CSEET ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಅಮೋಘ ಸಾಧನೆ – ರಾಜ್ಯಕ್ಕೆ ಮಾದರಿಯಾದ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಫಲಿತಾಂಶ – 60 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ತೇರ್ಗಡೆ NAMMUR EXPRESS NEWS ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ CSEET ಬರೆದ ವಾಣಿಜ್ಯ ವಿಭಾಗದ 60 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರಯತ್ನದಲ್ಲಿ ಮುಂದಿನ ಹಂತಕ್ಕೆ(CS Executive) ಅರ್ಹತೆಯನ್ನು ಪಡೆದಿರುತ್ತಾರೆ. ಕುಮಾರಿ ಆಯಿಷಾತ್ ಖಸ್ಮೋನ ಮತ್ತು ರಿಯಾ ದೇವ್ ಇವರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯನ್ನು ಹೊಂದಿ, ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಸಾಧಕರಿಗೆ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆಕೆ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಸನ್ನ ಭೋಜ ಮತ್ತು ಉಪನ್ಯಾಸಕ ವೃಂದದವರು ಶುಭ ಹಾರೈಸಿದ್ದಾರೆ.
Author: Nammur Express Karkala
ನಾಡಗೀತೆಗೆ ನೂರರ ಸಂಭ್ರಮ: ನ.22ಕ್ಕೆ ಸಾಮೂಹಿಕ ಗಾಯನ! – ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜನೆ – ಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಜನತೆ, ಸಾಹಿತ್ಯಾಭಿಮಾನಿಗಳೆಲ್ಲರಿಗೂ ಸ್ವಾಗತ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ತೀರ್ಥಹಳ್ಳಿ ವತಿಯಿಂದ ನೂರರ ಸಂಭ್ರಮದಲ್ಲಿರುವ ನಾಡಗೀತೆಯ ಆಚರಣೆಗಾಗಿ ನ. 22ರ ಶನಿವಾರ ಕೊಪ್ಪ ಸರ್ಕಲ್ನಲ್ಲಿ ನಾಡಗೀತೆ ಹಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. 22-11-2025 ರ ಶನಿವಾರ ಸಂಜೆ 4:30ಕ್ಕೆ ಸರಿಯಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ತೀರ್ಥಹಳ್ಳಿ ಮತ್ತು ಶಾಲಾ ಶಿಕ್ಷಣ ಇಲಾಖೆ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಹಾಗೂ ಸಾಹಿತ್ಯಾಭಿಮಾನಿಗಳೆಲ್ಲರೂ ಸೇರಿ ರಾಷ್ಟ್ರಕವಿ ಕುವೆಂಪು ಅವರ ವಿರಚಿತ “ಜೈ ಭಾರತ ಜನನಿಯ ತನುಜಾತೆ” ನಾಡಗೀತೆಯ…
ಬೀದಿ ನಾಯಿ ಕಡಿತದಿಂದ ವ್ಯಕ್ತಿ ಸತ್ತರೆ 5 ಲಕ್ಷ ಪರಿಹಾರ! – ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ: ಏನಿದು ಆದೇಶ – 2025ರ 7 ತಿಂಗಳಲ್ಲಿ ಒಟ್ಟು 23 ಮಂದಿ ನಾಯಿಗಳಿಗೆ ಬಲಿ! NAMMUR EXPRESS NEWS ಬೆಂಗಳೂರು : ಬೀದಿ ನಾಯಿ ಕಡಿತದಿಂದ ವ್ಯಕ್ತಿ ಮೃತಪಟ್ಟರೆ 5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಮಹತ್ವದ ಆದೇಶ ಹೊರಡಿಸಿದೆ.ಈ ಹಿಂದೆ ಇದ್ದ ಆದೇಶವನ್ನ ನಗರಾಭಿವೃದ್ಧಿ ಇಲಾಖೆ ತಿದ್ದುಪಡಿ ಮಾಡಿದೆ. ಬೀದಿ ನಾಯಿ ದಾಳಿಗೆ ಒಳಗಾದ ಸಂತ್ರಸ್ತರಿಗೆ ಮಾತ್ರ ಜಿಬಿಎ ಪರಿಹಾರ ನೀಡಲಿದೆ. ನಿರ್ದಿಷ್ಟ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜಿಬಿಎ ಪಶುಪಾಲನಾ ವಿಭಾಗಕ್ಕೆ ಸಲ್ಲಿಸಬೇಕು. ಅರ್ಜಿಯಲ್ಲಿ ಹೆಸರು, ವಯಸ್ಸು, ಫೋಟೋ, ವಿಳಾಸ, ನಾಯಿ ದಾಳಿ ನಡೆದ ಸ್ಥಳ, ವೈದ್ಯಕೀಯ ಚಿಕಿತ್ಸೆಯ ಸಂಪೂರ್ಣ ದಾಖಲೆಗಳ ವಿವರವನ್ನು ನಿಗದಿತ ಅವಧಿಯಲ್ಲಿ ನೀಡಬೇಕು. ಬಳಿಕ ಪಶುಪಾಲನಾ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ನೀಡಲಿದ್ದಾರೆ. ಅರ್ಜಿಯು ಜಿಬಿಎ ವೆಬ್ಸೈಟ್ನಲ್ಲಿ ಸಿಗುತ್ತದೆ. ಯಾವ್ಯಾವ ವರ್ಷ ಎಷ್ಟು ಪರಿಹಾರ? 2016-1780…
ವೇಷ ಕಳಚುವ ಮುನ್ನವೇ ಮಹಿಷಾಸುರ ಪಾತ್ರಧಾರಿ ಸಾವು! – ಯಕ್ಷಗಾನ ಕಲಾವಿದ ಈಶ್ವರ ಗೌಡ ಹೃದಯಾಘಾತಕ್ಕೆ ಬಲಿ – ಶೃಂಗೇರಿ ಮೂಲದ ಮಂದಾರ್ತಿ ಎರಡನೇ ಮೇಳದ ಕಲಾವಿದ – ಕುಂದಾಪುರದಲ್ಲಿ ಯಕ್ಷಗಾನ ಆಗುವಾಗ ಘಟನೆ ಶೃಂಗೇರಿ: ವೇಷ ಕಳಚುವ ಮುನ್ನವೇ ಮಹಿಷಾಸುರ ಪಾತ್ರಧಾರಿ, ಯಕ್ಷಗಾನ ಕಲಾವಿದ ಈಶ್ವರ ಗೌಡ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮಂದಾರ್ತಿ ಮೇಳದ ಬಣ್ಣದ ವೇಷಧಾರಿ ಈಶ್ವರ ಗೌಡ ನೆಮ್ಮಾರ್ ಮಹಿಷಾಸುರ ಪಾತ್ರ ನಿರ್ವಹಿಸಿದ ಬಳಿಕ ಬಣ್ಣದ ಮನೆಯಲ್ಲೇ ಹೃದಯಾಘಾತದಿಂದ ಕುಸಿದು ನಿಧನ ಹೊಂದಿದ ಘಟನೆ ಬುಧವಾರ( ನ19) ಮಧ್ಯ ರಾತ್ರಿ ಕುಂದಾಪುರದ ಸೌಡ ಸಮೀಪ ನಡೆದಿದೆ. ಮಂದಾರ್ತಿ ಎರಡನೇ ಮೇಳದ ಕಲಾವಿದ ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿಯಾಗಿದ್ದ ಈಶ್ವರ ಗೌಡ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಬದುಕಿಗೆ ಅಂತಿಮ ತೆರೆ ಎಳೆದಿದ್ದಾರೆ. ಮಂದಾರ್ತಿ 2ನೇ ಮೇಳದ ಕಲಾವಿದ ಬುಧವಾರ ರಾತ್ರಿ ಮಹಿಷಾಸುರ ಪಾತ್ರ ಕೊನೆಯಾಗುತ್ತಿದ್ದಂತೆ ಸಂಪೂರ್ಣ ವೇಷ ಕಳಚುವ ಮುನ್ನ ಹೃದಯಾಘಾತದಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿದ್ದಾರೆ.…
ಕರಾವಳಿ ಟಾಪ್ ನ್ಯೂಸ್ * ಉಡುಪಿ: ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಶಿಕ್ಷಕ * ಕುಂದಾಪುರ: ತಾಯಿಗೆ ಚಿಕಿತ್ಸೆ ಕೊಡಿಸಿಲ್ಲವೆಂದು ಮಗಳ ಮೇಲೆ ಹಲ್ಲೆ * ಬಂಟ್ವಾಳ: ಕಾರು, ದ್ವಿಚಕ್ರ ವಾಹನಗಳ ನಡುವೆ ಅಪಘಾತ; ವಿದ್ಯಾರ್ಥಿನಿ ಸಾವು * ಸುಳ್ಯ: ಅಕ್ರಮವಾಗಿ ಮರದ ದಿಮ್ಮಿಗಳ ಸಾಗಾಟ * ಪುತ್ತೂರು: ಮಾದಕ ವಸ್ತು ಮಾರಾಟದ ವಿರುದ್ಧ ಪೊಲೀಸರ ಕಾರ್ಯಾಚರಣೆ * ಯಲ್ಲಾಪುರ: ದರೋಡೆ ವಿಫಲವಾಗಿ, ಬ್ಯಾಂಕ್ ಗೆ ಬೆಂಕಿ ಹಚ್ಚಿದ ಆರೋಪಿಗಳು ಕೊನೆಗೂ ಸೆರೆ * ಭಟ್ಕಳ: ಗೃಹ ಬಳಕೆ ವಸ್ತುಗಳ ಮಾರಾಟ ಹೆಸರಿನಲ್ಲಿ ವಂಚಿಸಿದ ಆರೋಪಿಗಳ ಬಂಧನ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ * ಉಡುಪಿ: ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಶಿಕ್ಷಕ ಉಡುಪಿ: ಶಾಲೆಗೆ ಎಂದಿನಂತೆ ಕರ್ತವ್ಯಕ್ಕೆ ತೆರಳಿದ ಸಂದರ್ಭದಲ್ಲಿ, ದೈಹಿಕ ಶಿಕ್ಷಕರೊಬ್ಬರು ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ ಘಟನೆ, ಮಲ್ಪೆಯಲ್ಲಿ ನಡೆದಿದೆ. ಗಣೇಶ್ ದೇವಾಡಿಗ ಅವರು ಮಲ್ಪೆಯ ನಾರಾಯಣಗುರು ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದು, ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.…
ಯಾರಾದ್ರೂ ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬಉತ್ಸವ ಮದುವೆ ಮುಂಜಿವೆ ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ? ಇದು ನಿಜ ನಾ ? ನಿಜ ಅಂತಾದ್ರೆ ಯಾಕೆ ಮಾಡ್ಬಾರ್ದು ? ಮನುಷ್ಯನು ಮರಣವಾದ ನಂತರ ಒಂದು ವರ್ಷದವರೆಗೆ ಒಟ್ಟು 48 ಶ್ರಾದ್ಧಗಳನ್ನು ಆಚರಿಸಬೇಕಾಗುತ್ತದೆ . ಅವು ೧) ಮಲಿನ ಷೋಡಶ ೨) ಮಧ್ಯಮ ಷೋಡಶ ೩) ಉತ್ತಮ ಷೋಡಶ ಎಂಬುದಾಗಿ ಮೂರು ವಿಭಾಗಗಳು . ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564 ಸ್ಥಾನೇ ದ್ವಾರೇ ಅರ್ಧಮಾರ್ಗೇ ಚ ಚಿತಾಯಾಂ ಶವ ಹಸ್ತಕೇ| ಅಸ್ಥಿ ಸಂಚಯನೇ ಷಷ್ಠೋ ದಶಪಿಂಡಾ ದಶಾನ್ಹಿಕಾ|| ಮನುಷ್ಯನು ಮರಣ ಹೊಂದಿದ ಸ್ಥಾನದಲ್ಲಿ ಒಂದು ,…
ಕೊಪ್ಪ-ನ. ರಾ. ಪುರ ರಸ್ತೆ ಓಡಾಟ ನರಕ! – ಹೊಂಡ ಗುಂಡಿ ತಪ್ಪಿಸಲು ವಾಹನ ಸವಾರರ ಪರದಾಟ – ಕನಿಷ್ಠ ಗುಂಡಿ ಮುಚ್ಚಿ ಪ್ರಾಣ ಉಳಿಸಿ ಎಂದು ಜನಾಗ್ರಹ – ಕೊಪ್ಪ- ಬಾಳೆಹೊನ್ನೂರು ರಸ್ತೆಯಲ್ಲಿ ಕಾಮಗಾರಿ ಶುರು. NAMMUR EXPRESS NEWS : ಕೊಪ್ಪ/ ನರಸಿಂಹರಾಜಾಪುರ: ಕೊಪ್ಪ-ಎನ್ ಆರ್ ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ಗುಂಡಿಗಳಿದ್ದು, ಪ್ರತಿನಿತ್ಯ ಹತ್ತಾರು ಕಡೆ ಅಪಘಾತಗಳು ಸಂಭವಿಸುತ್ತಿವೆ. ಈ ರಸ್ತೆಯಲ್ಲಿ ಓಡಾಡೋದು ನರಕಯಾತನೆ ಆಗಿದೆ. ಕೊಪ್ಪ ಪಟ್ಟಣದಿಂದ ಶುರುವಾದ ರಸ್ತೆ ಗುಂಡಿಗಳು ಕೊಪ್ಪ, ಕುದುರೆಗುಂಡಿ, ಕೈಮರ, ನರಸಿಂಹ ರಾಜಪುರ ಶಿವಮೊಗ್ಗವರೆಗೆ ಅತಿ ಹೆಚ್ಚಿನ ಗುಂಡಿಗಳು ಆಗಿವೆ. ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಈ ಮಾರ್ಗದ ಅವ್ಯವಸ್ಥೆ ಬಗ್ಗೆ ಇದೀಗ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಿ ದಿನ ಈ ಭಾಗದಲ್ಲಿ ಹತ್ತಾರು ವಾಹನಗಳ ಅಪಘಾತವಾಗುತ್ತಿದೆ. ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 100 ಮೀಟರ್ ವ್ಯಾಪ್ತಿಯರ ರಸ್ತೆಯಲ್ಲಿ 20ಕ್ಕೂ ಹೆಚ್ಚು…
ಇಂದು ಕಿಗ್ಗಾದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ * ಮಳೆದೇವರೆಂದೇ ಪ್ರಸಿದ್ಧಿ ಹೊಂದಿದ ಶಾಂತಾಸಮೇತ ಋಷ್ಯಶೃಂಗೇಶ್ವರ ಸ್ವಾಮಿ * ದೀಪೋತ್ಸವದ ಪ್ರಯುಕ್ತ ಹಲವು ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮಗಳು NAMMMUR EXPRESS NEWS ಶೃಂಗೇರಿ: ಮಳೆ ದೇವರೆಂದೇ ಪ್ರಸಿದ್ಧಿಯಾಗಗಿರುವ ತಾಲೂಕಿನ ಕಿಗ್ಗಾ ಶ್ರೀಶಾಂತಾಸಮೇತ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದಲ್ಲಿಂದು ಸಾರ್ವಜನಿಕ ಲಕ್ಷ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಲಕ್ಷ ದೀಪೋತ್ಸವದ ಅಂಗವಾಗಿ ದೀಪೋತ್ಸವ ಸಮಿತಿ ಹಾಗೂ ದೇವಸ್ಥಾನದಿಂದ ಹಲವು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 6 ಗಂಟೆಯಿಂದ ದೇವಸ್ಥಾನದ ಮುಂಭಾಗದಲ್ಲಿ ಸ್ಯಾಕ್ಸಫೋನ್ ವಾದನ,ಚಂಡೆ,ಕೊಳಲು ವಾದನ ಜುಗಲ್ ಬಂದಿ ನಡೆಯಲಿದ್ದು ನಂತರ ಸ್ಥಳೀಯ ಆಯ್ದ ಅಂಗನಾವಡಿ,ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 7:30 ಕ್ಕೆ ದೀಪೋತ್ಸವ ಕಾರ್ಯಕ್ರಮ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಬೇಕಾಗಿ ಸಾರ್ವಜನಿಕ ಲಕ್ಷ ದೀಪೋತ್ಸವ ಸಮಿತಿ ವಿನಂತಿಸಿಕೊಂಡಿದೆ.
ಟಾಪ್ 4 ನ್ಯೂಸ್ ಮಲೆನಾಡು: ಎಲ್ಲೆಲ್ಲಿ ಏನೇನ್ ಆಯ್ತು? ತೀರ್ಥಹಳ್ಳಿ: ಕಾಳಿಂಗ ಸರ್ಪ ಸಂಶೋಧನೆ ವಿರುದ್ಧ ಡಿಸಿಗೆ ದೂರು! ಮೂಡಿಗೆರೆ: ಗಾಂಜಾ ಗಿಡ ಬೆಳೆದವರು ಅರೆಸ್ಟ್! ಹೊಸನಗರ: ಹೊಂಡಕ್ಕೆ ಬಿದ್ದು ಯುವಕ ಸಾವು!: ಅನುಮಾನ! ತೀರ್ಥಹಳ್ಳಿ: ಕುರುವಳ್ಳಿ ಬಂಡೆ ಸ್ಫೋಟ: ಮನೆಗಳಿಗೆ ಹಾನಿ! ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಆಗುಂಬೆ ಕಾಳಿಂಗ ಸರ್ಪ ಸಂಶೋಧನೆ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಭೇಟಿ ಮಾಡಿ ಪರಿಸರಾಸಕ್ತರು ದೂರು ನೀಡಿದ್ದಾರೆ. ನಂತರ ತೀರ್ಥಹಳ್ಳಿ ACF ಮಧುಸೂದನ್ ಅವರನ್ನೂ ಭೇಟಿ ಮಾಡಿ ದಾಖಲೆ ಹಸ್ತಾಂತರ ಮಾಡಿದ್ದಾರೆ. ಹಿರಿಯ ಪತ್ರಕರ್ತ ಲೇಖಕ ಶಶಿಸಂಪಳ್ಳಿ, ಪರ್ವ ಮಲ್ನಾಡ್, ಮೋಹಿತ್ ಇದ್ದರು. ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತನಿಖೆಗೆ ಕೂಡ ಆದೇಶ ಮಾಡಿದ್ದಾರೆ. ಮೂಡಿಗೆರೆ ಗಾಂಜಾ ಗಿಡ ಬೆಳೆದವರು ಅರೆಸ್ಟ್! ಮೂಡಿಗೆರೆ: ಡ್ರಗ್ಸ್ ವಿರುದ್ಧ ಸಮರ ಮುಂದುವರೆಸುತ್ತಿರುವ ಮೂಡಿಗೆರೆ ಪೊಲೀಸರು ಮತ್ತೊಂದು ಪ್ರಕರಣ ಬೇಧಿಸಿದ್ದಾರೆ. ಮೂಡಿಗೆರೆ ತಾಲ್ಲೂಕ್ ಬಿಳುಗುಳ ಗ್ರಾಮದ…
ಶ್ರೀ ಕ್ಷೇತ್ರ ನಾಗರಹಳ್ಳಿಯಲ್ಲಿ ನ.20ಕ್ಕೆ ದೀಪೋತ್ಸವ! – ಕಾರ್ತೀಕ ಅಮಾವಾಸ್ಯೆ ದಿನ ಸಹಸ್ರ ದೀಪೋತ್ಸವ: ಸರ್ವರಿಗೂ ಸ್ವಾಗತ ತೀರ್ಥಹಳ್ಳಿ: ನ. 22ಕ್ಕೆ ಪ್ರಸಿದ್ಧ ಶ್ರೀಸಿದ್ದೇಶ್ವರ ಸ್ವಾಮಿ ದೀಪೋತ್ಸವ – ಬೆಟ್ಟದ ಮೇಲೆ ನಡೆದು ದೀಪ ಹಚ್ಚುವ ಧಾರ್ಮಿಕ ಕಾರ್ಯಕ್ರಮ ಹೊಸನಗರ: ಪ್ರಸಿದ್ಧ ಕಾರಣಿಕ ದೇವಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಕಾರ್ತೀಕ ಅಮಾವಾಸ್ಯೆ ದಿನ ಸಾಮೂಹಿಕ ಸಹಸ್ರ ದೀಪೋತ್ಸವ ದಿನಾಂಕ 20 -11- 2025- ಗುರುವಾರ, ಸಂಜೆ 7.00ಕ್ಕೆ ನಡೆಯಲಿದೆ. ಈ ಕಾರ್ತೀಕ ದೀಪೋತ್ಸವಕ್ಕೆ ಊರ – ಪರಊರ ಸದ್ಭಕ್ತರೆಲ್ಲಾ ಆಗಮಿಸಿ ಹೆಸರು ನೊಂದಾಯಿಸಿ. ಆ ಭಗವಂತನಿಗೆ ದೀಪ ಹಚ್ಚುವುದರ ಮೂಲಕ ಪಾಪಗಳೆಲ್ಲವೂ ಕಳೆದೂ ಸುಖಮಯವಾದ ನೆಮ್ಮದಿಯ ಜೀವನ ಅನುಗ್ರಹಿಸಲೆಂದು ಪ್ರಾರ್ಥಿಸಿ ಶ್ರೀಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಮಾಡಲಾಗಿದೆ. ಪ್ರತಿ ವರ್ಷ ಸಾವಿರಾರು ಜನ ಈ ದೇವಾಲಯದ ಕಾರ್ತೀಕ ಅಮಾವಾಸ್ಯೆಯಲ್ಲಿ ಭಾಗಿಯಾಗುತ್ತಾರೆ. ತೀರ್ಥಹಳ್ಳಿ: ನ. 22ಕ್ಕೆ ಪ್ರಸಿದ್ಧ ಶ್ರೀಸಿದ್ದೇಶ್ವರ ಸ್ವಾಮಿ ದೀಪೋತ್ಸವ – ಬೆಟ್ಟದ ಮೇಲೆ ನಡೆದು…



