ಲಿ ಸಾಲ ಬಾಧೆಗೆ ಉದ್ಯಮಿ ಆತ್ಮಹತ್ಯೆ
NAMMUR EXPRESS NEWS
ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಭರಣ ಜ್ಯುವೆಲ್ಲರಿ ಬಳಿ ರಾಷ್ಟ್ರೀಯ ಹೆದ್ದಾರಿಯ ಮದ್ಯ ರಸ್ತೆಯಲ್ಲಿ ತಲ್ವಾರ್ ಹಿಡಿದು ಯುವಕರು ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿದ್ದು ಇಬ್ಬರಿಗೆ ಗಾಯ ಆಗಿದೆ ಎಂದು ತಿಳಿದು ಬಂದಿದೆ. ಕಮ್ಮರಡಿಯ ಯುವಕ ರಸ್ತೆ ದಾಟುತ್ತಿದ್ದಾಗ ಕುಡಿದ ಮತ್ತಿನಲ್ಲಿದ್ದ ನಾಲ್ವರು ಸೀನಿಮಿಯ ರೀತಿಯಲ್ಲಿ ರಸ್ತೆಯಲ್ಲೇ ತಲ್ವಾರ್ ಹಿಡಿದು ಗಲಾಟೆ ಮಾಡಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ ಎನ್ನಲಾಗಿದ್ದು, ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಉದ್ಯಮದ ಸೋಲು ಸಾವಿಗೆ ತಳ್ಳಿತು!
ವ್ಯವಹಾರದಲ್ಲಿ ನಷ್ಟವಾಗಿ ಸಾಲಬಾದೆ ತಾಳಲಾರದೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಂಪನಿಯ ಉತ್ಪನ್ನಗಳ ಮಾರಾಟಕ್ಕೆ ಅಂಗಡಿ ಇಟ್ಟಿದ್ದ ಸ್ಚಾಮಿ ನಾಥನ್ ಎಂಬ 48 ವರ್ಷದ ವ್ಯಕ್ತಿಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಕಂಪನಿಯ ಉತ್ಪನ್ನಗಳಾದ ಕೃಷಿ ಉತ್ಪನ್ನಗಳು ಮತ್ತು ಇತರೆ ಗೃಹಬಳಕೆ ವಸ್ತುಗಳನ್ನಮಾರಾಟ ಮಾಡಲುಶಿವಮೊಗ್ಗದ ಮೀನಾಕ್ಷಿ ಭವನ್ ಬಳಿ ಮತ್ತೂರಿನ ನಿವಾಸಿ ಸ್ವಾಮಿನಾಥ್ ಎಂಬುವರು ಅಂಗಡಿ ಇಟ್ಟಿದ್ದರು. ಅಂಗಡಿ ಉತ್ಪನ್ನಗಳ ಖರೀದಿಗೆ 35 ರಿಂದ 40 ಲಕ್ಷ ಸಾಲ ಮಾಡಿದ್ದರು. ಅಂಗಡಿ ಲಾಭದಲ್ಲಿ ನಡೆಯದೆ ಇದ್ದ ಕಾರಣ ಸ್ವಾಮಿನಾಥನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
HOW TO APPLY : NEET-UG COUNSELLING 2023