ದಾವಣಗೆರೆ ಹುಬ್ಬಳ್ಳಿ ಟಾಪ್ 3 ನ್ಯೂಸ್..!
ಅರ್ಚಕ ದೇವೇಂದ್ರಪ್ಪಜ್ಜ ಕೊಲೆ ಕೇಸ್ ಖತಂ!
– 24 ಗಂಟೆಗಳಲ್ಲಿ ಆರೋಪಿ ಅರೆಸ್ಟ್
ಹುಬ್ಬಳ್ಳಿ: ಮಾದಕ ವಸ್ತುಗಳ ಸಾಗಾಟ..!
– ಐದು ಮಂದಿ ಬಂಧನ
ದಾವಣಗೆರೆ : ಆನಾರೋಗ್ಯಕ್ಕೆ ಬೇಸತ್ತ ದಂಪತಿ..!
– ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ
NAMMUR EXPRESS NEWS
ಹುಬ್ಬಳ್ಳಿ: ಹಾವಿನ ದ್ವೇಷ ಹನ್ನೆರಡು ವರ್ಷ, ನನ್ನ ರೋಷ ನೂರು ವರ್ಷ. ಇದು ನಾಗರಹಾವು ಸಿನಿಮಾದ ಒಂದು ಹಾಡು. ಅವತ್ತಿಗೂ, ಇವತ್ತಿಗೂ ಈ ಹಾಡು ತುಂಬಾ ಅರ್ಥಗರ್ಭಿತವಾಗಿದೆ. ನಾಗರ ಹಾವು ವಿಷ್ಣುವರ್ಧನ್ ಇಮೇಜ್ ಬದಲಿಸಿದ ಸಿನಿಮಾ. ಸಾಕಷ್ಟು ಹೆಸರು ತಂದು ಕೊಟ್ಟ ಸಿನಿಮಾ. ಇವಾಗ ಯಾಕೆ ಈ ಸಿನಿಮಾ ಬಗ್ಗೆ ಹೇಳತೀದಾರೆ ಅಂತೀರಾ. ಅಲ್ಲೆ ಇರೋದು ಅಸಲಿ ಕಥೆ. 26 ವರ್ಷದ ಹಿಂದಿನ ದ್ವೇಷಕ್ಕೆ ಅರ್ಚಕರೊಬ್ಬರ ಕೊಲೆಯಾಗಿದೆ. ಕೊಲೆ ಮಾಡಿದ ಆರೋಪಿ 26 ವರ್ಷದ ಸೇಡಿನ ಕಥೆ ಬಿಚ್ಚಿಟ್ಟಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಅರ್ಚಕನ ಕೊಲೆಗೆ ಕಾರಣ ರೀವಿಲ್ ಆಗಿದೆ. ಆರೋಪಿನೆ ಕೊಲೆಯ ರಹಸ್ಯ ಬಾಯಿಬಿಟ್ಟಿದ್ದಾನೆ. 26 ವರ್ಷದ ದ್ವೇಷ, ಪ್ರೀತಿ, ಮಾಟ ಮಂತ್ರ ಇವೆಲ್ಲವೂ ಅರ್ಚಕನ ಕೊಲೆಗೆ ಕಾರಣವಾಗಿದೆ.
ಕೇವಲ 24 ಗಂಟೆಯಲ್ಲಿ ಆರೋಪಿ ಬಂಧನ: ಹುಬ್ಬಳ್ಳಿಯ ಈಶ್ವರ ನಗರದಲ್ಲಿನ ನಡೆದಿದ್ದ ವೈಷ್ಣವಿ ದೇವಿ ದೇವಸ್ಥಾನದ ಧರ್ಮದರ್ಶಿ ದೇವೇಂದ್ರಪ್ಪಜ್ಜನ ಕೊಲೆ ಮಾಡಿದ ಆರೋಪಿಯನ್ನು ಕೇವಲ 24 ಗಂಟೆಯಲ್ಲಿ ಬಂಧನ ಮಾಡುವಲ್ಲಿ ಹು-ಧಾ ಕಮಿಷನರೇಟ್’ನ ಪೊಲೀಸರು ಕೊನೆಗೂ ಸಕ್ಸಸ್ ಆಗಿದ್ದು ಕೊಲೆ ಆರೋಪಿ ಕಮರಿಪೇಟ್ ಏರಿಯಾದ 44 ವರ್ಷದ ಸಂತೋಷ್ ಸುಣಗಾರ. ರವಿವಾರ ಧಾರವಾಡದಲ್ಲಿ ನಡೆದ ವೀರಶೈವ ಲಿಂಗಾಯತ ಚುನಾವಣೆಯಲ್ಲಿ ಮತ ಹಾಕಿ ಈಶ್ವರ ನಗರದಲ್ಲಿನ ವೈಷ್ಣವಿ ದೇವಸ್ಥಾನಕ್ಕೆ ಬಂದಿದ್ದ ದೇವೇಂದ್ರಪ್ಪಜ್ಜ ರಾತ್ರಿ 8 ಗಂಟೆಯ ಸುಮಾರಿಗೆ ದೇವಸ್ಥಾನದ ಹಿಂಬದಿಯ ಗೇಟ್ ಹಾಕಲು ಹೋದಾಗ ಅಪರಿಚಿತ ದೇವೇಂದ್ರಪ್ಪಜ್ಜನ ಹೊಟ್ಟೆ ಹಾಗೂ ಬೆನ್ನು ಸೇರಿದಂತೆ ದೇಹದ ಐದಾರು ಕಡೆಯಲ್ಲಿ ಚಾಕು ಇರಿದು ಪರಾರಿಯಾಗಿದ್ದ.
ಇತ್ತ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ದೇವೇಂದ್ರಪ್ಪಜ್ಜನನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೊಲೆಗರನ ಪತ್ತೆಗೆ ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಕೊಲೆ ಮಾಡಿದ ಸ್ಥಳದಲ್ಲಿ ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾ ಹಾಗೂ ವಿದ್ಯುತ್ತ ದೀಪ ಇಲ್ಲದೆ ಇರೋದ್ರಿಂದ ಆರೋಪಿಯ ಸುಳಿವನ್ನು ಹಟ್ಟೋದು ಕೂಡಾ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಆದ್ರೂ ಕೂಡಾ ಕಮಿಷನರ್ ಮಾರ್ಗದರ್ಶನದಲ್ಲಿ ಹಲವು ಆಯಾಮಗಳಿಂದ ಪೊಲೀಸರು ತನಿಖೆ ಶುರು ಮಾಡಿದಾಗ ಹಲವು, ಬೆಳಕಿನ ಸಮಯದಲ್ಲಿ ಆರೋಪಿ ಸಂತೋಷ ಓಡಾಡಿದ ದ್ರಶ್ಯ ಕೆಲವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಇತ್ತ ಕೊಲೆ ಮಾಡಿದ ಆರೋಪಿ ಸಂತೋಷ ಸುಣಗಾರ ಕಮರಿಪೇಟ್ ನಲ್ಲಿನ ತನ್ನ ಮನೆಗೆ ಹೋಗಿ ಆರಾಮಾಗಿ ಮಲಗಿದ್ದ, ಮಾರನೆ ದಿನ ಎದ್ದು ತನ್ನ ಹೆಂಡತಿಗೆ ಕೂಡಾ ತಾನು ಮಾಡಿದ ಕೊಲೆಯ ಬಗ್ಗೆ ಹೇಳಿದಾಗ ಹೆಂಡತಿ ಕೂಡಾ ಯಾಕೆ ಈ ರೀತಿಯಾಗಿ ಮಾಡಿದ್ರಿ ಅಂತಾ ಬೈದಿದ್ದಾಳೆ. ಅಷ್ಟೋತ್ತಿಗಾಗಲೇ ಆರೋಪಿಯ ಗುರುತನ್ನು ಪೊಲೀಸರು ಪತ್ತೆ ಮಾಡಿದ್ದರು. ಸೋಮವಾರ ಸಂಜೆ ಚೆನ್ನಮ್ಮ ಸರ್ಕಲ್ ಬಳಿ ಬಂದಿದ್ದ ಸಂತೋಷ್ ಪರಿಚಯದವರ ಬಳಿ ಹಣವನ್ನು ಪಡೆದು ಬಾರ್ಗೆ ಸಾರಾಯಿ ಕುಡಿಯಲು ಹೋದಾಗ ಪೊಲೀಸರು ಆತನನ್ನು ಬಂಧನ ಮಾಡಿದ್ದಾರೆ.
ಡ್ರಗ್ಸ್ ಸಾಗಾಟ: ಐದು ಮಂದಿ ಬಂಧನ!
ಹುಬ್ಬಳ್ಳಿ: ಇಲ್ಲಿನ ಗಬ್ಬರು ವೃತ್ತದ ಬಳಿ ಮಂಗಳವಾರ ಮಾದಕ ವಸ್ತು (ಅಫೀಮ್) ಸಾಗಾಟ ಮಾಡುತ್ತಿದ್ದ ಐದು ಮಂದಿಯನ್ನು ಕಸಬಾ ಠಾಣೆ ಪೊಲೀಸರು ಬಂಧಿಸಿ, ₹1.50 ಲಕ್ಷ ಮೌಲ್ಯದ 150 ಗ್ರಾಮ್ ಅಫೀಮ್ ಹಾಗೂ 3 ಕೆ.ಜಿ ಅಫೀಮ್ ಗಿಡದ ಪೌಡರ್ (ಪೊಪೆಸ್ಟ್ರಾ) ವಶಪಡಿಸಿಕೊಂಡಿದ್ದಾರೆ. ಜುಗತ್ರಾಮ್ ಪಟೇಲ್, ಹೇಮರಾಜ ಬಿಷ್ಟೋವಿ, ಧನರಾಮ ಪಟೇಲ್, ಶ್ರವಣಕುಮಾರ ಬಿಷ್ಟೋವಿ ಮತ್ತು ಓಂಪ್ರಕಾಶ ಬಿಷ್ಟೋವಿ ಬಂಧಿತರು. ಆರೋಪಿಗಳೆಲ್ಲ ರಾಜಸ್ಥಾನ ಮೂಲದವರಾಗಿದ್ದು, ಶಿವಮೊಗ್ಗ, ಶಿರಸಿ, ಕುಮಟಾ ಮತ್ತು ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದರು. ರಾಜಸ್ಥಾನ, ಗುಜರಾತನಿಂದ ಮಾದಕ ವಸ್ತುಗಳನ್ನು ತಂದು, ರಾಜ್ಯದ ವಿವಿಧೆಡೆ ಸಾಗಿಸುತ್ತಿದ್ದರು ಎಂದು ಆರೋಪಿಗಳ ವಿಚಾರಣೆಯಲ್ಲಿ ತಿಳಿದು ಬಂದಿದೆ. ಈ ದಂಧೆಯಲ್ಲಿ ಪಾಲ್ಗೊಂಡಿರುವ ರಾಜಸ್ಥಾನಿ, ಗುಜರಾತಿ ಆರೋಪಿಗಳು ರಾಜ್ಯದ ವಿವಿಧೆಡೆ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ಹಾಗೂ ವ್ಯಕ್ತಿಗಳನ್ನಷ್ಟೇ ಸಂಪರ್ಕಿಸಿ ಮಾದಕ ವಸ್ತುಗಳ ಸಾಗಾಟ, ಮಾರಾಟ ಮಾಡುತ್ತಾರೆ. ಅಫೀಮ್ ಅನ್ನು ನೀರಿನಲ್ಲಿ ಮಿಶ್ರಣ ಮಾಡಿ ಕುಡಿದರೆ ಉನ್ಮಾದ ಹೆಚ್ಚುತ್ತದೆ. ಅದಕ್ಕಾಗಿ ಇದರ ಬಳಕೆ ಹೆಚ್ಚಾಗುತ್ತಿದೆ. ತನಿಖೆ ಮುಂದುವರಿದಿದ್ದು, ಮತ್ತಷ್ಟು ಮಂದಿ ಬಂಧನವಾಗುವ ಸಾಧ್ಯತೆಯಿದೆ’ ಎಂದು ಕಮಿಷನರ್ ಎನ್. ಶಶಿಕುಮಾರ್ ಹೇಳಿದರು. ರಾಜಸ್ಥಾನ ಮತ್ತು ಗುಜರಾತನಿಂದ ರಾಜ್ಯಕ್ಕೆ ಮಾದಕ ವಸ್ತುಗಳು ಸುಲಭವಾಗಿ ಬರುತ್ತದೆ. ವ್ಯಾಪಾರ ವಹಿವಾಟಿಗೆ ತೆರಳುವವರು ಬರುವಾಗ ಜೊತೆಯಲ್ಲಿ ತೆಗೆದುಕೊಂಡು ಬಂದು ಸಂಗ್ರಹಿಸುತ್ತಾರೆ. ಹುಬ್ಬಳ್ಳಿಯಿಂದ ಕರಾವಳಿ, ಶಿವಮೊಗ್ಗ ಭಾಗಕ್ಕೆ ಬಸ್ನಲ್ಲಿ ಔಷಧಿ ಹಾಗೂ ಇತರ ವಸ್ತುಗಳ ಪಾರ್ಸೆಲ್ ನೆಪದಲ್ಲಿ ಸಾಗಾಟ ಮಾಡಲಾಗುತ್ತದೆ’ ಎಂದು ವಿವರಿಸಿದರು.
ಆನಾರೋಗ್ಯಕ್ಕೆ ಬೇಸತ್ತು ಕ್ರಿಮಿನಾಶಕ ಸೇವಿಸಿ ದಂಪತಿ ಆತ್ಮಹತ್ಯೆ!
ದಾವಣಗೆರೆ: ಆನಾರೋಗ್ಯಕ್ಕೆ ಬೇಸತ್ತು ಕ್ರಿಮಿನಾಶಕ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಷಣ್ಮುಖಪ್ಪ(65), ಇಂದ್ರಮ್ಮ(50) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಷಣ್ಮುಖಪ್ಪ ಮೃತಪಟ್ಟಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂದ್ರಮ್ಮ ಪ್ರಾಣ ಬಿಟ್ಟಿದ್ದಾರೆ.
ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ದಂಪತಿಗೆ ಮಕ್ಕಳಿರಲಿಲ್ಲ. ಇಳಿ ವಯಸ್ಸಿನಲ್ಲಿ ನಮ್ಮ ಆರೈಕೆ ಮಾಡುವರು ಯಾರೆಂದು ಬೇಸತ್ತು ಇಬ್ಬರೂ ಕ್ರಿಮಿನಾಶಕ ಸೇವಿಸಿದ್ದಾರೆ. ವಿಚಾರ ತಿಳಿದ ಅಕ್ಕ-ಪಕ್ಕದ ಮನೆಯವರು ತಕ್ಷಣ ದಂಪತಿಯನ್ನು ಆಸ್ಪತ್ರೆಗೆ ಸೇರಿಸಲು ಶಿವಮೊಗ್ಗಕ್ಕೆ ತೆರಳಿದ್ದಾರೆ. ಈ ವೇಳೆ ಷಣ್ಮುಖಪ್ಪ ಮಾರ್ಗ ಮಧ್ಯೆ ಮೃತಪಟ್ಟಿದ್ದು ಇಂದ್ರಮ್ಮ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಇಂದ್ರಮ್ಮ ಕೂಡ ಪ್ರಾಣ ಬಿಟ್ಟಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.