ತೀರ್ಥಹಳ್ಳಿಯಲ್ಲಿ ಭಾರೀ ಮಳೆ: ಹಲವೆಡೆ ಹಾನಿ
– ಉಂಟೂರು ಕಟ್ಟೆ ಕೈಮರ ಬಳಿ ಮನೆಗೆ ಬಿದ್ದ ಮರ
– ವಿದ್ಯುತ್, ನೆಟ್ವರ್ಕ್ ಹಲವೆಡೆ ಇಲ್ಲ..
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಭಾರೀ ಮಳೆಯಾಗುತ್ತಿದೆ. ಎಲ್ಲೆಡೆ ಹಾನಿ ಸಂಭವಿಸಿದೆ. ಅನೇಕ ಕಡೆ ವಿದ್ಯುತ್ ಕಂಬ, ಮರಗಳು ಬಿದ್ದಿವೆ.
ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಂಟುರು ಕಟ್ಟೆ ಕೈಮರ ಹಸಿರುಮನೆ ಎಂಬಲ್ಲಿ ತಿಮ್ಮಪ್ಪ ನಾಯಕ್ ಅವರ ಮನೆಯ ಕೊಟ್ಟಿಗೆ ಹಾಗೂ ಮನೆ ಹಿಂಭಾಗಕ್ಕೆ ಮರ ಬಿದ್ದು ಭಾರೀ ಹಾನಿಯಾಗಿದೆ.
ತಿಮ್ಮಪ್ಪ ನಾಯ್ಕ ಕೂಲಿ ಕಾರ್ಮಿಕ ಎಂಬುವರ ಮನೆ ಹಾನಿಯಾಗಿದ್ದು, ಲಕ್ಷಾಂತರ ನಷ್ಟವಾಗಿದೆ.
ಭಾರೀ ಮಳೆ : ಮಲೆನಾಡಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಎಲ್ಲಾ ಕಡೆ ಮಳೆಯಾಗುತ್ತಿದೆ.