ಹೊಸದುರ್ಗದಲ್ಲಿ ಸಂಭ್ರಮದ ವಾಲ್ಮೀಕಿ ಜಯಂತಿ
– ವಾಲ್ಮೀಕಿ ಭಾವಚಿತ್ರ ಭವ್ಯ ಮೆರವಣಿಗೆ: ವೇದಿಕೆ ಕಾರ್ಯಕ್ರಮ
– ಶಾಸಕ ಗೋವಿಂದಪ್ಪ, ಎಂಎಲ್ಸಿ ನವೀನ್, ಸದ್ಗುರು ಪ್ರದೀಪ್ ಸೇರಿ ಅನೇಕ ಗಣ್ಯರು ಹಾಜರ್
NAMMUR EXPRESS NEWS
ಹೊಸದುರ್ಗ: ಅದಿಕವಿ ವಾಲ್ಮೀಕಿ ಮಹರ್ಷಿಗಳು ರಾಮಾಯಣವನ್ನು ರಚಿಸದೆ ಹೋಗದಿದ್ದರೆ, ಜಗತ್ತಿಗೆ ಶ್ರೀರಾಮಚಂದ್ರನ ಪರಿಚಯವಾಗುತ್ತಿರಲಿಲ್ಲ, ರಾಮನನ್ನು ನೆನೆಯುವ ಮನ್ನ, ವಾಲ್ಮೀಕಿ ಮಹರ್ಷಿಗಳನ್ನು ನೆನೆಯಬೇಕೆಂದು ಆಹಾರ ನಿಗಮದ ಅಧ್ಯಕ್ಷ, ಶಾಸಕ ಬಿ.ಪಿ. ಗೋವಿಂದಪ್ಪ ಅಭಿಮತ ವ್ಯಕ್ತಪಡಿಸಿದ್ದಾರೆ.
ಹೊಸದುರ್ಗ ನಗರದ ಅಶೋಕ ರಂಗಮಂದಿರದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ, ಹೊಸದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಂಎಲ್ಸಿ ನವೀನ್, ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷೆ ಗೀತಾ ಗಜೇಂದ್ರ, ತಹಸೀಲ್ದಾರ್ ತಿರುಪತಿ ಪಾಟೀಲ್, ಉದ್ಯಮಿ ಸದ್ಗುರು ಪ್ರದೀಪ್, ಮುಖಂಡರು, ರಾಜ್ಯ ನಾಯಕ ವಾಲ್ಮೀಕಿ ಮಹಾ ಸಭಾ ಯುವ ಘಟಕ ರಾಜ್ಯ ಉಪಾಧ್ಯಕ್ಷ ಬಸವರಾಜ್ ತುಂಬಿನಕೆರೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು, ಕೆ.ಟಿ. ರಂಗನಾಥ ಇದ್ದರು.