ಆಗುಂಬೆ ಬ್ಯಾಂಕಿನಲ್ಲಿ ಗ್ರಾಹಕರ ಸ್ಪಂದನೆ ಇಲ್ಲ.!
– ತೀರ್ಥಹಳ್ಳಿ ತಾಲೂಕಿನ ಅನೇಕ ರಾಷ್ಟ್ರೀಕೃತ ಬ್ಯಾಂಕುಗಳ ನಿರ್ಲಕ್ಷ್ಯ: ಉನ್ನತ ಅಧಿಕಾರಿಗಳು ಏನ್ ಮಾಡ್ತಾರೆ?
– ರೈತರು, ಬಡಜನರು, ಗ್ರಾಹಕರ ಪರದಾಟ
NAMMUR EXPRESS NEWS: ವಿಶೇಷ ವರದಿ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಬಹುತೇಕ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಹಾಗೂ ಗ್ರಾಹಕರ ಕಡೆಗಣನೆ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ಪ್ರತಿ ಬ್ಯಾಂಕಿನಲ್ಲೂ ಕೂಡ ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಥವಾ ಗ್ರಾಹಕರ ಸೇವೆ ನೀಡುವಲ್ಲಿ ಸಿಬ್ಬಂದಿ ನಿರ್ಲಕ್ಷ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆಗುಂಬೆ ಬ್ಯಾಂಕಲ್ಲಿ ಜನರಿಗೆ ತೊಂದರೆ
ಆಗುಂಬೆಯ ರಾಷ್ಟ್ರೀಕೃತ ಬ್ಯಾಂಕ್ ಒಂದರ ಬಗ್ಗೆ ಈಗ ಭಾರಿ ಜನಾಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಮ್ಯಾನೇಜರ್ ಕಳೆದ ಎರಡು ತಿಂಗಳಿನಿಂದ ಬ್ಯಾಂಕಿನಲ್ಲಿ ಇರುವುದಿಲ್ಲ. ಇಲ್ಲಿರುವ ಎರಡು ಸಿಬ್ಬಂದಿಗೆ ಕೆಲಸ ಮಾಡಲು ಆಗುತ್ತಿಲ್ಲ. ಇದರಿಂದ ಗ್ರಾಹಕರಿಗೆ ಪಿಂಚಣಿ, ಸಾಲ, ಅಥವಾ ಸರ್ಕಾರಿ ಸೇವೆಯಲ್ಲಿ ಅತ್ಯಂತ ತೊಂದರೆಯಾಗಿದೆ. ಇದರಿಂದಾಗಿ ನೂರಾರು ಮಂದಿ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಉನ್ನತ ಅಧಿಕಾರಿಗಳು ಗಮನ ವಹಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಇತ್ತೀಚೆಗೆ ಕೆಲ ಬ್ಯಾಂಕುಗಳಲ್ಲಿ ಸಿಬ್ಬಂದಿ ಹಾಗೂ ಕೆಲವು ಉನ್ನತ ಅಧಿಕಾರಿಗಳು ಗ್ರಾಹಕರಿಗೆ ಸ್ಪಂದನೆಗೆ ಸಿಗುತ್ತಿಲ್ಲ. ಇದರಿಂದಾಗಿ ಎಲ್ಲಾ ಸರ್ಕಾರಿ ಯೋಜನೆಗಳು ಬ್ಯಾಂಕ್ ಮೂಲಕ ವರ್ಗಾವಣೆ ಆಗಬೇಕಿದೆ. ಇನ್ನು ಅನೇಕ ಯೋಜನೆಗಳು ಸಾಲದ ವ್ಯವಸ್ಥೆ ಸೇರಿದಂತೆ ಬಹುತೇಕ ಜನರ ಬದುಕು ಬ್ಯಾಂಕ್ ಗಳ ಮೇಲೆ ಅವಲಂಬಿತವಾಗಿದೆ. ಆದರೆ ಈ ನಿರ್ಲಕ್ಷದಿಂದಾಗಿ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಅನೇಕರ ಬದುಕು ಉರ ಬಟ್ಟೆಯಾಗುತ್ತಿದೆ. ಹೀಗಾಗಿ ಉನ್ನತ ಅಧಿಕಾರಿಗಳು ತಕ್ಷಣ ಗಮನಿಸಬೇಕು. ಪ್ರತಿ ಬ್ಯಾಂಕ್ ನಲ್ಲಿ ಸೇವಾ ಕೇಂದ್ರಗಳನ್ನು ತೆರೆಯಬೇಕು. ಜೊತೆಗೆ ಯಾವ ಬ್ಯಾಂಕ್ ನಲ್ಲಿ ಯಾವ ಸಿಬ್ಬಂದಿ ಕೆಲಸ ಮಾಡುತ್ತಿಲ್ಲ ಎಂಬ ಬಗ್ಗೆ ಬ್ಯಾಂಕ್ ನ ಉನ್ನತ ಅಧಿಕಾರಿಗಳು ಗಮನಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ಸರ್ಕಾರಕ್ಕೂ ಕೂಡ ಸಂಬಂಧಪಟ್ಟ ಇಲಾಖೆ ವರದಿ ನೀಡಬೇಕಿದೆ.
ತೀರ್ಥಹಳ್ಳಿಯಲ್ಲಿ ಬ್ಯಾಂಕ್ ವಂಚನೆ!
ತೀರ್ಥಹಳ್ಳಿ ತಾಲೂಕಿನ ಕೋಣಂದೂರು, ತೀರ್ಥಹಳ್ಳಿ, ಕನ್ನಂಗಿ ಭಾಗದಲ್ಲಿ ಕೆಲವು ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಹಗರಣಗಳು ಇದೀಗ ಗ್ರಾಹಕರ ತಲೆ ನೋವಿಗೆ ಕಾರಣವಾಗಿದೆ. ಇನ್ನು ಬ್ಯಾಂಕ್ ಕೂಡ ಎಷ್ಟು ಸೇಫ್ ಎಂಬ ಅನುಮಾನ ವ್ಯಕ್ತವಾಗಿದೆ. ಇತ್ತೀಚಿಗೆ ಅಷ್ಟೇ ಕೋಣಂದೂರು, ಯಡೂರು ಹಾಗೂ ತೀರ್ಥಹಳ್ಳಿ ಬ್ರಾಂಚ್ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಕೋಟಿಗಟ್ಟಲೆ ಹಣ ವಂಚನೆ ಆಗಿತ್ತು. ಇದರ ಮ್ಯಾನೇಜರ್ ಒಬ್ಬರ ಆನ್ಲೈನ್ ಗೇಮ್ ಚಟದಿಂದಾಗಿ ಹಣ ನಷ್ಟವಾಗಿದ್ದು ಗ್ರಾಹಕರು ತೊಂದರೆ ಅನುಭವಿಸಿದ್ದರು. ಅದಲ್ಲದೆ ಇತ್ತೀಚೆಗೆ ಕನ್ನಂಗಿ ಬ್ಯಾಂಕ್ ಒಂದರಲ್ಲಿ ಕೂಡ ಈ ತರಹದ ಘಟನೆ ವರದಿಯಾಗಿತ್ತು. ಜೊತೆಗೆ ಪ್ರತಿ ಬ್ಯಾಂಕ್ ಗಳಲ್ಲೂ ಕೂಡ ಸೇವಾ ಕೇಂದ್ರಗಳಲ್ಲಿ ಇರುವಂತಹ ಸಿಬ್ಬಂದಿಯ ನಿರ್ಲಕ್ಷ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿ ಇದೀಗ ಜನರ ಬದುಕಿಗೆ ತೊಂದರೆ ಆಗುತ್ತಿದೆ.