ಹೊದಲದಲ್ಲಿ ಚಿರತೆ ಕಾಟ: ಬೋನು ಇಟ್ಟು ಚಿರತೆ ಸೆರೆಗೆ ಪ್ಲಾನ್!
– ತೀರ್ಥಹಳ್ಳಿ ತಾಲೂಕು ಹೊದಲ ಸುತ್ತಮುತ್ತ ಚಿರತೆ ಹಾವಳಿ
– ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವರದಿಗೆ ಅರಣ್ಯ ಇಲಾಖೆ ಸ್ಪಂದನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹೊದಲ ಭಾಗದಲ್ಲಿ ಇದೀಗ ಚಿರತೆ ಹಾಗೂ ಹುಲಿಗಳ ಕಾಟ ಹೆಚ್ಚಾಗಿದ್ದು, ಪ್ರತಿನಿತ್ಯ ಮನೆ ಬಳಿಯೇ ಹುಲಿ ಚಿರತೆಗಳು ಕಾಣಿಸುತ್ತಿದ್ದು ಗ್ರಾಮಸ್ತರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಬಗ್ಗೆ ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವರದಿ ಮಾಡಿತ್ತು. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೋನು ಇಟ್ಟಿದ್ದಾರೆ. ಅಲ್ಲದೆ ಚಿರತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೊದಲ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಚಿರತೆ ಆಗಮನದಿಂದ ಸಾರ್ವಜನಿಕರಿಗೆ ಮತ್ತು ಪ್ರಾಣಿಗಳಿಗೆ ತೊಂದರೆಯಾಗಿದ್ದ ವಿಚಾರವನ್ನು ನಮ್ಮೂರ್ ಎಕ್ಸ್ ಪ್ರೆಸ್ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿತ್ತು.
ಬೋನ್ ಇಟ್ಟ ಅಧಿಕಾರಿಗಳು!
ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಹಿಡಿಯುವ ಬೋನ್ ಅನ್ನು ಹೊದಲದಲ್ಲಿ ಇಟ್ಟಿದ್ದು ನಿಗಾ ಇಟ್ಟಿದ್ದಾರೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲವೆಂದೂ ಹಾಗೂ ಎಚ್ಚರಿಕೆ ವಹಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮನೆ ಸಮೀಪವೇ ಬರುತ್ತೆ ಚಿರತೆ!
ಚಿರತೆಗಳು ಮನೆ ಮತ್ತು ಮನೆಯ ಸಮೀಪ ಓಡಾಡುತ್ತಿರುವುದು ಆತಂಕವನ್ನು ಸೃಷ್ಟಿಸಿದೆ. ಇನ್ನು ಮನೆಯ ಬಳಿಯ ಕೊಟ್ಟಿಗೆಗೆ ಬಂದು ದನ ಕರುಗಳನ್ನು ಹಿಡಿಯುತ್ತಿದೆ. ನಾಯಿಗಳ ಮೇಲೆ ಕೂಡ ದಾಳಿ ಮಾಡಲಾಗಿದೆ. ಹೀಗಾಗಿ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದರು.