ಹುಬ್ಬಳ್ಳಿಯಲ್ಲಿ ಬೀದಿಗಳಿದ ಆಟೋ ಚಾಲಕರು!
– ಶಕ್ತಿ ಯೋಜನೆ ವಿರೋಧಿಸಿ ಆಟೋ ಚಾಲಕರ ಹೋರಾಟ
– ಕೊಪ್ಪಳದ ಕುಷ್ಟಗಿಯಲ್ಲಿ ಕಳ್ಳನಿಗೆ ಧರ್ಮದೇಟು!
NAMMUR EXPRESS NEWS
ಹುಬ್ಬಳ್ಳಿ: ರಾಜ್ಯ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಜಾರಿಗೆ ತಂದಿರುವ ಮೊದಲ ಯೋಜನೆ ಯೋಜನೆ ಎಂದರೆ ಅದು ಶಕ್ತಿ ಯೋಜನೆ, ಇದರ ಪ್ರಕಾರ ಮಹಿಳೆಯರು ರಾಜ್ಯದ ಒಳಗಡೆ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಇದರಿಂದಾಗಿ ಖಾಸಗಿ ವಾಹನಗಳಿಗೆ ಬಾಡಿಗೆ ಇಲ್ಲದಂತಾಗಿದ್ದು,ಇದನ್ನು ಇದನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಆಟೋ ಚಾಲಕರು ಒಂದು ದಿನದ ಪ್ರತಿಭಟನೆ ನಡೆಸಿದರು. ನಗರದ ಹೃದಯ ಭಾಗವಾದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸೇರಿದ ಆಟೋ ಚಾಲಕರ ಸಂಘದ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ತಮಗೆ ದುಡಿಮೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಮನವಿ ಸಲ್ಲಿಸಿ ತಮ್ಮ ಅಳಲನ್ನು ತೋಡಿಕೊಂಡರು. ತಮಗೂ ಸಹ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. ಆಟೋ ಚಾಲಕರು ಪ್ರತಿಭಟನೆಯಿಂದಾಗಿ ಆಟೋಗಳನ್ನು ಸಂಪೂರ್ಣವಾಗಿ ತಗಿತಗೊಳಿಸಲಾಗಿತ್ತು ಇದರಿಂದಾಗಿ ಆಸ್ಪತ್ರೆಗೆ ತೆರಳುವ ರೋಗಿಗಳು ಹೊರ ಜಿಲ್ಲೆಗಳಿಂದ ಆಗಮಿಸಿದ ಜನರು ಪರದಾಡಬೇಕಾಯಿತು.
ಕಳ್ಳನಿಗೆ ಬಿತ್ತು ಧರ್ಮದೇಟು
ಕಳ್ಳನೊಬ್ಬ ಮನೆಗಳವು ನಡೆಸಿ ಪರಾರಿಯಾಗುವ ವೇಳೆ ಗ್ರಾಮಸ್ಥರಿಗೆ ಸಿಕ್ಕಿಬಿದ್ದು ಧರ್ಮದೇಟು ತಿಂದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ಹುಲಗೇರಾ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಹುಲಗೇರಾ ಗ್ರಾಮದ ರೈತ ಶರಣಪ್ಪ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ. ಈ ವೇಳೆ ಅವರ ಮನೆಯ ಸದಸ್ಯರು ಆ ದಿನ ಮನೆಯ ಕೆಳ ಅಂತಸ್ತಿಗೆ ಬೀಗ ಹಾಕಿ ಮೇಲಂತಸ್ತಿಗೆ ತೆರಳಿ ಮಲಗಿದ್ದರು. ಮಧ್ಯರಾತ್ರಿಯ ಸುಮಾರಿಗೆ ಮನೆಯ ಬೀಗವನ್ನು ಯಾರೋ ಮುರಿಯುತ್ತಿರುವ ಶಬ್ಧ ಕೇಳಿ ಎಚ್ಚರಗೊಂಡಿದ್ದಾರೆ. ಕಿಟಕಿಯಿಂದ ನೋಡಿದಾಗ ಮನೆಯ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಕೂಡಲೇ ಎಚ್ಚೆತ್ತುಕೊಂಡ ಮನೆಯ ಸದಸ್ಯರು ಉಪಾಯವಾಗಿ ಕಳ್ಳನನ್ನು ಹಿಡಿದಿದ್ದಾರೆ. ನಂತರ ಕಳ್ಳನಿಗೆ ಧರ್ಮದೇಟು ನೀಡಿ ಹನುಮ ಸಾಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!
HOW TO APPLY : NEET-UG COUNSELLING 2023