ಗಾಂಧಿ ಜಯಂತಿಯಂದೂ ಎಣ್ಣೆ ಮಾರಾಟ!?
– ತೀರ್ಥಹಳ್ಳಿಯಲ್ಲಿ ಗಾಂಧಿಗೆ ನಮನ: ಏನೇನು ಕಾರ್ಯಕ್ರಮ?
– ಗಾಂಧಿ ಆದರ್ಶವನ್ನು ಗಾಳಿಗೆ ತೂರಿದ ಮದ್ಯ ಮಾರಾಟಗಾರರು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಎಲ್ಲೆಡೆ ಗಾಂಧಿ ಮತ್ತು
ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಣೆ ಮಾಡಲಾಯಿತು. ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜಿನಲ್ಲಿ ಗಾಂಧಿಗೆ ನಮನ ಸಲ್ಲಿಸಲಾಯಿತು. ಅಚ್ಚರಿ ಎಂದರೆ ಗಾಂಧಿ ಜಯಂತಿಯಂದು ಮಾಂಸ ಮತ್ತು ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಆದರೆ ತೀರ್ಥಹಳ್ಳಿ ಪಟ್ಟಣದ ಹಾಗೂ ಹಳ್ಳಿಗಳ ಕೆಲವು ಬಾರ್, ವೈನ್ಸ್, ಅಂಗಡಿಗಳಲ್ಲಿ ಮದ್ಯ ಮಾರಾಟವನ್ನು ಮಾಡಲಾಗಿದೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಗ್ರಾಮೀಣ ಹಾಗೂ ನಗರ ಭಾಗದ ಎಲ್ಲಾ ಶಾಲೆ ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಯಿತು. ಶ್ರಮದಾನ ಮಾಡುವ ಮೂಲಕ ಸ್ವಚ್ಛತೆ ಮಾಡಲಾಯಿತು. ಗಾಂಧಿ ಜಯಂತಿ ದಿನದಂದು ಗಾಂಧಿಯ ಕೆಲವೊಂದಿಷ್ಟು ವಿಚಾರ ತತ್ವಗಳನ್ನ ಇಟ್ಟುಕೊಂಡು ಗಾಂಧಿ ಜಯಂತಿಯನ್ನು ಕೂಡ ಎಲ್ಲಡೆ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಈ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿರುವ ಮಹಾತ್ಮಗಾಂಧಿ ಪ್ರಜೆಗಳ ಆರಾಧ್ಯ ದೈವಸ್ವರೂಪಿಯಾಗಿದ್ದಾರೆ. ಮಹಾತ್ಮರ ಜನ್ಮದಿನಾಚರಣೆ ಕೇವಲ ಸಾಂಕೇತಿಕ ಆಚರಣೆಗೆ ಸೀಮಿತವಾಗಿದ್ದು ಇದೇ ಭಾವನೆ ಮುಂದುವರೆದರೆ ಮುಂದಿನ ಪೀಳಿಗೆ ಗಾಂಧಿ ಯಾರು ಎಂದು ಕೇಳುವ ಸ್ಥಿತಿ ನಿರ್ಮಾಣವಾದೀತು ಎಂದು ಶಾಸಕ ಆರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಮಹಾತ್ಮಗಾಂದಿ ಮತ್ತು ಮಾಜಿ ಪ್ರದಾನಿ ಲಾಲ್ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯ ಅಂಗವಾಗಿ ಪಟ್ಟಣದಲ್ಲಿ ನಡೆದ ಶಾಂತಿ ನಡಿಗೆಯನ್ನು ಉದ್ಘಾಟಿಸಿ ಮಾತನಾಡಿ, ದೈಹಿಕವಾಗಿ ಗೋಡ್ಸೆ ಕೊಂದ ಮಹಾತ್ಮರನ್ನು ಅನುಸರಿಸದ ನಾವುಗಳು ಅವರ ಮೌಲ್ಯಗಳನ್ನು ದಿನನಿತ್ಯ ಸಾಯಿಸುತ್ತಿದ್ದೇವೆ ಎಂದೂ ಹೇಳಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಆಗುಂಬೆ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಹಾರ ಹಾಕುವ ಮೂಲಕ ನಡೆದ ಶಾಂತಿ ನಡಿಗೆಗೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ನೀಡಿದರು. ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ. ಶೈಲಾ, ತಾಲೂಕು ಮುಸ್ಲಿಂ ಒಕ್ಕೂಟದ ಮಹಮದ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ರಾಘವೇಂದ, ಪತಕರ್ತ ಡಾನ್ ರಾಮಣ್ಣ ಹಾಗೂ ಕಂದಾಯ ಇಲಾಖೆಯ ಸುರಥಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಕ್ರೈಸ್ತಧರ್ಮಗುರು ವೀರೇಶ್ ವಿಕ್ಟರ್ ಮೋರೆಸ್ ಮಾತನಾಡಿ, ಅಹಿಂಸೆ ಅತ್ಯಂತ ಶಕ್ತಿಯುತವಾದ ಆಯುಧವಾಗಿದೆ. ಮಹಾತ್ಮರ ಆಶಯದಂತೆ ಜಾತಿಧರ್ಮದ ಗೋಡೆಗಳನ್ನು ಬೀಳಿಸಿ ಶಾಂತಿ ಸೌಹಾರ್ದತೆಯೊಂದಿಗೆ ಮಾನವೀಯತೆಯಿಂದ ಮನುಷ್ಯ ಧರ್ಮದ ತಳಹದಿಯಲ್ಲಿ ಬದುಕುವ ಅನಿವಾರ್ಯತೆ ಇದೆ. ಜಾತಿ ಧರ್ಮಗಳ ನಡುವಿನ ಈಚಿನ ಬೆಳವಣಿಗೆ ಆತಂಕಕಾರಿಯಾಗಿದೆ ಎಂದೂ ಹೇಳಿದರು. ತಹಸಿಲ್ದಾರ್ ಎಸ್. ರಂಜಿತ್ ಮಾತನಾಡಿ, ನಿದನರಾಗಿ ಒಂದೂವರೆ ಶತಮಾನದ ನಂತರವೂ ಶಾಶ್ವತರಾಗಿರುವ ಗಾಂಧಿ ಯುಗಪುರುಷರಾಗಿದ್ದಾರೆ. ದೇಶದ ಪದಾನಿಯಾಗಿ ಜೈ ಜವಾನ್ ಜೈ ಕಿಸಾನ್ ಘೋಷಣೆ ಮೂಲಕ ಸರಳತೆಯಿಂದ ಆಡಳಿತ ನಡೆಸಿದ ಮಾಜಿ ಪ್ರದಾನಿ ಲಾಲ್ಬಹದ್ದೂರ್ ಶಾಸ್ತ್ರಿಯವರು ಈ ದೇಶದ ಜನರ ಹೃದಯದಲ್ಲಿ ಶಾಶ್ವತರಾಗಿದ್ದಾರೆ ಎಂದರು.








