ಟಾಪ್ ನ್ಯೂಸ್ ಶಿವಮೊಗ್ಗ
ತೀರ್ಥಹಳ್ಳಿ: ನದಿಗೆ ಹಾರಿ ಅಜ್ಜಿ ಆತ್ಮಹತ್ಯೆ!
– ಶಿವಮೊಗ್ಗ : ಬೈಕ್ ಶೋ ರೂಂನಲ್ಲಿ ಭಾರೀ ಬೆಂಕಿ
– ಶಿವಮೊಗ್ಗ: ರಸ್ತೆಗೆ ಬಡಿದ ಸಿಡಲು: ರಸ್ತೆ ಹೊಂಡ!
– ಭದ್ರಾವತಿ: ಲಾಭದ ಆಸೆಗೆ ಬಿದ್ದು 21 ಲಕ್ಷ ಕಳೆದುಕೊಂಡ ಕೃಷಿಕ
– ಶಿವಮೊಗ್ಗ : ಸಕೆಂಡ್ ಹ್ಯಾಂಡ್ ಕಾರು ಶೋ ರೂಂನಿಂದ ಕಾರು ಕಳವು
NAMMUR EXPRESS NEWS
ತೀರ್ಥಹಳ್ಳಿ: ಮಹಿಳೆಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೀರ್ಥಹಳ್ಳಿ ತಾಲೂಕು ಕಲ್ಮನೆ ಬಳಿ ನಡೆದಿದೆ. ರಾಧಮ್ಮ ಮೇಲಿನ ಕಲ್ಮನೆ (84) ಮೃತರು. ಇವರಿಗೆ ಸಾಲ ಇತ್ತು ಎನ್ನಲಾಗಿದೆ. ಮಾಗರವಳ್ಳಿ ಸೊಸೈಟಿಯಲ್ಲಿ ಸಾಲ ಹಾಗೂ ಮನೆ ದಾಖಲಾತಿ ಸಮಸ್ಯೆ ಇಂದ ಮನನೊಂದು ಅ. 16ರಂದು ಮನೆಯಿಂದ ಕಾಣೆಯಾಗಿದ್ದರು. ಅ. 20ರಂದು ಹೊಸಹಳ್ಳಿ ಗ್ರಾಮ ನಾಗಲಾಪುರ ಬಳಿ ಶವ ಪತ್ತೆಯಾಗಿದ್ದು, ನೋಡಿದವರು ಹೇಳಿದ್ದಾರೆ. ಆಗುಂಬೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಓರ್ವ ಮಗ ಇದ್ದಾರೆ.
ಶಿವಮೊಗ್ಗ : ಬೈಕ್ ಶೋ ರೂಂನಲ್ಲಿ ಭಾರೀ ಬೆಂಕಿ!
ಶಿವಮೊಗ್ಗ ನಗರದ ಬೈಪಾಸ್ ರಸ್ತೆ ಬಳಿಯಿರುವ ಕಾರ್ತಿಕ್ ಬೈಕ್ ಶೋ ರೂಂನಲ್ಲಿ, ಅ. 21ರ ಸೋಮವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಸದ್ಯ ಕಟ್ಟಡದಲ್ಲಿನ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದುಬಂದಿದೆ. ಕಟ್ಟಡದಿಂದ ಭಾರೀ ಪ್ರಮಾಣದ ದಟ್ಟ ಹೊಗೆ ಹೊರಬರುತ್ತಿತ್ತು. ಸ್ಥಳದಲ್ಲಿ ನೂರಾರು ನಾಗರೀಕರು ಜಮಾಯಿಸಿದ್ದರು. ಇದರಿಂದ ಕೆಲ ಸಮಯ ಎನ್.ಟಿ. ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
– ಶಿವಮೊಗ್ಗ: ರಸ್ತೆಗೆ ಬಡಿದ ಸಿಡಲು: ರಸ್ತೆ ಹೊಂಡ!
ಶಿವಮೊಗ್ಗ: ಸಿಡಿಲು ಅಪ್ಪಳಿಸಿ ರಸ್ತೆ ಹಾನಿಗೀಡಾದ ಘಟನೆ ಹುಲಿ ಮತ್ತು ಸಿಂಹಧಾಮ ಸಮೀಪದ ಮುದ್ದಿನಕೊಪ್ಪದಲ್ಲಿ ಸಂಭವಿಸಿದೆ. ಸಿಡಿಲು ಅಪ್ಪಳಿಸಿ ರಸ್ತೆ ಹಾನಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆಯಲ್ಲಿ ಡಾಂಬರ್ ಕಿತ್ತು ಬಂದಿದೆ. ಈ ಸಂದರ್ಭ ಈ ಮಾರ್ಗದಲ್ಲಿ ಯಾರೂ ಸಂಚರಿಸುತ್ತಿರಲಿಲ್ಲ ಎಂದು ಹೇಳಲಾಗಿದೆ. ಅಧಿಕಾರಿಗಳ ಪರಿಶೀಲನೆ ಬಳಿಕವೆ ಸಿಡಿಲು ಅಪ್ಪಳಿಸಿದೆಯೊ ಇಲ್ಲವೊ ಅನ್ನುವುದು ಖಚಿತವಾಗಲಿದೆ.
– ಭದ್ರಾವತಿ: ಲಾಭದ ಆಸೆಗೆ ಬಿದ್ದು 21 ಲಕ್ಷ ಕಳೆದುಕೊಂಡ ಕೃಷಿಕ!
ಭದ್ರಾವತಿ: ಟೆಲಿಗ್ರಾಂ ಆಪ್ನಲ್ಲಿ ಮೆಸೇಜ್ ಮಾಡಿ ಟ್ರಾವೆಲ್ಸ್ ಗ್ರೂಪ್ಗೆ ಹಣ ಹೂಡಿಕೆ ಮಾಡಿದರೆ, ಶೇ.30ರಷ್ಟು ಕಮಿಷನ್ ಮತ್ತು ಪಾರ್ಟ್ ಟೈಮ್ ಉದ್ಯೋಗ ಕೊಡುವ ಭರವಸೆ ನೀಡಿ 21.90 ಲಕ್ಷ ರೂ. ವಂಚಿಸಲಾಗಿದೆ. ಭದ್ರಾವತಿ ತಾಲೂಕಿನ ಕೃಷಿಕರೊಬ್ಬರು ವಂಚನೆಗೊಳಗಾಗಿದ್ದಾರೆ. ಟ್ರಾವೆಲ್ಸ್ ಪಾರ್ಟ್ನರ್ ಇಂಡಿಯಾ, 91 ಕ್ಲಬ್ ಸರ್ವಿಸ್ ಎಂಬ ಹೆಸರು ಬಳಸಿ ಕೃಷಿಕರೊಬ್ಬರಿಗೆ ಮೆಸೇಜ್ ಕಳುಹಿಸಲಾಗಿತ್ತು. ಅಧಿಕ ಲಾಭದ ಆಸೆಗೆ ಬಿದ್ದ ಕೃಷಿಕ ತನ್ನ ಬ್ಯಾಂಕ್ ಖಾತೆ, ಫೋನ್ ಪೇ ಮತ್ತು ಚಕ್ ಮೂಲಕವು ಹಣ ಪಾವತಿಸಿದ್ದಾರೆ. ಸತತ ಒಂದು ತಿಂಗಳು ಹಂತ ಹಂತವಾಗಿ 21.90 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಲಾಭಾಂಶ ದೊರೆಯದಿದ್ದಾಗ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ. ಈ ಹಿನ್ನೆಲೆ, ಅಮ್ರಿತ್ ಪಾಟೇಲ್, ದಿವ್ಯ ದರ್ಶಿನಿ, ಸಾರಿಕಾ ಎಂಬುವವರ ಹೆಸರುಗಳನ್ನು ಉಲ್ಲೇಖಿಸಿ ಕೃಷಿಕ ದೂರು ನೀಡಿದ್ದಾರೆ. ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಶಿವಮೊಗ್ಗ : ಸಕೆಂಡ್ ಹ್ಯಾಂಡ್ ಕಾರು ಶೋ ರೂಂನಿಂದ ಕಾರು ಕಳವು
ಶಿವಮೊಗ್ಗ : ಸಿಸಿಟಿವಿ ಕ್ಯಾಮರಾಗೆ ಮುಖ ಕಾಣದಂತೆ ಛತ್ರಿ ಅಡ್ಡ ಹಿಡಿದು ಕಳ್ಳನೊಬ್ಬ ಸಕೆಂಡ್ ಹ್ಯಾಂಡ್ ಕಾರು ಶೋ ರೂಂನಿಂದ ಕಾರು ಕಳವು ಮಾಡಿದ್ದಾನೆ. ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ಸಕೆಂಡ್ ಹ್ಯಾಂಡ್ ಕಾರು ಶೋ ರೂಂನಲ್ಲಿ ಘಟನೆ ಸಂಭವಿಸಿದೆ. ಯುಸುಫ್ ಖಾನ್ ಎಂಬುವವರಿಗೆ ಸೇರಿದ ಸಕೆಂಡ್ ಹ್ಯಾಂಡ್ ಕಾರು ಶೋ ರೂಂನಲ್ಲಿ ಎರಟಿಗಾ ಕಾರನ್ನು ಮಾರಾಟಕ್ಕೆ ಇಡಲಾಗಿತ್ತು. ರಾತ್ರಿ ಕಳ್ಳನೊಬ್ಬ ಕಾರು ಶೋ ರೂಂನ ಹಿಂಬದಿಯಿಂದ ಒಳ ನುಗ್ಗಿದ್ದ. ಸಿಸಿಟಿವಿಯಲ್ಲಿ ಮುಖ ಕಾಣಬಾರದು ಅಂತಾ ಛತ್ರಿ ಅಡ್ಡ ಹಿಡಿದು ಶೋ ರೂಂನಲ್ಲಿ ಓಡಾಡಿದ್ದ. ಬಳಿಕ ಕೀಗಳಿರುವ ಬಾಕ್ಸ್ನಿಂದ ಕಳ್ಳ ಕಾರಿನ ಕೀ ತೆಗೆದುಕೊಂಡಿದ್ದ. ಎರಿಟಿಗಾ ಕಾರಿನ ಮುಂದೆ ಇದ್ದ ಒಂದು ಕಾರನ್ನು ಹೊರಗೆ ನಿಲ್ಲಿಸಿ, ಬಳಿಕ ಎರಿಟಿಗಾ ಕಾರನ್ನು ಕೊಂಡಿಯ್ದಿದ್ದಾನೆ. ಮರುದಿನ ಬೆಳಗ್ಗೆ ಶೋ ರೂಂಗೆ ಸಿಬ್ಬಂದಿಗಳು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.