ತೀರ್ಥಹಳ್ಳಿ ಭೂ ಬ್ಯಾಂಕ್ ವೃತ್ತಿಪರ ನಿರ್ದೇಶಕರಾಗಿ ಬಸಪ್ಪ – ರೈತ ಪರವಾಗಿ ಉತ್ತಮ ಕೆಲಸ ಮಾಡಿದ್ದ ಹಿನ್ನೆಲೆ ಆಯ್ಕೆ – ಸಮಸ್ತ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದ ಬಸಪ್ಪ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ವೃತ್ತಿಪರ ನಿರ್ದೇಶಕರನ್ನಾಗಿ ಅಂದಗೆರೆ ಬಸಪ್ಪರವರನ್ನು ಕೋ ಆಪ್ ಮಾಡಿಕೊಳ್ಳಲಾಗಿದೆ. ಅಂದಗೆರೆ ಬಸಪ್ಪ ಹಿಂದಿನ ಅವಧಿಯಲ್ಲಿ ತೀರ್ಥಹಳ್ಳಿ ಭೂ ಬ್ಯಾಂಕ್ನ ನಿರ್ದೇಶಕರಾಗಿ ರೈತ ಪರವಾಗಿ ಉತ್ತಮ ಕೆಲಸ ಮಾಡಿದ್ದರು. ಇವರ ಈ ಕಾಳಜಿಯನ್ನು ಗಮನಿಸಿ ತೀರ್ಥಹಳ್ಳಿ ಭೂ ಬ್ಯಾಂಕಿನ ಆಡಳಿತ ಮಂಡಳಿ ಬಸಪ್ಪ ಇವರನ್ನು ಬ್ಯಾಂಕಿನ ನಿರ್ದೇಶಕರನ್ನಾಗಿ ನೇಮಿಸಿಕೊಂಡಿದೆ ಎಂದು ತೀರ್ಥಹಳ್ಳಿ ಭೂ ಬ್ಯಾಂಕಿನ ಅಧ್ಯಕ್ಷರಾದ ಬಸವಾನಿ ವಿಜಯದೇವ್ ತಿಳಿಸಿದ್ದಾರೆ. ಹಿರಿಯ ರೈತ ಪರ, ಜನಪರ ನಾಯಕರು ಆಗಿರುವ ಬಸಪ್ಪ ಅವರಿಗೆ ಗ್ರಾಮಸ್ತರು, ಸ್ನೇಹಿತರು ಕೂಡ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮಾಳೂರು ವ್ಯವಸಾಯ ಸೊಸೈಟಿ ನಿರ್ದೇಶಕರು, ಮಲ್ನಾಡ್ ಕ್ರೆಡಿಟ್ ಕೋ ಆಪರೇಟಿವ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಆಡಳಿತ ಮಂಡಳಿಗೆ ಧನ್ಯವಾದ…
Author: Nammur Express Karkala
ರಾಷ್ಟ್ರ ಮಟ್ಟಕ್ಕೆ ‘ನಿರಂತರ’ ಚೆಸ್ ತರಬೇತಿ ಕೇಂದ್ರದ ಮಕ್ಕಳು – ವಾಗ್ದೇವಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಆದ್ಯ ಸತತ ಮೂರನೇ ಬಾರಿಗೆ, ಪ್ರಥಮ್ ರಾವ್ 2ನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆ ಅಭಿನಂದನೆಗಳು ಶಾಲಾ ಶಿಕ್ಷಣ ಇಲಾಖೆಯು ನಡೆಸಿದ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ‘ನಿರಂತರ’ ಚೆಸ್ ತರಬೇತಿ ಕೇಂದ್ರದ ಮಕ್ಕಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಮಂಡ್ಯದಲ್ಲಿ ನಡೆದ ಯು – 14 ಬಾಲಕಿಯರ ವಿಭಾಗದಲ್ಲಿ ಪ್ರತಿಸ್ಪರ್ಧಿಗೆ ಪೈಪೋಟಿ ನೀಡುವ ಮೂಲಕ, ವಾಗ್ದೇವಿ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಆದ್ಯ ಎ.ಎಚ್ ಸತತ ಮೂರನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ರಾಷ್ಟ್ರಮಟ್ಟದ ಈ ಸ್ಪರ್ಧೆಯು ಜಾರ್ಖಂಡ್ ನಲ್ಲಿ ನಡೆಯಲಿದೆ. ಯಾದಗಿರಿಯಲ್ಲಿ ನಡೆದ ಯು-17 ಬಾಲಕರ ವಿಭಾಗದಲ್ಲಿ ವಾಗ್ದೇವಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಥಮ್ ರಾವ್ ಅವರು ಉತ್ತಮ ರೀತಿಯಲ್ಲಿ ಆಡುವ ಮೂಲಕ ಸತತ ಎರಡನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಬಾಲಕರ ವಿಭಾಗದ ಚೆಸ್ ಪಂದ್ಯಾವಳಿಯು ತ್ರಿಪುರದಲ್ಲಿ ನಡೆಯಲಿದೆ. ಈ ಮೂಲಕ ತೀರ್ಥಹಳ್ಳಿಯ ವಾಗ್ದೇವಿ ಪ್ರೌಢಶಾಲೆಯ…
ತೀರ್ಥಹಳ್ಳಿ ಟಾಪ್ 3 ನ್ಯೂಸ್ ತೀರ್ಥಹಳ್ಳಿ ವ್ಯಾಪ್ತಿಯ ಹೊಂಡ ಬಿದ್ದ ರಸ್ತೆಗಳಿಗೆ ಟಾರು ಭಾಗ್ಯ! – ತೀರ್ಥಹಳ್ಳಿಯಲ್ಲಿ ನಾಳೆ ಸಾಂಬಾರು ಬೆಳೆಗಳ ವೈವಿಧ್ಯತೆ, ಸುಸ್ಥಿರ ಅಭಿವೃದ್ಧಿ ಹಾಗೂ ನರ್ಸರಿ ನಿರ್ವಹಣೆ ಕಾರ್ಯಕ್ರಮ – ಕುಡುಮಲ್ಲಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪದ್ಮ ಅನಂದ ಆಯ್ಕೆ ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಬಿದ್ದಿದ್ದ ಹೊಂಡಗಳಿಗೆ ಮುಕ್ತಿ ಸಿಕ್ಕಿದೆ. ಪಟ್ಟಣದ ಸಾರ್ವಜನಿಕರಿಂದ ಪಟ್ಟಣ ಪಂಚಾಯಿತಿಗೆ ದೂರು ಬಂದಿದ್ದು ಇದನ್ನ ಏಪ್ರಿಲ್ ನಲ್ಲಿ ಟೆಂಡರ್ ಆಗಿದ್ದು ಮಳೆಯ ಕಾರಣ ಟೆಂಡರ್ ಪ್ರಕ್ರಿಯೆಯನ್ನ ಸ್ಥಗಿತಗೊಳಿಸಲಾಗಿತ್ತು. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಅಂದಾಜು 5ಲಕ್ಷ ವೆಚ್ಚದಲ್ಲಿ ಮಾಡಲಾಗುತ್ತಿದೆ. ಇದರ ಜೊತೆ ಜೊತೆಗೆ ಗಾಂಧಿನಗರದ ಚರಂಡಿ ಕಾಮಗಾರಿ, ಕೋದಂಡರಾಮ ದೇವಸ್ಥಾನದ ರಸ್ತೆ ಕಾಮಗಾರಿ, ವಾಲಿಬಾಲ್ ಕೋರ್ಟಿನ ಫೆನ್ಸಿಂಗ್ ಕಾಮಗಾರಿಗಳು ನಡೆಯುತ್ತಿದ್ದ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪಂಚಾಯಿತಿ ಅಧ್ಯಕ್ಷ ರೆಹಮತ್ ಉಲ್ಲ ಅಸಾದಿ ವೀಕ್ಷಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಸದಸ್ಯರಾದ ಸುಶೀಲಾ ಶೆಟ್ಟಿ ಮುಖ್ಯಧಿಕಾರಿ ನಾಗರಾಜ್, ಅಭಿಯಂತಕರಾದ ಸತೀಶ್, ಗುತ್ತಿಗೆದಾರರಾದ ನಾಗರಾಜ್,…
ತೀರ್ಥಹಳ್ಳಿ ಪಟ್ಟಣದಲ್ಲಿ ದೀಪೋತ್ಸವ ರಂಗು..! – ಬೆಟ್ಟಮಕ್ಕಿ, ಇಂದಾವರ, ಮಿಲ್ಕೆರಿಯಲ್ಲಿ ದೀಪಕ್ಕೆ ಜನವೋ ಜನ – ಇಂದು ತುಡ್ಕಿ -ಬದನೆಹಿತ್ಲು ದೀಪ : ಗಮನ ಸೆಳೆದ ವಿದ್ಯುತ್ ಅಲಂಕಾರ! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಪ್ರಮುಖ ದೀಪಗಳಾದ ಬೆಟ್ಟಮಕ್ಕಿ, ಇಂದಾವರ, ಮಿಲ್ಕೆರಿ ದೀಪೋತ್ಸವ ಅದ್ದೂರಿಯಾಗಿ ನಡೆಯಿತು. ಬೆಟ್ಟಮಕ್ಕಿ ಭೂತರಾಯ ಸ್ವಾಮಿ ದೇಗುಲದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ವಿಶೇಷ ಪೂಜೆ ನಡೆಯಿತು. ದೀಪದ ಬಳಿಕ ಅನ್ನದಾನ ನಡೆಯಿತು. ಪಟ್ಟಣ ಪಂಚಾಯತ್ ಸದಸ್ಯರಾದ ರತ್ನಾಕರ್ ಶೆಟ್ಟಿ, ಸುಶೀಲ ಶೆಟ್ಟಿ, ನವೀನ್, ಪ್ರಮುಖರಾದ ರಾಘವೇಂದ್ರ ಶೆಟ್ಟಿ, ಅಶೋಕ್ ಶೆಟ್ಟಿ ಸೇರಿ ಅನೇಕ ಪ್ರಮುಖರು ಹಾಜರಿದ್ದರು. ವಿದ್ಯುತ್ ದೀಪಗಳ ಅಲಂಕಾರ ಗಮನ ಸೆಳೆಯಿತು. ಮಿಲ್ಕೆರಿ ಭೂತ ರಾಯ ಸ್ವಾಮಿ ದೀಪೋತ್ಸವ ಕೊಪ್ಪ ರಸ್ತೆಯ ವಾಗ್ದೇವಿ ಶಾಲೆ ಪಕ್ಕದ ಭೂತರಾಯ ಸ್ವಾಮಿ ದೇವರ ದೀಪೋತ್ಸವ, ಸತ್ಯ ನಾರಾಯಣ ವೃತ ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು. ದೇವರ ಅಲಂಕಾರ, ಪಟಾಕಿಗಳ ಚಿತ್ತಾರ ಗಮನ ಸೆಳೆಯಿತು. ಪ್ರಮುಖರಾದ ಹರೀಶ್, ಸುಮಂತ್,…
ಶ್ರೀ ಕ್ಷೇತ್ರ ಉಬ್ಬೂರಿನಲ್ಲಿ ಅದ್ದೂರಿ ಕಾರ್ತಿಕ ದೀಪೋತ್ಸವ – ಆರಗ, ಜಯಪ್ರಕಾಶ್, ಪ್ರಕಾಶ್ ಪಂಡಿತ್, ಕಾವ್ಯಶ್ರೀ, ಭಾನುಮತಿ, ರಾಜೇಂದ್ರ ಅವರಿಗೆ ಸನ್ಮಾನ – ಉದ್ಯಮಿ ಯೋಗಿ ಎನ್ ಗೌಡ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ತೀರ್ಥಹಳ್ಳಿ: ಶ್ರೀ ಕ್ಷೇತ್ರ ಉಬ್ಬೂರಿನಲ್ಲಿ ಇತ್ತೀಚಿಗೆ ಶ್ರೀ ಸಿದ್ದೇಶ್ವರ ಮತ್ತು ಕುಮಾರರಾಮ ಸ್ವಾಮಿ ದೇವರ ಕಾರ್ತಿಕ ದೀಪೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ವಿಶೇಷ ಹೋಮ ಹವನ, ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ, ಸನ್ಮಾನ ಸಮಾರಂಭ, ಯಕ್ಷಗಾನ ಭಕ್ತಿ ಭಾಗವತಿಕೆ, ಕಾರ್ತಿಕ ದೀಪೋತ್ಸವ ನಡೆಯಿತು. ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರದಲ್ಲಿ ಒಂದಾದ ಶ್ರೀ ಕ್ಷೇತ್ರ ಉಳ್ಳೂರಿನ ಶ್ರೀ ಸಿದ್ದೇಶ್ವರ ಮತ್ತು ಕುಮಾರರಾಮ ಸ್ವಾಮಿ ದೇವಸ್ಥಾನ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷದಂತೆ ನವೆಂಬರ್ 3ರಂದು ಅದ್ದೂರಿಯಾಗಿ ಸಭಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ, ಯಕ್ಷಗಾನ ಭಕ್ತಿ ಭಾಗವತಿಕೆ ಹಾಗೂ ಕಾರ್ತಿಕ ದೀಪೋತ್ಸವವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಬೆಳಿಗ್ಗೆ 6 ಗಂಟೆಗೆ ಮೊದಲುಗೊಂಡು ಶ್ರೀ…
ಕರಾವಳಿ ಟಾಪ್ 3 ನ್ಯೂಸ್ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ರದ್ದು! ಕಂಬಳಕ್ಕೆ 2 ಕೋಟಿ ಅನುದಾನಕ್ಕೆ ಸಮಿತಿ ಪಟ್ಟು! 2 ಜೀವ ಉಳಿಸಿದ ತುಳು ಹೀರೋ ಶೋಧನ್ ಶೆಟ್ಟಿಗೆ ಸಲಾಂ! NAMMUR EXPRESS NEWS: ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊರಡಿಸಿದ್ದ ಗಡಿಪಾರು ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ರಾಯಚೂರಿನ ಮಾನ್ವಿಗೆ ಅವರನ್ನು ಗಡಿಪಾರು ಮಾಡುವ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿ ತೀರ್ಪು ನೀಡಿದೆ. ಹೈಕೋರ್ಟ್ ನೀಡಿದ ತೀರ್ಪಿನಂತೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗಾಧಿಕಾರಿಗೆ 15 ದಿನಗಳೊಳಗೆ ಸೂಕ್ತ ಕಾರಣ ಹಾಗೂ ಸಂಬಂಧಿತ ಕಾನೂನು ಸೆಕ್ಷನ್ಗಳೊಂದಿಗೆ ವಿಚಾರಣೆ ನಡೆಸಿ ಹೊಸ ಆದೇಶ ಹೊರಡಿಸಲು ಸೂಚಿಸಲಾಗಿದೆ. ಧರ್ಮಸ್ಥಳದ ತಲೆಬುರುಡೆ ಪ್ರಕರಣ ಹಾಗೂ ಸೌಜನ್ಯ ಪ್ರಕರಣಗಳಲ್ಲಿ ಹೋರಾಟ ನಡೆಸುತ್ತಿದ್ದ ತಿಮರೋಡಿ ಅವರನ್ನು ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಸೆಪ್ಟೆಂಬರ್ 20ರಂದು ಒಂದು ವರ್ಷಗಳ ಕಾಲ…
ವಿಶ್ವನಾಥ್ ಗದ್ದೆಮನೆ ಸಾರಥ್ಯದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಅಸ್ಥಿತ್ವಕ್ಕೆ * ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಒದಗಿಸಲು ಕೆಲಸ ಮಾಡುವ ಸಮಿತಿ * ಗೌರವಾಧ್ಯಕ್ಷರಾಗಿ ರಾಮಸ್ವಾಮಿ ಶೆಟ್ಟಿಗದ್ದೆ ಆಯ್ಕೆ: ಏನಿದು ಒಕ್ಕೂಟ? * ಶೃಂಗೇರಿ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಗುರಿ: ವಿಶ್ವನಾಥ್ * ರಾಜಕೀಯ ರಹಿತ ಸಂಘ, ಯಾವ ಪಕ್ಷದವರೂ ಸೇರಬಹುದು NAMMMUR EXPRESS NEWS : ಎನ್. ಆರ್.ಪುರ: ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಮಾಜ ಸೇವಕ, ವಕೀಲರು, ಉದ್ಯಮಿ ವಿಶ್ವನಾಥ್ ಗದ್ದೆಮನೆ ಸಾರಥ್ಯದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಅಸ್ಥಿತ್ವಕ್ಕೆ ಬಂದಿದೆ. ನ.16 ರಂದು ಎನ್ ಆರ್ ಪುರ ತಾಲೂಕಿನ ಗದ್ದೆಮನೆಯ ತಮ್ಮ ಮನೆಯಲ್ಲಿ ನಡೆದ ರೈತರ ಸಭೆಯಲ್ಲಿ ತಮ್ಮ ಕನಸಿನ ನೂತನ ಒಕ್ಕೂಟವನ್ನು ಅಸ್ಥಿತ್ವಕ್ಕೆ ತರುವ ಘೋಷಣೆ ಮಾಡಿದರು. ಅಲ್ಲದೆ ಪ್ರತಿ ಗ್ರಾಮದಲ್ಲಿ ಈ ಜನ ಸೇವೆ ಕೆಲಸ ಮಾಡಲು ತಯಾರಿ ಬಗ್ಗೆ ಮಾಹಿತಿ ನೀಡಿದರು. * ಶೃಂಗೇರಿ ಕ್ಷೇತ್ರ ರೈತ…
ಕರಾವಳಿ ಟಾಪ್ ನ್ಯೂಸ್ * ಉಡುಪಿ: ಇನೋವಾ ಕಾರು ಡಿಕ್ಕಿ; ಮೂವರ ಸಾವು * ಉಳ್ಳಾಲ: ನಾಯಿಯ ದಾಳಿಗೆ ವ್ಯಕ್ತಿ ಸಾವು! * ಮೂಡಬಿದರೆ: ಉದ್ಯೋಗ ಹೆಸರಿನಲ್ಲಿ ಕೋಟ್ಯಂತರ ಮೋಸ * ಬೆಳ್ತಂಗಡಿ: ಮನೆಗೆ ತಗುಲಿದ ಬೆಂಕಿ * ಕಾಪು: ಮೂವರು ವ್ಯಕ್ತಿಗಳಿಂದ ಮಹಿಳೆಗೆ ಬೆದರಿಕೆ * ಬ್ರಹ್ಮಾವರ: ಮರದಿಂದ ಬಿದ್ದು ವ್ಯಕ್ತಿ ಸಾವು * ಕುಂದಾಪುರ: ತಂಗಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಸಹೋದ * ಕಾರವಾರ: ಆರೋಪಿಯಾಗಿರುವ ಶಾಸಕರಿಗೆ ರಿಲೀಫ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಉಡುಪಿ: ಬೆಂಗಳೂರಿನಿಂದ ಉಡುಪಿಯ ಕಡೆಗೆ ತೆರಳುತ್ತಿದ್ದ ಇನೋವಾ ಕಾರೊಂದು ಅಪಘಾತಕ್ಕೆ ಒಳಗಾಗಿ, ಮೂವರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಬಿ.ಸಿ ರಸ್ತೆಯ ನಾರಾಯಣ ಗುರು ವ್ರತ್ತದ ಬಳಿ ನಡೆದಿದೆ. ಮೃತಪಟ್ಟವರನ್ನು ಬೆಂಗಳೂರಿನ ನಿವಾಸಿಗಳಾದ ರವಿ, ನಂಜಮ್ಮ ಮತ್ತು ರಮ್ಯಾ ಎಂದು ಗುರುತಿಸಲಾಗಿದೆ. ಸುಶೀಲಾ, ಕೀರ್ತಿ ಕುಮಾರ್, ಕಿರಣ್, ಬಿಂದು, ಪ್ರಶಾಂತ್ ಮತ್ತು ಕಾರು ಚಾಲಕರಾದ ಸುಬ್ರಹ್ಮಣ್ಯ ಅವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಅವರನ್ನು ಸ್ಥಳೀಯ…
ಹುಲಿಯೋಜನೆ,ಪುನರ್ವಸತಿ,ಸೂಕ್ತ ಪರಿಹಾರಕ್ಕೆ ಟಿ ಡಿ ರಾಜೇಗೌಡ ಆಗ್ರಹ * 2005 ರ ದರಗಳನ್ನೇ ನೀಡುತ್ತಿರುವ ಸರ್ಕಾರ,ಆದೇಶ ಮರುಪರಿಶೀಲಿಸಿ * ಪ್ರತಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲು ಆಗ್ರಹ NAMMMUR EXPRESS NEWS ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕೆರೆಕಟ್ಟೆ ಬಳಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾದ ಬೆನ್ನಲ್ಲೇ, ಶಾಸಕ ಟಿ.ಡಿ. ರಾಜೇಗೌಡ ಅವರು 2005ರಲ್ಲಿದ್ದ ಪುನರ್ವಸತಿ ಸರ್ಕಾರಿ ಆದೇಶವನ್ನು ಪರಿಶೀಲಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಮಾಡಿದ್ದಾರೆ. ರಾಷ್ಟ್ರೀಯ ಉದ್ಯಾನವನದ ಕಾರ್ಕಳ ಪ್ರದೇಶದ ನಿವಾಸಿಗಳ ಪುನರ್ವಸತಿ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸುವಂತೆ ಅವರು ಸಚಿವರನ್ನು ಒತ್ತಾಯಿಸಿದ್ದಾರೆ. * 2005 ರ ಆದೇಶ ಈಗಲೂ ಅದೇ ದರ,ಆದೇಶ ಮರುಪರಿಶೀಲಿಸಿ 2005ರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂಲ ನಿವಾಸಿಗಳನ್ನು ಪುನರ್ವಸತಿಗೊಳಿಸಿ ಪರಿಹಾರ ನೀಡುವಂತೆ ಸರ್ಕಾರ ಆದೇಶಿಸಿತ್ತು. 2008ರ ವೇಳೆಗೆ ಎಲ್ಲಾ ಕುಟುಂಬಗಳನ್ನು ಸ್ಥಳಾಂತರಿಸುವುದಾಗಿ ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ, ಇನ್ನೂ ಪೂರ್ಣಗೊಂಡಿಲ್ಲ. ಈಗ 2025ಕ್ಕೆ ಪುನರ್ವಸತಿಗಾಗಿ ಹಣ…
ತೀರ್ಥಹಳ್ಳಿ ಟಾಪ್ 3 ನ್ಯೂಸ್ ಆಗುಂಬೆ ಲಯನ್ಸ್ ಕ್ಲಬ್ ಸೇವಾ ಸಾಧನೆ..! – ಆಗುಂಬೆ ಪೊಲೀಸ್ ಠಾಣೆ ಹಾಗೂ ಟೀಮ್ ಈಶ್ವರ ಮಲ್ಪೆ ಸಹಯೋಗದಲ್ಲಿ ಉಚಿತ ಕಿವಿ ಶ್ರವಣ ತಪಾಸಣೆ – ರಾಜಧಾನಿಯಲ್ಲಿ ಬಿಎಸ್ ವಿಶ್ವನಾಥನ್ ಪುತ್ತಳಿ ಅನಾವರಣ – ಬಿಹಾರ ಗೆದ್ದ ಬಿಜೆಪಿ: ತೀರ್ಥಹಳ್ಳಿಯಲ್ಲಿ ಸಂಭ್ರಮಾಚರಣೆ ಆಗುಂಬೆ: ಆಗುಂಬೆ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಪಕ್ಕದ ಸಮುದಾಯ ಭವನದಲ್ಲಿ ಲಯನ್ಸ್ ಕ್ಲಬ್ ಆಗುಂಬೆ ನೇತೃತ್ವದಲ್ಲಿ ಆಗುಂಬೆ ಪೊಲೀಸ್ ಠಾಣೆ ಹಾಗೂ ಟೀಮ್ ಈಶ್ವರ ಮಲ್ಪೆ ಸಹಯೋಗದಲ್ಲಿ ಉಚಿತ ಕಿವಿ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. 37 ಉಚಿತ ತಪಾಸಣೆಯ ನಂತರ ಅವಶ್ಯಕತೆ ಇದ್ದ 11 ಜನಕ್ಕೆ 40 ಪರ್ಸೆಂಟ್ ಸಬ್ಸಿಡಿ ಯೊಂದಿಗೆ ಶ್ರವಣ ಯಂತ್ರವನ್ನು ನೀಡಲಾಯಿತು. ಉದ್ಘಾಟನೆಯನ್ನು ತೀರ್ಥಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ಆದ ಇಮ್ರಾನ್ ಬೇಗ್ ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸಮಾಜಸೇವಕ ಈಶ್ವರ ಮಲ್ಪೆ ಆಗುಂಬೆ ಲಯನ್ಸ್ ಕ್ಲಬ್ ಆಗುಂಬೆಯ ಸಮಾಜಮುಖಿ ಕಾರ್ಯಕ್ರಮಗಳಾದ ಮೆಚ್ಚಿ ಅತ್ಯುತ್ತಮ…



