ಭಂಡಿಗಡಿ, ಕಮ್ಮರಡಿಯಲ್ಲಿ ಕಾಂಗ್ರೆಸ್ ಪ್ರಚಾರ!
– ಸಚಿವ ಜಾರ್ಜ್, ಶಾಸಕ ರಾಜೇಗೌಡ ಮತ ಬೇಟೆ
– ಕಾಂಗ್ರೆಸ್ ಗೆಲ್ಲಿಸಿ ಬದುಕು ಉಳಿಸಿ ಎಂಬ ಅಭಿಯಾನ
NAMMUR EXPRESS NEWS
ಕೊಪ್ಪ: ಕೊಪ್ಪ ತಾಲೂಕು ಭಂಡಿಗಡಿ, ಕಮ್ಮರಡಿಯಲ್ಲಿ ಲೋಕ ಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಪರವಾಗಿ ಇಂಧನ ಸಚಿವ ಕೆ. ಜೆ. ಜಾರ್ಜ್, ಶಾಸಕರಾದ ರಾಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಅಂಶುಮಂತ್, ಕೊಪ್ಪ ಕಾಂಗ್ರೆಸ್ ಅಧ್ಯಕ್ಷರಾದ ಬಾಳೆಮನೆ ನಟರಾಜ ಸೇರಿದಂತೆ ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಚುನಾವಣಾ ಪ್ರಚಾರ ನಡೆಸಿದರು. ಹರಿಹರ ಪುರ ಹೋಬಳಿ ಅಧ್ಯಕ್ಷರಾದ ಮಿತ್ರ, ಗ್ಯಾರಂಟಿ ಯೋಜನೆ ಕೊಪ್ಪ ಅಧ್ಯಕ್ಷರಾದ ಶಶಿಕುಮಾರ್, ಇನೇಶ್, ವೇಣುಗೋಪಾಲ್, ಸಮರ್ಥ್, ಲಿಂಗಪ್ಪ ಗೌಡ, ಶ್ರೀಧರ್ ಅಂಬಳಿಕೆ, ಮಮತಾ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ನಾಯಕರು, ಕಾರ್ಯಕರ್ತರು ಹಾಜರಿದ್ದರು.
ಯುವ ಮುಖಂಡ ಪ್ರಶಾಂತ್ ಪ್ರಾಸ್ತವಿಕ ಮಾತನಾಡಿ, ದೇಶದ ರಾಜಕೀಯ ದಿಕ್ಕನ್ನು ಬದಲಾಯಿಸುವ ಚುನಾವಣೆ, ದೇಶದಲ್ಲಿ ಭಾವನೆ ಕೆರಳಿಸಿ ಚುನಾವಣೆ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಗೆದ್ದರೆ ದೇಶದಲ್ಲಿ ನೆಮ್ಮದಿ ಸಾಧ್ಯ ಎಂದರು. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷ. ಹಾಗಾಗಿ ಕಾಂಗ್ರೆಸ್ ಬೆಂಬಲಿಸಬೇಕೆಂದರು. ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಳೆಮನೆ ನಟರಾಜ್ ಮಾತನಾಡಿ, ಪಕ್ಷದ ಪರವಾಗಿ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದಿಂದ ಜನರ ಬದುಕಿಗೆ ಭದ್ರತೆ: ರಾಜೇಗೌಡ
ಶಾಸಕ ಶೃಂಗೇರಿ ರಾಜೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷ ದೇಶದಲ್ಲಿ ಜನರ ಬದುಕಿಗೆ ಭದ್ರತೆ ನೀಡುತ್ತಿದೆ. ಬಿಜೆಪಿ ಸರ್ಕಾರ ಸುಳ್ಳು ಹೇಳಿ ಜನರ ಭಾವನೆ ಕೆರಳಿಸಿ ರಾಜಕೀಯ ಮಾಡುತ್ತಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಗ್ಯಾರಂಟಿ ಜನರ ಬದುಕು ಹಸನಗೊಳಿಸಿದೆ. ಮಲೆನಾಡ ಜನರ ಬದುಕಿನ ಭೂ ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದು ಆರೋಪಿದರು. ನಾವು ಬಗರ್ ಹುಕುಂ ಹಕ್ಕು ಪತ್ರ ಕೊಡಿಸುಸುತ್ತೇವೆ. ಡೀಮ್ಡ್ ಅರಣ್ಯ ಯೋಜನೆ ಬಿಜೆಪಿ ಸರ್ಕಾರದ ಕೆಟ್ಟ ನಿರ್ಧಾರ. ಅದನ್ನು ನಾವು ತಡೆಹಿಡಿದು ತಿದ್ದು ಪಡಿ ಮಾಡುತ್ತೇವೆ. ಮಳೆಬಾಡಿಗರ ಬದುಕು ಹಸನ ಮಾಡುವುದು ಕಾಂಗ್ರೆಸ್ ಪಕ್ಷದಿಂದ್ ಮಾತ್ರ ಸಾಧ್ಯ.
ಕಮ್ಮರಡಿಯಲ್ಲಿ ಜಾರ್ಜ್ ಭಾಷಣ – ಕಮ್ಮರಡಿಯಲ್ಲಿ ಕಾಂಗ್ರೆಸ್ ಮತ ಬೇಟೆ
ಕಮ್ಮರಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರವಾಗಿ ಮತ ಯಾಚನೆ ಮಾಡಿದರು. ಶ್ರೀ ರಾಮನ ಮೇಲೆ ನಮಗೆಲ್ಲರಿಗೂ ಗೌರವವಿದೆ ಅದನ್ನ ಅಧಿಕಾರಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು. ಶಿವಮೊಗ್ಗ ಲೋಕ ಸಭಾ ಕ್ಷೇತ್ರದಲ್ಲಿ ಗೀತಾ ಶಿವರಾಜಕುಮಾರ್ ಮತ್ತು ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯ ಪ್ರಕಾಶ್ ಹೆಗಡೆ ಇಬ್ಬರೂ ಗೆದ್ದೇ ಗೆಲ್ಲುತ್ತಾರೆ. ನಿಮ್ಮೆಲ್ಲರ ಮತ ಕಾಂಗ್ರೆಸ್ ಪಕ್ಷಕ್ಕೆ ಇರಲಿ ಎಂದರು.
ಕಾಂಗ್ರೆಸ್ ಗೆಲ್ಲಿಸ್ತಾರೆ ಜನ: ಮಿತ್ರ
ಹರಿಹರ ಪುರ ಹೋಬಳಿ ಸೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಶ್ರಮಿಸುತ್ತಿರುವ ಯುವ ನಾಯಕ ಹರಿಹರ ಪುರ ಹೋಬಳಿ ಅಧ್ಯಕ್ಷರಾದ ಮಿತ್ರ ನಮ್ಮೂರ್ ಎಕ್ಸ್ ಪ್ರೆಸ್ ಜತೆ ಮಾತನಾಡಿ, ಈ ಬಾರಿ ಉಡುಪಿ ಚಿಕ್ಕಮಗಳೂರು ಲೋಕ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ. ಜನ ಬದುಕಿಗೆ ದಾರಿ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಮನವಿ ಮಾಡಿದರು.