ತೀರ್ಥಹಳ್ಳಿ ವ್ಯಕ್ತಿ ಸಾಗರದಲ್ಲಿ ಕತ್ತು ಕೋಯ್ದುಕೊಂಡ!
– ಖಾಸಗಿ ಲಾಡ್ಜ್ ಅಲ್ಲಿ ಆತ್ಮಹತ್ಯೆ ಯತ್ನ: ಆಸ್ಪತ್ರೆಗೆ ದಾಖಲು
– ಕಡೂರು: ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಳವು: ಓರ್ವ ಅರೆಸ್ಟ್!
– ಶಿವಮೊಗ್ಗದಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಸಿಕ್ಕಿಬಿದ್ದ ಹುಡುಗಿಯರು!
NAMMUR EXPRESS NEWS
ಸಾಗರ: ಸಾಗರದ ಖಾಸಗಿ ಲಾಡ್ಜೊಂದರಲ್ಲಿ ತೀರ್ಥಹಳ್ಳಿ ಮೂಲದ ಅಪರಿಚಿತ ವ್ಯಕ್ತಿಯಿಂದ ಆತ್ಮಹತ್ಯೆಗೆ ಯತ್ನ ನಡೆದ ಘಟನೆ ಶುಕ್ರವಾರ ವರದಿಯಾಗಿದೆ. ಸಾಗರದ ಬಿಎಚ್ ರಸ್ತೆಯಲ್ಲಿ ರುವ ಖಾಸಗಿ ಲಾಡ್ಜೊಂದರಲ್ಲಿ ಶುಕ್ರವಾರ ಬೆಳಗ್ಗೆ ತೀರ್ಥಹಳ್ಳಿ ಮೂಲದ ಸುನಿಲ್ ಎಂಬ ವ್ಯಕ್ತಿ ತನ್ನ ಕೈ ಮತ್ತು ಕುತ್ತಿಗೆ ಕೊಯ್ದು ಕೊಂಡು ರಕ್ತದ ಮಡಿವಿನಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಗ್ಗೆ ಎಂಬ ಮಾಹಿತಿ ಲಭ್ಯವಾಗಿದೆ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ತೀರ್ಥಹಳ್ಳಿ ಮೂಲದ ವ್ಯಕ್ತಿ ಸಾಗರಕ್ಕೆ ಬಂದು ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂಬ ಬಗ್ಗೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಳವು: ಓರ್ವ ಅರೆಸ್ಟ್!
ಕಡೂರು: ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ಪಂಚನಹಳ್ಳಿ ಪೊಲೀಸ್ ಠಾಣೆ ಮತ್ತು ತಂಡ, ಮೋಟಾರ್ ಸೈಕಲ್ ಕಳವು ಮಾಡಿದ್ದ ಓರ್ವ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಪತ್ತೆ ಮಾಡಿ, ಬೈಕ್ ಸೇರಿದಂತೆ ಕಡೂರಿನಲ್ಲಿ ಕಳವು ಮಾಡಿದ್ದ ಇನ್ನೊಂದು ಮೋಟಾರ್ ಸೈಕಲ್ ಒಟ್ಟು ಎರಡು ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ನೆಳಮಾಳಿಗೆಯಲ್ಲಿ ವೇಶ್ಯಾವಾಟಿಕೆ: 3 ಯುವತಿಯರ ರಕ್ಷಣೆ
ಶಿವಮೊಗ್ಗ : ಶಿವಮೊಗ್ಗದಲ್ಲಿ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಗಾಂಧಿ ನಗರದ 1 ನೇ ಪ್ಯಾರಲಲ್ ರಸ್ತೆಯಲ್ಲಿದ್ದ ಅಡ್ಡೆ ಮೇಲೆ ರೇಡ್ ಮಾಡಿದ್ದಾರೆ. ಈ ಸಂಬಂಧ ಸಾರ್ವಜನಿಕರು ನೀಡಿದ್ದ ದೂರಿನನ್ವಯ ದಾಳಿ ನಡೆಸಲಾಗಿದೆ. ಇಲ್ಲಿನ ಕಟ್ಟಡವೊಂದರ ನೆಲಮಾಳಿಗೆಯನ್ನು ಕಂಟ್ರಾಕ್ಟರ್ ಕಚೇರಿ ಹಾಗೂ ಗೋಡೌನ್ ಗಾಗಿ ಬಾಡಿಗೆ ಪಡೆಯಲಾಗಿತ್ತು. ಆದರೆ ಅಲ್ಲಿ, ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು ಎಂದು ಆರೋಪಿಸಲಾಗಿದೆ. ಈ ಸಂಬಂಧ ಮಾಹಿತಿ ಪಡೆದು ರೇಡ್ ನಡೆಸಿದ ಅಧಿಕಾರಿಗಳು, ಮೂವರು ಯುವತಿಯರನ್ನು ರಕ್ಷಿಸಿ ಇಬ್ಬರನ್ನ ಬಂಧಿಸಿದ್ದಾರೆ.