ತೀರ್ಥಹಳ್ಳಿ ಬಿಜೆಪಿ ಕೃತಜ್ಞತಾ ಸಭೆಗೆ ಸಾವಿರಾರು ಜನ!
– ರಾಘವೇಂದ್ರ, ಬೋಜೇಗೌಡ ಅವರಿಗೆ ಅಭಿನಂದನಾ ಸಮಾರಂಭ
– ಬೈಕ್ ರ್ಯಾಲಿ ಮೂಲಕ ಕಾರ್ಯಕ್ರಮಕ್ಕೆ ಕರೆತಂದ ಕಾರ್ಯಕರ್ತರು
– ನಾಯಕರು ಹೇಳಿದ್ದೇನು…? ಎಲ್ಲೆಡೆ ಬಿಜೆಪಿಗೆ ಜಯಘೋಷ..!
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಸೋಮವಾರ ವಿದ್ಯಾದಿರಾಜ ಸಭಾ ಭವನದಲ್ಲಿ ಬಿಜೆಪಿ ವತಿಯಿಂದ ಮತದಾರರಿಗೆ ಕೃತಜ್ಞತೆ ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ಯಶಸ್ವಿಯಾಗಿ ನಡೆಸಲಾಯಿತು. ನಾಲ್ಕನೇ ಬಾರಿಗೆ ಆಯ್ಕೆಯಾದ ಸಂಸದ ಬಿ ವೈ ರಾಘವೇಂದ್ರ ಮತ್ತು ವಿಧಾನ ಪರಿಷತ್ ಆಯ್ಕೆಯಾದ ಎಸ್ ಎಲ್ ಭೋಜೆ ಗೌಡ, ಡಾ. ಧನಂಜಯ ಸರ್ಜಿ ಅವರನ್ನು ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮುಖಾಂತರ ವಿದ್ಯಾಧಿರಾಜ ಸಭಾಭವನಕ್ಕೆ ಕರೆ ತಂದರು.
ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ಈ ತಾಲೂಕಿನಲ್ಲಿ ಸಂಘಟನೆಯ ಆದರದ ಮೇಲೆ ಸಿದ್ಧಾಂತದ ಆಧಾರದ ಮೇಲೆ ಪಕ್ಷ ಕಟ್ಟಬೇಕು ಎಂದು ಅನೇಕ ಮುಖಂಡರು ನೀವೆಲ್ಲರೂ ಸೇರಿ ಈ ತಾಲೂಕಿನಲ್ಲಿ ಈ ಸಿದ್ಧಾಂತ ಮುಂದುವರಿಸಬೇಕೆಂದು ಆಶೀರ್ವಾದ ಮಾಡಿದ್ದರು. ಅದರ ಆಧಾರದ ಮೇಲೆ ಈ ತಾಲೂಕಿನಲ್ಲಿ ಸಂಘಟನೆಯನ್ನು ಕಟ್ಟಿದ್ದೇವೆ ಎಂದರು.
ಸಂಸದ ಬಿ ವೈ ರಾಘವೇಂದ್ರ ಅವರು ಮಾತನಾಡಿ, ಸದೃಢ ಸಮಾಜಕ್ಕೋಸ್ಕರ ಕೇಂದ್ರ ಸರ್ಕಾರದ ಹಾಗೂ ನಮ್ಮ ಪಕ್ಷ ಕೊಟ್ಟಂತಹ ವಿಚಾರವನ್ನು ಮನೆ ಮನೆಗೆ ತಲುಪಿಸಿ, ಸದೃಢ ಸಮಾಜಕ್ಕೋಸ್ಕರ ಒಂದು ದಾಖಲೆಯ ಅಂತರದಿಂದ ಮತವನ್ನು ಕೊಡಿಸಿ, ಮೋದಿ ಅವರನ್ನು ಗೆಲ್ಲಿಸಿ, ಡಾ. ಸರ್ಜಿ ಅವರಿಗೆ ಹಾರೈಸುತ್ತಾ, ಬೋಜೇಗೌಡರಿಗೆ ಹಾರೈಸಿದ ಹಾಗೂ ಆರಗ ಜ್ಞಾನೇಂದ್ರ ರವರನ್ನು ಬೆಂಬಲಿಸಿದ ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದರು. ನೀವು ಹಾಕಿದ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಉಸಿರಿರುವರೆಗೂ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದರು. ನಮಗೆ ಬರುವ ಅನುದಾನವನ್ನು ಕ್ರೂಡೀಕರಿಸಿ, ಕ್ಷೇತ್ರದ ಅಭಿವೃದ್ಧಿಗೆ ಮಾನ್ಯತೆಯನ್ನು ಕೊಟ್ಟು ಪ್ರಾಮಾಣಿಕವಾಗಿ ಕೆಲಸವನ್ನು ನಾವೆಲ್ಲರೂ ಒಟ್ಟಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬೋಜೆಗೌಡ ಮಾತನಾಡಿ, ಈ ಗೆಲುವು ಸಮರ್ಪಕವಾಗಿ ಸಂಪೂರ್ಣವಾಗಿ ಶಿಕ್ಷಕರಿಗೆ ಸಮರ್ಪಿಸುತ್ತೇನೆ ಎಂದರು. ಈ ಭಾಗದಲ್ಲಿ ಅಭೂತಪೂರ್ವದ ಗೆಲುವು ಆಗಿದೆ. ವಿಧಾನ ಪರಿಷತ್ತಿನ ಒಳಗೆ ನಿಮ್ಮೆಲ್ಲರ ದನಿಯಾಗಿ ನಿಲ್ಲುತ್ತೇವೆ ಎಂದರು.
ಡಾ.ಧನಂಜಯ್ ಸರ್ಜಿ ಅವರು ಮಾತನಾಡಿ, ನಮಗೆ ಕಾರ್ಯಕರ್ತ ಬಂಧುಗಳ ಮೇಲೆ ನಂಬಿಕೆ ಇದೆ. ಕಾಂಗ್ರೆಸ್ ಪೊಳ್ಳು ಭರವಸೆಯ ನಡುವೆಇಷ್ಟೆಲ್ಲ ಮತಗಳ ಅಂತರದಲ್ಲಿ ರಾಘವೇಂದ್ರ ಅವರನ್ನು ಮತ್ತು ಬೋಜೇಗೌಡ ಹಾಗೂ ಧನಂಜಯ್ ಸರ್ಜಿ ಅವರನ್ನು ಗೆಲ್ಲಿಸುವಂತ ಶಕ್ತಿ ನಮ್ಮ ಕಾರ್ಯಕರ್ತರಿಗೆ ಮಾತ್ರ ಸಾಧ್ಯ. ಎಲ್ಲರ ಪ್ರಯತ್ನದಿಂದ ಇಂದು ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವಿಗೆ ಸಾಧ್ಯವಾಯಿತು. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವಂತಹ ಸಿದ್ದಾಂತವನ್ನು ಪದೇ ಪದೇ ಪ್ರೂ ಮಾಡಿ ತೋರಿಸುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲದ ಅಧ್ಯಕ್ಷರಾದ ಹೆದ್ದೂರು ನವೀನ್ ಮಾತನಾಡಿ, ಲೋಕಸಭೆ ಮತ್ತು ರಾಜ್ಯ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ತೀರ್ಥಹಳ್ಳಿಯ ಮಂಡಲದಿಂದ ಅಭೂತಪೂರ್ವವಾದ ಮುನ್ನಡೆಯನ್ನು ಪಡೆದಂತಹ ಸಂಘಟನೆ, ಕಾರ್ಯಕರ್ತರು ಮತ್ತು ಈ ತಾಲೂಕಿನ ಮತದಾರ ಬಂಧುಗಳಿಗೆ ಧನ್ಯವಾದ ಸಲ್ಲಿಸಲು ಹಾಗೂ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಸಂಘಟನೆ ವ್ಯಕ್ತಿಗಾಗಿ ಅಲ್ಲ ಸಂಘಟನೆ ದೇಶಕ್ಕಾಗಿ. ಆದರೂ ಕೂಡ ನಾವು ಯಾರನ್ನ ಮುಂದೆ ಇಟ್ಟುಕೊಂಡು ಅವರ ಮುಖವನ್ನು ಸಮಾಜಕ್ಕೆ ತೋರಿಸಿ ಇವರ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಹೋದಾಗ ರಾಜಕೀಯ ಕ್ಷೇತ್ರದ ಕಾರ್ಯಕರ್ತರಿಗೆ ಪ್ರಮುಖವಾಗಿ ನೆನಪಾಗುವುದು ಆ ನಾಯಕನ ಹಿನ್ನೆಲೆ. ಅನೇಕ ನಾಯಕರು ಪಕ್ಷಾಂತರ ಮಾಡುವುದು ಭ್ರಷ್ಟಾಚಾರ ಮಾಡುವುದೆಲ್ಲ ಕಂಡಾಗ, ನಮ್ಮ ಅದೃಷ್ಟ ನಮ್ಮ ತೀರ್ಥಹಳ್ಳಿ ತಾಲೂಕಿನ ನಾಯಕರಾದ ಜ್ಞಾನೇಂದ್ರ ಅವರು ನಮಗೆ ಸಂಸದರಾಗಿ ನಾಲ್ಕನೇ ಬಾರಿ ಆಯ್ಕೆಯಾದ ರಾಘವೇಂದ್ರ ಅವರು ನಾಯಕರಾಗಿರುವುದು. ನಾವು ಮತದಾನ ಕೇಳಲು ಹೋದಾಗ ನಿಮ್ಮ ಅಭ್ಯರ್ಥಿ ಕೆಲಸ ಮಾಡುವುದಿಲ್ಲ ಎಂದು ಎಲ್ಲೂ ಕೂಡ ಹೇಳಲಿಲ್ಲ. ಇದು ನಮಗೆ ಶಕ್ತಿ ಕೊಡುವ ವಿಷಯ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಕುಣಜೆ ಕಿರಣ್, ಸ್ವಾಮಿರಾವ್, ರತ್ನಾಕರ್ ಶಣ್ಣಯ್ಯ, ಬಾಳೆಬೈಲು ರಾಘವೇಂದ್ರ, ಬೇಗುವಳ್ಳಿ ಸತೀಶ್, ಸಾಲೆಕೊಪ್ಪ ರಾಮಚಂದ್ರ, ಪುಣ್ಯಪಾಲ್, ಯಡೂರು ರಾಜಾರಾಮ್, ಮೇದೊಳಿಗೆ ರಾಮಸ್ವಾಮಿ, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪ್ರಮುಖರು ಮತ್ತು ಸಾವಿರಾರು ಕಾರ್ಯಕರ್ತರು ಈ ಅಭಿನಂದನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.