ಆರೋಗ್ಯ ಎಕ್ಸ್ ಪ್ರೆಸ್!
ಗಂಟಲು ನೋವಿನಿಂದ ಬಳಲುತ್ತಿದ್ದೀರಾ??
* ಇಲ್ಲಿದೆ ಗಂಟಲು ನೋವಿಗೆ ಸುಲಭವಾದ ಮನೆಮದ್ದು!
NAMMUR EXPRESS NEWS
ಚಳಿಗಾಲದ ಸಂದರ್ಭದಲ್ಲಿ ಶೀತ ಹಾಗೂ ಕೆಮ್ಮಿನ ಸಮಸ್ಯೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕಾಗಿ ನಮ್ಮ ದೇಹದ ತಾಪಮಾನವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿಕೊಂಡು, ಆರೋಗ್ಯಕರವಾದ ಆಹಾರ ಸೇವನೆ ಮಾಡುತ್ತಾ ಬಂದರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿ ನಮಗೆ ಸಹಾಯ ಮಾಡುತ್ತದೆ.
ಚಳಿಗಾಲದ ಸಂದರ್ಭದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಹೊಂದಿಕೊಂಡಂತೆ ಗಂಟಲು ನೋವು ಬಹುತೇಕ ಜನರಲ್ಲಿ ಸಾಮಾನ್ಯವಾಗಿರುತ್ತದೆ. ಯಾರಿಗೆ ಗಂಟಲು ನೋವು ಹೆಚ್ಚಾಗಿರುತ್ತದೆ ಅವರಿಗೆ ರಾತ್ರಿಯ ಸಮಯದಲ್ಲಿ ನಿದ್ರೆ ಬರುವುದಿಲ್ಲ, ಏನನ್ನಾದರೂ ತಿನ್ನಲು, ಕುಡಿಯಲು, ನುಂಗಲು ಕಷ್ಟವಾಗುತ್ತದೆ.
ಆದರೆ ಇದಕ್ಕೆ ಭಯಪಡುವ ಅಗತ್ಯವಿಲ್ಲ. ಏಕೆಂದರೆ ಇಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಹಲವಾರು ಮನೆಮದ್ದುಗಳು ಪರಿಹಾರದ ರೂಪದಲ್ಲಿ ಕೆಲಸ ಮಾಡುತ್ತವೆ.
* ಬಿಸಿ ಬಿಸಿ ಶುಂಠಿ ಚಹಾ ಕುಡಿಯಿರಿ
ಮಳೆಗಾಲ ಬಂತೆಂದರೆ ಹಲವರಿಗೆ ಎದುರಾಗುವ ಸಮಸ್ಯೆಯೆಂದರೆ ಅದು ನೆಗಡಿ, ಕೆಮ್ಮು, ಜೊತೆಗೆ ಗಂಟಲು ನೋವು ಹೇಳದೇ ಕೇಳದೇ ಬರುವ ಈ ಆರೋಗ್ಯ ಸಮಸ್ಯೆಗಳು, ಸಿಕ್ಕಾಪಟ್ಟೆ ಟೆನ್ಷನ್ ಮಾಡಿ ಬಿಡುತ್ತದೆ…
ಆದರೆ ಇಂತಹ ಸಮಯದಲ್ಲಿ ಶುಂಠಿ ಚಹಾ ಬೇರೆಲ್ಲಾ ಔಷಧಿಗಳಿಗಿಂತ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಸುತ್ತಲಿನ ಪ್ರಕೃತಿಯ ವ್ಯತ್ಯಾಸದಿಂದ ಉಂಟಾದ ಇಂತಹ ಸಮಸ್ಯೆಗಳನ್ನು ಕ್ಷಣ ಮಾತ್ರದಲ್ಲಿ ನಿವಾರಣೆ ಮಾಡುವ ಶಕ್ತಿ ಶುಂಠಿ ಚಹಾಕ್ಕೆ ಇದೆ. ಅದರಲ್ಲೂ ಗಂಟಲು ನೋವಿನ ಸಮಸ್ಯೆಗೆ ಬಿಸಿ ಬಿಸಿ ಶುಂಠಿ ಚಹಾ ಬೆಸ್ಟ್ ಮನೆಮದ್ದು.
* ಜೇನುತುಪ್ಪ ಸೇವನೆ ಮಾಡಿ
ಶೀತದ ಸಂದರ್ಭದಲ್ಲಿ ಎದುರಾಗುವ ಗಂಟಲು ನೋವಿನ ಪರಿಹಾರಕ್ಕೆ ಜೇನುತುಪ್ಪ ಅತ್ಯದ್ಭುತ ಪ್ರಯೋಜನಕಾರಿಯಾದ ಪರಿಹಾರ ಎಂದು ಸಾಬೀತಾಗಿದೆ.
ಒಂದು ಲೋಟ ಬಿಸಿನೀರಿಗೆ 1 ಟೀಚಮಚ ಜೇನುತುಪ್ಪ ಮತ್ತು ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಚೆನ್ನಾಗಿ ಹಿಂಡಿ ಕಲಸಿ ಉಗುರು ಬೆಚ್ಚಗಿರುವ ತಾಪಮಾನದಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಗಂಟಲು ನೋವಿನಿಂದ ಮುಕ್ತಿ ಪಡೆದುಕೊಳ್ಳಬಹುದು.
ಇದರ ಜೊತೆಗೆ ವೈರಾಣುಗಳ ಸೋಂಕಿನಿಂದಲೂ ಸಹ ಶ್ರೀಘ್ರವಾದ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ.
* ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಅತ್ಯಂತ ಶಕ್ತಿಯುತವಾದ ಆಂಟಿ- ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಸಾಕಷ್ಟು ಕಂಡುಬಂದಿದ್ದು, ಗಂಟಲು ನೋವು ಅಥವಾ ಗಂಟಲಿನ ಸೋಂಕಿನಿಂದ ತಕ್ಷಣವೇ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.
ಹಸಿ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಈ ಸಮಯದಲ್ಲಿ ಜಗಿದು ತಿನ್ನುವ ಮೂಲಕ ಗಂಟಲು ನೋವಿನಿಂದ ಮುಕ್ತಿ ಪಡೆಯಬಹುದು.
* ಜೇನುತುಪ್ಪ ಮತ್ತು ಕಾಳುಮೆಣಸಿನ ಪುಡಿ
ಸುಮಾರು ನಾಲ್ಕರಿಂದ ಐದು ಕಾಳುಮೆಣಸು ತೆಗೆದುಕೊಂಡು ಅದನ್ನು ಸಣ್ಣ ಉರಿಯಲ್ಲಿ ಹುರಿದು ತಣ್ಣಗೆ ಮಾಡಿಕೊಂಡು ನಂತರ ಪುಡಿಮಾಡಿಕೊಳ್ಳಿ.
ಈಗ ಒಂದು ಟೇಬಲ್ ಸಮಾಚಾರ ಜೇನುತುಪ್ಪ ತೆಗೆದುಕೊಂಡು ಅದಕ್ಕೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಹಾಕಿ ಅದನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಪ್ರತಿ ದಿನ ಬೆಳಗ್ಗೆ ಇದನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಶೀತ ಮತ್ತು ಗಂಟಲು ನೋವಿನ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು.
ಉಪ್ಪು ನೀರಿನಿಂದ ಗಳಗಳ
ಸತತವಾಗಿ ಗಂಟಲನ್ನು ಕೆರೆದೂ ಕೆರೆದೂ ಗಂಟಲ ಒಳಭಾಗದಲ್ಲಿ ನೋವು ಎದುರಾಗುತ್ತದೆ. ಈ ಸ್ಥಿತಿಗೆ sore throatಎಂದು ಕರೆಯುತ್ತಾರೆ. ಶೀತ ಕೆಮ್ಮು ಇರುವ ಸಮಯದಲ್ಲಿಯೂ ಇದು ಕಾಣಿಸಿಕೊಳ್ಳುತ್ತದೆ. ಉಪ್ಪುನೀರಿನ ಗಳಗಳದಿಂದ ಈ ನೋವು ನಿವಾರಣೆಯಾಗುತ್ತದೆ.
ಉಪ್ಪುನೀರನ್ನು ತಯಾರಿಸುವುದಂತೂ ಮಕ್ಕಳೂ ಮಾಡಬಹುದಾದಷ್ಟು ಸುಲಭ. ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ, ಅಥವಾ ನೀವು ಸಹಿಸಿಕೊಳ್ಳಬಹುದಾದಷ್ಟು ಬಿಸಿ ಇರುವ ನೀರಿಗೆ ಒಂದು ಚಮಚ ಉಪ್ಪು ಹಾಕಿ ಕಲಕಿದರೆ ಸರಿ. ಉಪ್ಪುನೀರು ಸಿದ್ದ.
ಉತ್ತಮ ಪ್ರಯೋಜನ ಪಡೆಯಲು ಪುಡಿ ಉಪ್ಪಿಗಿಂತ ಸಮುದ್ರದ ಕಲ್ಲುಪ್ಪು ಉತ್ತಮ. ಈ ವಿಧಾನವನ್ನು ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದಾರೆ.








