ಉಡುಪಿ ಹೋಟೆಲ್ ಕಾರ್ಮಿಕರ ಸಂಘದ ಮಾನವೀಯತೆ
– ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಕಾರ್ಮಿಕನಿಗೆ ಸಹಾಯ ಧನ
– ರಾಜ್ಯದಲ್ಲಿ ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘದ ಸೇವೆಗೆ ಸಾಥ್
NAMMUR EXPRESS NEWS
ಉಡುಪಿ: ಉಡುಪಿ ಜಿಲ್ಲಾ ಕಮಿಟಿಯ ಸದಸ್ಯರ ಸಹಕಾರದಿಂದ ನೊಂದವರಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿರುವ ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘದ ಸೇವಾಮನೋಭಾವವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು ಇದೀಗ ಸಂಕಷ್ಟದಲ್ಲಿದ್ದ ಕುಟುಂಬದ ನೆರವಿಗೆ ಧಾವಿಸಿದೆ. ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಉಡುಪಿ ಜಿಲ್ಲಾ ಘಟಕದ ಸದಸ್ಯರಿಗೆ ಉಡುಪಿ ಜಿಲ್ಲಾ ಘಟಕದಿಂದಲೇ ಸಹಾಯಸ್ತ ನೀಡಲಾಗಿದೆ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರು ಮೂಲದ ಹೋಟೆಲ್ ಕಾರ್ಮಿಕನಿಗೆ ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳೂರಿನ ವೆನ್ ಲಾಕ್ ಹಾಸ್ಪಿಟಲ್ ಗೆ ಭೇಟಿ ನೀಡಿ ಸಹಾಯ ಧನದ ಚೆಕ್ಕನ್ನು ಹಸ್ತಾಂತರಿಸಿದರು. ಈ ಧನ ಸಹಾಯವನ್ನು ಸತೀಶ್ ಜೋಗಿ, ಮಂಜುನಾಥ್ ಶೆಟ್ಟಿ,,ಸೀತಾರಾಮ್ ಶೆಟ್ಟಿ , ನಾಗರಾಜ್ ಶೆಟ್ಟಿ ಗಂಟೆ ಹೊಳೆ, ವಿಶ್ವನಾಥ ವೀರ,, ಉಷಾ,, ರೇವತಿ, ಚಂದ್ರ ನಾಯರಿ,, ಮತ್ತು ಸುಕುಮಾರ್ ಶೆಟ್ಟಿ,ಹಾಗೂ ಕೃಷ್ಣ ಕೆಸಿಪಿ ಇವರ ಸಹಕಾರದಿಂದ ನೀಡಲಾಯಿತು.