![](https://nammurexpress.in/wp-content/uploads/2024/10/WhatsApp-Image-2024-10-18-at-10.56.55_a263bafa.jpg)
ತೀರ್ಥಹಳ್ಳಿ ತುಂಗಾ ನದಿಯಲ್ಲಿ ಮಹಿಳೆ ಶವ ಪತ್ತೆ!
– ತುಮಕೂರಿಂದ ಬಂದು ತೀರ್ಥಹಳ್ಳಿ ನದಿಗೆ ಹಾರಿದಳು!
– ಸಾಲದ ಕಿರಿಕಿರಿ ತಾಳಲಾರದೇ ಆತ್ಮಹತ್ಯೆ?
NAMMUR EXPRESS NEWS
ತೀರ್ಥಹಳ್ಳಿ: ಸಾಲದ ಕಿರಿಕಿರಿ ತಾಳಲಾರದೇ ಮಹಿಳೆಯೊಬ್ಬಳು ಶುಕ್ರವಾರ ಬೆಳಗ್ಗೆ ತೀರ್ಥಹಳ್ಳಿ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿಯ ಕೋಡಿಗೆಹಳ್ಳಿ ಲತಾಮಣಿ(44) ಮೃತ ಮಹಿಳೆ. ಈಕೆಯ ಡೆತ್ ನೋಟ್ ಮತ್ತು ದಾಖಲೆಗಳು ಸಿಕ್ಕಿದ್ದು, ಆಕೆ ಹೇಗೆ ಇಲ್ಲಿಗೆ ಬಂದಳು ಎಂಬುದು ಕುತೂಹಲ ಮೂಡಿಸಿದೆ. ಆಕೆಯ ಆಧಾರ್ ಕಾರ್ಡ್, ಸಾಲದ ಬಗ್ಗೆ ಮಾಹಿತಿ ಪತ್ರ ಸಿಕ್ಕಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿ ಆಸ್ಪತ್ರೆಯ ಶವಾಗಾರದಲ್ಲಿ ಶವ ಇಡಲಾಗಿದೆ.
ಕಲ್ಲು ಬಂಡೆಯ ಮದ್ಯೆ ಶವ ಸಿಕ್ಕಿಹಾಕಿಕೊಂಡಿತ್ತು. ಸಮಾಜ ಸೇವಕ, ಮುಳುಗು ತಜ್ಞ ಕುರುವಳ್ಳಿಯ ಪ್ರಮೋದ್ ಪೂಜಾರಿ ತಂಡ ದಡಕ್ಕೆ ತಂದು ಹಾಕಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
![](https://nammurexpress.in/wp-content/uploads/2024/07/WhatsApp-Image-2024-07-10-at-13.16.01_68e08fdf-1024x202.jpg)